ಟಾಲಿವುಡ್ ನಿರ್ಮಾಪಕ ನೀಡಿದ ಆಫರ್ ರಿಜೆಕ್ಟ್ ಮಾಡಿದ ರಶ್ಮಿಕಾ ಮಂದಣ್ಣ! ಎನಿದು ವಿಚಾರ?
ರಶ್ಮಿಕಾ ಮಂದಣ್ಣ ಸದ್ಯ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬ್ಯುಸಿ ಆಗಿರುವ ನಟಿ. ಮಹೇಶ್ ಬಾಬು, ಅಲ್ಲು ಅರ್ಜುನ್ ಜತೆ ನಟಿಸುತ್ತಿರುವ ಈ ಕೊಡಗಿನ ಬೆಡಗಿ ಈಗ ತೆಲುಗಿನ ದೊಡ್ಡ ನಿರ್ಮಾಪಕರೊಬ್ಬರು ನೀಡಿದ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ! ಅಷ್ಟಕ್ಕೂ ಆ ಆಫರ್ ಏನು?
Vijaya Karnataka Web 17 Oct 2019, 3:29 pm
ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವುದುರಿಂದ ನಿರ್ದೇಶಕ/ನಿರ್ಮಾಪಕರು ಅವರ ಹಿಂದೆ ಬಿದ್ದಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಿರ್ಮಾಪಕರೊಬ್ಬರು ರಶ್ಮಿಕಾಗೆ ಒಂದು ಆಫರ್ ನೀಡಿದ್ದರು. ಅದಕ್ಕೆ ರಶ್ಮಿಕಾ ಒಪ್ಪಿಲ್ಲ. ಅಷ್ಟಕ್ಕೂ ಆ ಆಫರ್ ಏನು? ಆ ನಿರ್ಮಾಪಕರು ಯಾರು? ಇಲ್ಲಿದೆ ಉತ್ತರ.
ರಶ್ಮಿಕಾ ಮಂದಣ್ಣ 'ಲವ್' ಮಾಡುತ್ತಿರುವ ಅಮೆರಿಕಾದ ಪೋರ!
ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದ ಶೂಟಿಂಗ್ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಅದರ ಜತೆಗೆ ನಿತಿನ್ ನಟನೆಯ 'ಭೀಷ್ಮ' ಚಿತ್ರಕ್ಕೂ ಅವರೇ ಹೀರೋಯಿನ್. ಇತ್ತ ತಮಿಳು, ಕನ್ನಡದಲ್ಲೂ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ ಈ ನಟಿ. ಇದೀಗ ತೆಲುಗಿನ ಖ್ಯಾತ ನಿರ್ಮಾಪಕ 'ದಿಲ್' ರಾಜು ನಿರ್ಮಾಣ ಮಾಡಲಿರುವ ಮುಂದಿನ ಸಿನಿಮಾದಲ್ಲಿ ನಾಯಕಿಯನ್ನಾಗಿ ರಶ್ಮಿಕಾ ಅವರನ್ನು ಆಯ್ಕೆ ಮಾಡಬೇಕು ಎಂದು ಯೋಚಿಸಿದ್ದರು. ಅದಕ್ಕಾಗಿ ಒಂದು ಬಾರಿ ಕಥೆಯನ್ನು ಹೇಳಿದ್ದರಂತೆ ರಶ್ಮಿಕಾ.
ದೇವರಕೊಂಡ ಜತೆ ಡೇಟಿಂಗ್ ಇಲ್ಲ, ಕನ್ನಡವನ್ನೂ ಮರೆತಿಲ್ಲ ಎಂದ ರಶ್ಮಿಕಾ
ಆದರೆ, ಕಥೆ ಕೇಳಿದ ಮೇಲೆ ರಶ್ಮಿಕಾ 'ನೋ' ಎಂದಿದ್ದಾರಂತೆ ಎಂಬ ಮಾತು ಕೇಳಿಬಂದಿದೆ. ಅಂದಹಾಗೆ, ಈ ಸಿನಿಮಾಗೆ ಹೀರೋ ಆಗಿ ನಾಗ ಚೈತನ್ಯ ನಟಿಸುತ್ತಿದ್ದಾರೆ. ದಿಲ್ ರಾಜು ಈಗಾಗಲೇ ನಟಿ ಸಮಂತಾಗಾಗಿ 96 ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಈಗ ಅವರ ಪತಿ ನಾಗ ಚೈತನ್ಯ ನಾಯಕತ್ವದಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಆ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಆಗಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತು..
ಡಿಯರ್ ಕಾಮ್ರೆಡ್ಗೆ ಸಾಯಿ ಪಲ್ಲವಿ ಬದಲು ರಶ್ಮಿಕಾ ಬಂದಿದ್ದು ಹೇಗೆ ಗೊತ್ತೇ?
ಸದ್ಯ ಈ ಸಿನಿಮಾವನ್ನು ರಶ್ಮಿಕಾ ರಿಜೆಕ್ಟ್ ಮಾಡಿರುವುದರಿಂದ ನಾಗ ಚೈತನ್ಯಗೆ ಸೂಕ್ತವಾಗುವಂತಹ ಹೊಸ ನಟಿಗಾಗಿ ನಿರ್ಮಾಪಕರು ಶೋಧ ಆರಂಭಿಸಿದ್ದಾರಂತೆ. ಒಟ್ಟಿನಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡುವಷ್ಟರ ಮಟ್ಟಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿರುವುದು ಖುಷಿಯ ವಿಷಯವೇ ಸರಿ ಎಂಬುದು ಅಭಿಮಾನಿಗಳ ಮಾತು. ಸದ್ಯ ಕನ್ನಡದ 'ಪೊಗರು' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದರಲ್ಲಿ ಅವರಿಗೆ ಲೆಕ್ಚರರ್ ಪಾತ್ರ. ಸದ್ಯ ಕನ್ನಡದಲ್ಲಿ ಮಾತ್ರ ತಯಾರಾಗಿದ್ದ ಈ ಸಿನಿಮಾವನ್ನು ಈಗ ತೆಲುಗಿನಲ್ಲೂ ತೆರೆಕಾಣಿಸುವ ಉದ್ದೇಶವನ್ನು ನಿರ್ಮಾಪಕರು ಇಟ್ಟುಕೊಂಡಿದ್ದಾರೆ. ಧ್ರುವ ಸರ್ಜಾ ಈ ಚಿತ್ರದ ಹೀರೋ.
ರಶ್ಮಿಕಾ ಮಂದಣ್ಣ 'ಲವ್' ಮಾಡುತ್ತಿರುವ ಅಮೆರಿಕಾದ ಪೋರ!
ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದ ಶೂಟಿಂಗ್ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಅದರ ಜತೆಗೆ ನಿತಿನ್ ನಟನೆಯ 'ಭೀಷ್ಮ' ಚಿತ್ರಕ್ಕೂ ಅವರೇ ಹೀರೋಯಿನ್. ಇತ್ತ ತಮಿಳು, ಕನ್ನಡದಲ್ಲೂ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ ಈ ನಟಿ. ಇದೀಗ ತೆಲುಗಿನ ಖ್ಯಾತ ನಿರ್ಮಾಪಕ 'ದಿಲ್' ರಾಜು ನಿರ್ಮಾಣ ಮಾಡಲಿರುವ ಮುಂದಿನ ಸಿನಿಮಾದಲ್ಲಿ ನಾಯಕಿಯನ್ನಾಗಿ ರಶ್ಮಿಕಾ ಅವರನ್ನು ಆಯ್ಕೆ ಮಾಡಬೇಕು ಎಂದು ಯೋಚಿಸಿದ್ದರು. ಅದಕ್ಕಾಗಿ ಒಂದು ಬಾರಿ ಕಥೆಯನ್ನು ಹೇಳಿದ್ದರಂತೆ ರಶ್ಮಿಕಾ.
ದೇವರಕೊಂಡ ಜತೆ ಡೇಟಿಂಗ್ ಇಲ್ಲ, ಕನ್ನಡವನ್ನೂ ಮರೆತಿಲ್ಲ ಎಂದ ರಶ್ಮಿಕಾ
ಆದರೆ, ಕಥೆ ಕೇಳಿದ ಮೇಲೆ ರಶ್ಮಿಕಾ 'ನೋ' ಎಂದಿದ್ದಾರಂತೆ ಎಂಬ ಮಾತು ಕೇಳಿಬಂದಿದೆ. ಅಂದಹಾಗೆ, ಈ ಸಿನಿಮಾಗೆ ಹೀರೋ ಆಗಿ ನಾಗ ಚೈತನ್ಯ ನಟಿಸುತ್ತಿದ್ದಾರೆ. ದಿಲ್ ರಾಜು ಈಗಾಗಲೇ ನಟಿ ಸಮಂತಾಗಾಗಿ 96 ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಈಗ ಅವರ ಪತಿ ನಾಗ ಚೈತನ್ಯ ನಾಯಕತ್ವದಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಆ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಆಗಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತು..
ಡಿಯರ್ ಕಾಮ್ರೆಡ್ಗೆ ಸಾಯಿ ಪಲ್ಲವಿ ಬದಲು ರಶ್ಮಿಕಾ ಬಂದಿದ್ದು ಹೇಗೆ ಗೊತ್ತೇ?
ಸದ್ಯ ಈ ಸಿನಿಮಾವನ್ನು ರಶ್ಮಿಕಾ ರಿಜೆಕ್ಟ್ ಮಾಡಿರುವುದರಿಂದ ನಾಗ ಚೈತನ್ಯಗೆ ಸೂಕ್ತವಾಗುವಂತಹ ಹೊಸ ನಟಿಗಾಗಿ ನಿರ್ಮಾಪಕರು ಶೋಧ ಆರಂಭಿಸಿದ್ದಾರಂತೆ. ಒಟ್ಟಿನಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ರಿಜೆಕ್ಟ್ ಮಾಡುವಷ್ಟರ ಮಟ್ಟಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿರುವುದು ಖುಷಿಯ ವಿಷಯವೇ ಸರಿ ಎಂಬುದು ಅಭಿಮಾನಿಗಳ ಮಾತು. ಸದ್ಯ ಕನ್ನಡದ 'ಪೊಗರು' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದರಲ್ಲಿ ಅವರಿಗೆ ಲೆಕ್ಚರರ್ ಪಾತ್ರ. ಸದ್ಯ ಕನ್ನಡದಲ್ಲಿ ಮಾತ್ರ ತಯಾರಾಗಿದ್ದ ಈ ಸಿನಿಮಾವನ್ನು ಈಗ ತೆಲುಗಿನಲ್ಲೂ ತೆರೆಕಾಣಿಸುವ ಉದ್ದೇಶವನ್ನು ನಿರ್ಮಾಪಕರು ಇಟ್ಟುಕೊಂಡಿದ್ದಾರೆ. ಧ್ರುವ ಸರ್ಜಾ ಈ ಚಿತ್ರದ ಹೀರೋ.