ಆ್ಯಪ್ನಗರ

ಐ ಲವ್ ಯು ಅರ್ಧಶತಕ ಸಂಭ್ರಮ: ರಚಿತಾ ರಾಮ್ ಯಾಕೆ ಬರಲಿಲ್ಲ?

ರಚಿತಾ ರಾಮ್ ನಾಯಕಿಯಾಗಿ ನಟಿಸಿರುವ 'ಐ ಲವ್‌ ಯು' ಚಿತ್ರವು ಇದೀಗ ಅರ್ಧ ಶತಕ ಭಾರಿಸಿದೆ. ಈ ಕಾರ್ಯಕ್ರಮಕ್ಕೆ ಉಪೇಂದ್ರ, ಸೋನು ಗೌಡ, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಇಡೀ ಚಿತ್ರತಂಡ ಅಲ್ಲಿ ಹಾಜರಿತ್ತು. ಆದರೆ ನಾಯಕಿ ರಚಿತಾ ರಾಮ್ ಮಾತ್ರ ಬಂದಿಲ್ಲ. ಈ 'ಸಕ್ಸಸ್ ಮೀಟ್‌'ಗೆ ಬಾರದೇ ಮತ್ತೊಮ್ಮೆ ರಚಿತಾ ರಾಮ್ ಸುದ್ದಿಯಾಗಿದ್ದಾರೆ.

Vijaya Karnataka Web 3 Aug 2019, 6:22 pm
ಇತ್ತೀಚೆಗೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ನಟಿ ರಚಿತಾ ರಾಮ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿಯಾಗಿ ನಟಿಸಿದ್ದ 'ಐ ಲವ್ ಯು' ಚಿತ್ರದ ಬಳಿಕ ರಚಿತಾ ರಾಮ್ ಅವರ ಬಗ್ಗೆ ಭಾರೀ ಸುದ್ದಿಗಳು ಹರಿದಾಡುತ್ತಿವೆ. ಇದೀಗ, ಐ ಲವ್ ಯು ಚಿತ್ರದ '50ನೇ ದಿನ'ದ ಯಶಸ್ಸಿನ ಸಂಭ್ರಮಕ್ಕೂ ರಚಿತಾ ರಾಮ್ ಗೈರಾಗಿದ್ದಾರೆ. ಅಲ್ಲಿಗೆ, ಐ ಲವ್‌ ಯೂ ಚಿತ್ರತಂಡಕ್ಕೂ ಆ ಚಿತ್ರದ ನಾಯಕಿ ರಚಿತಾ ರಾಮ್ ಅವರಿಗೂ ಸಂಬಂಧ ಹದಗೆಟ್ಟಿದೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.
Vijaya Karnataka Web rachita0308


ರಚಿತಾ ರಾಮ್ ನಾಯಕಿಯಾಗಿ ನಟಿಸಿರುವ 'ಐ ಲವ್‌ ಯು' ಚಿತ್ರವು ಇದೀಗ ಅರ್ಧ ಶತಕ ಭಾರಿಸಿದೆ. ಉಪೇಂದ್ರ ನಾಯಕತ್ವದ ಈ ಚಿತ್ರದಲ್ಲಿ ರಚಿತಾ ರಾಮ್ ಮೊದಲ ಬಾರಿಗೆ ಬೋಲ್ಡ್‌ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಹಾಡಿಗೆ ರಚಿತಾ ಕಾಣಿಸಿಕೊಂಡ ರೀತಿಗೆ ಸ್ವತಃ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರಂತೆ. ಅಷ್ಟೇ ಅಲ್ಲ, ರಚಿತಾ ರಾಮ್ ಅವರಿಗೆ 'ನಿಮ್ಮನ್ನು ಇಂಥ ಪಾತ್ರದಲ್ಲಿ ನೋಡಲು ನಮ್ಮಿಂದ ಸಾಧ್ಯವಿಲ್ಲ' ಎಂಬ ಮೆಸೇಜ್ ಸಹ ಕೊಟ್ಟಿದ್ದಾರಂತೆ.

ಈ ಬೆಳವಣಿಗೆ ಬಳಿಕ ನಟಿ ರಚಿತಾ ರಾಮ್ ಅವರು "ನಾನು ಇನ್ಮುಂದೆ ಇಂಥ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಷ್ಟು ಬೋಲ್ಡ್ ಆಗಿ ನಾನು ಯಾವತ್ತೂ ನಟಿಸುವುದಿಲ್ಲ. ಬೋಲ್ಡ್ ಪಾತ್ರದಲ್ಲಿ ನಾನು ಕಾಣಿಸಿಕೊಂಡ ಮೊದಲ ಮತ್ತು ಕೊನೆಯ ಸಿನಿಮಾ 'ಐ ಲವ್ ಯು' ಎಂದಿದ್ದಾರೆ ರಚಿತಾ. ಅಷ್ಟೇ ಅಲ್ಲ, ಇದೀಗ ಈ ಚಿತ್ರದ 50ನೇ ದಿನದ ಸಂಭ್ರಮಕ್ಕೆ ಸಹ ನಟಿ ರಚಿತಾ ರಾಮ್ ಬಂದಿಲ್ಲ. ಈ ಮೂಲಕ ರಚಿತಾ ಚಿತ್ರತಂಡಕ್ಕೆ ಸ್ಟ್ರಾಂಗ್ ಮೆಸೇಜ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ 'ಐ ಲವ್ ಯು' ಚಿತ್ರತಂಡವು ಈ ಚಿತ್ರವು 50 ದಿನಗಳನ್ನು ಪೂರೈಸಿದ್ದಕ್ಕೆ 'ಸಕ್ಸಸ್ ಮೀಟ್' ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಉಪೇಂದ್ರ, ಸೋನು ಗೌಡ, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಇಡೀ ಚಿತ್ರತಂಡ ಅಲ್ಲಿ ಹಾಜರಿತ್ತು. ಆದರೆ ನಾಯಕಿ ರಚಿತಾ ರಾಮ್ ಮಾತ್ರ ಬಂದಿಲ್ಲ. ಅಷ್ಟೇ ಅಲ್ಲ, ತಾವು ಈ ಚಿತ್ರದಲ್ಲಿ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಬಾರದಿತ್ತು ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಚಿತ್ರದ ಅರ್ಧ ಶತಕ ಸಂಭ್ರಮಕ್ಕೂ ಬಾರದೇ ನಟಿ ರಚಿತಾ ರಾಮ್ ಅವರು 'ಐ ಲವ್ ಯು' ಚಿತ್ರತಂಡದ ಕೋಪಕ್ಕೆ ಕಾರಣರಾಗಿದ್ದಾರೆ ಎನ್ನಬಹುದು. ಚಿತ್ರದ ಪ್ರೆಸ್‌ ಮೀಟ್‌ನಲ್ಲಿ ರಚಿತಾ ಗೈರಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ನಿರ್ದೇಶಕ ಆರ್ ಚಂದ್ರು ಅವರು 'ನೂರನೇ ದಿನ'ದ ಸಂಭ್ರಮಕ್ಕೆ ಬರುತ್ತಾರೆ ಎಂದು ಹೇಳುವ ಮೂಲಕ ಚಿತ್ರತಂಡದ ಗೌರವ ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ, ಚಿತ್ರತಂಡದ ಯಾರೊಬ್ಬರೂ ಸಹ ರಚಿತಾ ಗೈರಾಗಿರುವ ಬಗ್ಗೆ ಸೂಕ್ತ ಕಾರಣ ನೀಡುವ ಗೋಜಿಗೇ ಹೋಗಿಲ್ಲ. ಒಟ್ಟಿನಲ್ಲಿ, 'ಐ ಲವ್ ಯೂ' ಚಿತ್ರತಂಡದ 'ಸಕ್ಸಸ್ ಮೀಟ್‌'ಗೆ ಬಾರದೇ ಮತ್ತೊಮ್ಮೆ ರಚಿತಾ ರಾಮ್ ಸುದ್ದಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌