ಆ್ಯಪ್ನಗರ

ರಚಿತಾ ರಾಮ್-ಪ್ರಿಯಾಂಕಾ ಉಪೇಂದ್ರ ಮುನಿಸು: ಏನಿದು ವಿವಾದ?

ಉಪೇಂದ್ರ ಪ್ರಸಿದ್ದ ನಟ ಹಾಗೂ ನಿರ್ದೇಶಕ. ಅವರ ಬಗ್ಗೆ ಮಾತನಾಡುವಾಗ ಆಕೆ ಜಾಗ್ರತೆಯಿಂದ ಇರಬೇಕು. ರಚಿತಾ ರಾಮ್ ತಮ್ಮ ಸಂದರ್ಶನದಲ್ಲಿ ಕೇವಲ ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂಬ ಬಗ್ಗೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ.

Vijaya Karnataka Web 12 Jun 2019, 12:04 pm
ಈ ಶುಕ್ರವಾರ, ಅಂದರೆ ಜೂನ್ 14, 2019ರಂದು ಆರ್ ಚಂದ್ರು ನಿರ್ದೇಶನ, ಉಪೇಂದ್ರ ನಾಯಕತ್ವದ 'ಐ ಲವ್ ಯೂ' ಕರ್ನಾಟಕ ಮತ್ತು ಆಂದ್ರದಲ್ಲಿ ಬರೋಬ್ಬರಿ 100 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಈ ಚಿತ್ರದ 'ಮಾತನಾಡಿ ಮಾಯವಾದೆ..' ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ತುಂಬಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
Vijaya Karnataka Web rachita


ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಗರಂ ಆಗಿದ್ದಾರೆ ಎನ್ನಲಾಗಿದೆ. "ಹಾಡಿನಲ್ಲಿರುವ ಹಸಿಬಿಸಿ ದೃಶ್ಯಗಳಿಂದಾಗಿ ಕೆಟ್ಟ ಭಾವನೆ ಬರುತ್ತಿದೆ. ಜೊತೆಗೆ, ರಚಿತಾ ರಾಮ್ ಅನಗತ್ಯವಾಗಿ ಉಪೇಂದ್ರ ಹೆಸರನ್ನು ಎಳೆದು ತರುತ್ತಿದ್ದಾರೆ. ಪ್ರತಿ ಸಂದರ್ಶನಲ್ಲೂ ಅವರು ಉಪೇಂದ್ರ ಹೆಸರನ್ನು ಮಧ್ಯಕ್ಕೆ ತರುತ್ತಿದ್ದಾರೆ. ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬ ಬಗ್ಗೆ ರಚಿತಾ ಹೇಳಿಕೊಳ್ಳಲಿ. ಅದನ್ನು ಬಿಟ್ಟು ಎಲ್ಲದಕ್ಕೂ ಉಪೇಂದ್ರ ಅವರ ಹೆಸರನ್ನು ಏಕೆ ಹೇಳಬೇಕು. ಆಕೆಯೇನು ಸಿನಿಮಾ ಇಂಡಸ್ಟ್ರಿಗೆ ಹೊಸಬರಲ್ಲ, ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ" ಎಂದು ಪ್ರಿಯಾಂಕಾ ಗರಂ ಆಗಿದ್ದಾರೆ.

"ಕಥೆ ಬಗ್ಗೆ ನಾನು ಕೇಳಿದ್ದೆ. ಇದೊಂದು ಕೌಟುಂಬಿಕ ಕಥಾವಸ್ತು ಎಂದು ಹೇಳಿದ್ದಾರೆ. ಆದರೆ ಸಿನಿಮಾದಲ್ಲಿ ಈ ಹಾಡು ಇರುವ ಬಗ್ಗೆ ನನಗೆ ಐಡಿಯಾ ಇರಲಿಲ್ಲ. ಟ್ರೇಲರ್ ನಲ್ಲಿ ಹಾಡನ್ನು ನೋಡುವವರೆಗೂ ನನಗೆ ಈ ಸಾಂಗ್ ಬಗ್ಗೆ ತಿಳಿದೇ ಇರಲಿಲ್ಲ. ಈ ಮೊದಲಿನ ಸಂದರ್ಶನಗಳಲ್ಲಿ ರಚಿತಾ ಈ ಹಾಡಿನ ಬಗ್ಗೆ ಸಂತಸದಿಂದ ಮಾತನಾಡಿದ್ದರು. ಉಪೇಂದ್ರ ಜೊತೆ ನಾನು ಕೂಡ ಈ ಹಾಡಿನ ಬಗ್ಗೆ ವಿಚಾರಿಸಿದ್ದೆ. ಅದು ಸಿನಿಮಾದ ಒಂದು ಭಾಗ ಎಂದು ಹೇಳಿದ್ದರು. ಆದರೆ ರಚಿತಾ ಪದೇ ಪದೇ ಆ ಹಾಡನ್ನು ಉಪೇಂದ್ರ ನಿರ್ದೇಶಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರು ಹೇಳುತ್ತಿಲ್ಲ ಏಕೆ?" ಎಂದು ಪ್ರಶ್ನಿಸಿದ್ದಾರೆ.

ಉಪೇಂದ್ರ ಪ್ರಸಿದ್ದ ನಟ ಹಾಗೂ ನಿರ್ದೇಶಕ. ಅವರ ಬಗ್ಗೆ ಮಾತನಾಡುವಾಗ ಆಕೆ ಜಾಗ್ರತೆಯಿಂದ ಇರಬೇಕು. ರಚಿತಾ ರಾಮ್ ತಮ್ಮ ಸಂದರ್ಶನದಲ್ಲಿ ಕೇವಲ ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂಬ ಬಗ್ಗೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ. ಆದರೆ ರಚಿತಾ ಕೇವಲ ಹಾಡೊಂದರ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಹಾಡಿನ ಬಗ್ಗೆ ಆಕೆಗೆ ಅಸಹನೆಯಿದ್ದಿದ್ದರೆ ಆ ಸಾಂಗ್ ಮಾಡಲು ಒಪ್ಪಬಾರದಿತ್ತು.

ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಉಪೇಂದ್ರ ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ. ಹಾಡಿನಲ್ಲಿ ಎಂತಹ ದೃಶ್ಯಗಳಿವೆ ಎಂಬುದನ್ನು ನೋಡಲು ಸಿನಿಮಾ ರಿಲೀಸ್ ಆಗುವ ವರೆಗೂ ಕಾಯಬೇಕಿದೆ. ಐ ಲವ್ ಯೂ ಸಿನಿಮಾಗಾಗಿ ನಾನು ಸಹ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೇನೆ. ಚಿತ್ರದ ಮೂಹೂರ್ತ, ಟ್ರೈಲರ್ ಬಿಡುಗಡೆ ಸಮಾರಂಭಕ್ಕೂ ನಿರ್ದೇಶಕ ಚಂದ್ರು ನನ್ನನ್ನು ಆಹ್ವಾನಿಸಿರಲಿಲ್ಲ" ಎಂದು ಪ್ರಿಯಾಂಕಾ ಉಪೇಂದ್ರ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಪ್ರಿಯಾಂಕಾ ಮಾತಿಗೆ ಉತ್ತರಿಸಿರುವ ರಚಿತಾ ರಾಮ್ "ನಾನು ಎಲ್ಲಿಯೂ ಉಪೇಂದ್ರ ಈ ಸಾಂಗ್ ನಿರ್ದೇಶನ ಮಾಡಿದ್ದಾರೆ ಎಂದಿಲ್ಲ. ಈ ಹಾಡು ಶೂಟ್ ಆಗುವಾಗ ಅಲ್ಲಿ ಇದ್ದಿದ್ದು ನಾನು, ಉಪೇಂದ್ರ ಮತ್ತು ಕ್ಯಾಮರಾಮನ್ ಮಾತ್ರ. ಏಕೆಂದರೆ, ನನಗೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕೆ ನಾನೇ ಬೇರೆ ಯಾರೂ ಅಲ್ಲಿ ಇರಬಾರದು ಎಂದಿದ್ದೆ. ನನ್ನ ಕೋರಿಕೆಯಂತೆ ಆ ಹಾಡು ಶೂಟ್ ಆಗುವಾಗ ಅಲ್ಲಿ ನಾವು ಮೂರು ಮಂದಿ ಮಾತ್ರ ಇದ್ದೆವು. ಹೀಗಾಗಿ ಆ ಹಾಡು ಉಪೇಂದ್ರ ಡೈರೆಕ್ಟ್ ಮಾಡಿದಂತಿತ್ತು ಎಂದಿದ್ದೇನೆಯೇ ಹೊರತೂ ಅವರೇ ಆ ಸಾಂಗ್ ಡೈರೆಕ್ಟ್‌ ಮಾಡಿದ್ದು ಎಂದಿಲ್ಲ" ಎಂದಿದ್ದಾರೆ. ಇನ್ನು ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌