ಆ್ಯಪ್ನಗರ

Bhairadevi Movie: ಶೂಟಿಂಗ್‌ನಲ್ಲಿ ಬಿದ್ದು ಏಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ 'ಬೈರಾದೇವಿ' ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ ಬಿದ್ದು ಏಟು ಮಾಡಿಕೊಂಡಿದ್ದಾರೆ. 'ಭೈರಾದೇವಿ' ಚಿತ್ರದಲ್ಲಿ ರಾಧಿಕಾ 'ಅಘೋರಿ' ಪಾತ್ರ ಮಾಡುತ್ತಿದ್ದು ಗೋರಿ ಮೇಲಿಂದ ಕೆಳಗಿಳಿಯುವಾಗ ಆಯ ತಪ್ಪಿ ಬಿದ್ದು ಕೆಳಗುರುಳಿ ಸ್ಪೈನಲ್ ಕಾರ್ಡ್‌ಗೆ ಏಟು ಮಾಡಿಕೊಂಡಿದ್ದಾರೆ.

Vijaya Karnataka Web 10 Feb 2019, 9:22 am
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ 'ಬೈರಾದೇವಿ' ಎಂಬ ಬಿಗ್ ಬಜೆಟ್ ಚಿತ್ರಕ್ಕೆ ದೊಡ್ಡ ಆಪತ್ತು ಎದುರಾಗಿದೆ. ಶೂಟಿಂಗ್ ನಡೆಯುತ್ತಿರುವಾಗ ನಾಯಕಿ ನಟಿ ರಾಧಿಕಾ ಬಿದ್ದು ಏಟು ಮಾಡಿಕೊಂಡಿದ್ದಾರೆ. 'ಭೈರಾದೇವಿ' ಚಿತ್ರದಲ್ಲಿ ರಾಧಿಕಾ 'ಅಘೋರಿ' ಪಾತ್ರ ಮಾಡುತ್ತಿದ್ದು ಗೋರಿ ಮೇಲಿಂದ ಕೆಳಗಿಳಿಯುವಾಗ ಆಯ ತಪ್ಪಿ ಬಿದ್ದು ಕೆಳಗುರುಳಿ ಸ್ಪೈನಲ್ ಕಾರ್ಡ್‌ಗೆ ಏಟು ಮಾಡಿಕೊಂಡಿದ್ದಾರೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದು ಈಗ ರಾಧಿಕಾ ಓಡಾಡಲಾಗದ ಪರಿಸ್ಥಿತಿ ತಲುಪಿದ್ದಾರೆ.
Vijaya Karnataka Web radhika09


"ಬೆಂಗಳೂರಿನ ಶಾಂತಿನಗರದ ಬಳಿ ಭೈರಾದೇವಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನಾಯಕಿ ಪಾತ್ರಧಾರಿ ರಾಧಿಕಾ ಕುಮಾರಸ್ವಾಮಿ ಅಘೋರಿ ಪಾತ್ರದಲ್ಲಿ ನಟಿಸುತ್ತಿದ್ದು ಗೋರಿಯ ಮೇಲೆ ಹತ್ತಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಕೆಳಗಿಳಿಯುವಾಗ ಆದ ಸ್ವಲ್ಪ ಅಡಚಣೆಯಿಂದ ರಾಧಿಕಾ ಆಯತಪ್ಪಿದ್ದು ಕೆಳಗೆ ಬಿದ್ದುಬಿಟ್ಟಿದ್ದಾರೆ. ತಕ್ಷಣವೇ ಅವರಿಗೆ ವೈದ್ಯಕೀಯ ಉಪಚಾರ ನಡೆಸಲಾಗಿದೆ. ಅವರನ್ನು ಪರೀಕ್ಷಿಸಿ ವೈದ್ಯರು 'ಸ್ಪೈನ್' ಭಾಗಕ್ಕೆ ಪೆಟ್ಟುಬಿದ್ದಿದ್ದು ಒಂದು ತಿಂಗಳು ವಿಶ್ರಾಂತಿ ಬೇಕು ಎಂದಿದ್ದಾರೆ" ಎಂದು ಭೈರಾದೇವಿ ಚಿತ್ರತಂಡ ಹೇಳಿದೆ.

ಅಂದಹಾಗೆ, ಈ ಬಿಗ್ ಬಜೆಟ್ 'ಭೈರಾದೇವಿ' ಚಿತ್ರವನ್ನು 'ಶಮಿಕಾ ಎಂಟರ್‌ಪ್ರೈಸಸ್' ಬ್ಯಾನರಿ ಅಡಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಖಳ ನಟ ರವಿಶಂಕರ್ ಹಾಗೂ ನಟ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು 'ಆರ್‌ಎಕ್ಸ್‌ ಸೂರಿ ' ಚಿತ್ರ ನಿರ್ದೇಶಿಸಿದ್ದ 'ಶ್ರೀಜಯ್' ಭೈರಾದೇವಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನೂ ಸಾಕಷ್ಟು ಭಾಗ ಶೂಟಿಂಗ್ ಬಾಕಿ ಇದ್ದು ಚಿತ್ರದ ಬಿಡುಗಡೆಗೆ ಸ್ವಲ್ಪ ಕಾಲ ಕಾಯಬೇಕಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌