ಆ್ಯಪ್ನಗರ

ಭಾರೀ ಸಂಭಾವನೆಯನ್ನು ರಶ್ಮಿಕಾ ಸಮರ್ಥಿಸಿಕೊಂಡಿದ್ದು ಹೇಗೆ ಗೊತ್ತೇ?

ಮುಂಬರುವ 'ಡಿಯರ್ ಕಾಮ್ರೆಡ್' ಚಿತ್ರದ ಮೂಲಕ ಕನ್ನಡವೂ ಸೇರಿದಂತೆ ಸೌತ್ ಇಂಡಿಯಾದ 4 ಭಾಷೆಗಳಲ್ಲಿ ಮಿಂಚಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಈ ಚಿತ್ರದಲ್ಲಿ ರಶ್ಮಿಕಾ ಈ ಮೊದಲು ಸೂಪರ್ ಹಿಟ್ ದಾಖಲಿಸಿದ್ದ ತೆಲುಗಿನ 'ಗೀತ ಗೋವಿಂದಂ' ಚಿತ್ರದ ಸಹನಟ ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಂಡಿದ್ದಾರೆ. ಜುಲೈ 26ಕ್ಕೆ ರಿಲೀಸ್ ಆಗಲಿರುವ 'ಡಿಯರ್ ಕಾಮ್ರೆಡ್' ಚಿತ್ರದ ಪ್ರಮೋಶನ್‌ ಕಾರ್ಯದಲ್ಲಿ ಸದ್ಯಕ್ಕೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬ್ಯುಸಿಯಾಗಿದ್ದಾರೆ.

TIMESOFINDIA.COM 14 Jul 2019, 12:01 pm
ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸಂಭಾವನೆ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ತಮ್ಮ ಮುಂಬರುವ 'ಡಿಯರ್ ಕಾಮ್ರೆಡ್' ಚಿತ್ರದ ಪ್ರಮೋಶನ್‌ಗಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ರಶ್ಮಿಕಾ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸಂಭಾವನೆ ಬಗ್ಗೆ ಕೇಳಲಾದ ಪ್ರಶ್ನೆಗೆ ರಶ್ಮಿಕಾ ಬುದ್ಧಿವಂತಿಕೆ ಉಪಯೋಗಿಸಿ ಸ್ಪಷ್ಟ ಉತ್ತರ ನೀಡಿದ್ದಾರೆ.
Vijaya Karnataka Web rashmika1407


ಹೌದು, ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ. ಕನ್ನಡದ 'ಕಿರಿಕ್ ಪಾರ್ಟಿ' ಮೂಲಕ ಸಿನಿಮಾಲೋಕದ ಪ್ರಯಾಣ ಆರಂಭಿಸಿದ ರಶ್ಮಿಕಾ, ತೆಲುಗಿನ ಚಲೋ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟು ಗೀತ ಗೋವಿಂದಂ ಚಿತ್ರದ ಮೂಲಕ ಜನಪ್ರಿಯ ನಟಿಯಾಗಿ ಮೆರೆಯುತ್ತಿದ್ದಾರೆ. ಸೌತ್ ಇಂಡಿಯಾದ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿರುವ ರಶ್ಮಿಕಾ, ಇದೀಗ ತಮ್ಮ ಮುಂಬರುವ 'ಡಿಯರ್ ಕಾಮ್ರೆಡ್' ಚಿತ್ರದ ಪ್ರಚಾರಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಡಿಯರ್ ಕಾಮ್ರೆಡ್ ಚಿತ್ರದಲ್ಲಿ ರಶ್ಮಿಕಾ ಜೋಡಿಯಾಗಿ ಈ ಮೊದಲು 'ಗೀತ ಗೋವಿಂದಂ' ಸೂಪರ್ ಹಿಟ್ ಚಿತ್ರದ ಸಹನಟ ವಿಜಯ್ ದೇವರಕೊಂಡ ನಟಿಸಿದ್ದಾರೆ. ವಿಜಯ್-ರಶ್ಮಿಕಾ ಜೋಡಿ ಇದೀಗ ತಮ್ಮ 'ಡಿಯರ್ ಕಾಮ್ರೆಡ್' ಚಿತ್ರದ ಪ್ರಮೋಶನ್‌ಗಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪ್ರೆಸ್‌ ಮೀಟ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ರಶ್ಮಿಕಾಗೆ ಹೆಚ್ಚಿದ ಅವರ ಸಂಭಾವನೆ ಬಗ್ಗೆ ಕೇಳಲಾಯಿತು. ಈ ಬಗ್ಗೆ ಸೀರಿಯಸ್ಸಾಗಿ ಆದರೆ ಬುದ್ಧಿವಂತಿಕೆ ಉಪಯೋಗಿಸಿ ನಟಿ ರಶ್ಮಿಕಾ ಉತ್ತರಿಸಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಂಭಾವನೆ ಬಗ್ಗೆ ಮಾತನಾಡಿರುವ ರಶ್ಮಿಕಾ "ಹೌದು, ನಾನು ಸಿನಿಮಾ ಇಂಡಸ್ಟ್ರಿಗೆ ಬಂದು ಹಲವು ವರ್ಷಗಳಾಗಿವೆ. ಈ ಹಂತದಲ್ಲಿ ನಾನು ಸಂಭಾವನೆಯೂ ಸೇರಿದಂತೆ, ಎಲ್ಲ ವಿಭಾಗಗಳಲ್ಲೂ ಸಹಜವಾಗಿಯೇ ಬೆಳೆಯಬೇಕಿದೆ. ಹೀಗಾಗಿ 'ನ್ಯಾಚುರಲ್' ಎಂಬಂತೆ ನನ್ನ ಸಂಭಾವನೆಯೂ ಹೆಚ್ಚಾಗಿದೆ. ನೀವೂ ಸಹ ಬೆಳೆಯಬೇಕು ಎಂದುಕೊಂಡವರಾಗಿದ್ದರೆ ಹೆಚ್ಚಿನ ಸ್ಯಾಲರಿಯನ್ನು ಅಪೇಕ್ಷಿಸುತ್ತೀರಲ್ಲವೇ ಎಂದು ಪ್ರಶ್ನಿಸುವ ಮೂಲಕ ತಮಗೆ ಕೇಳಲಾದ ಪ್ರಶ್ನೆಗೆ ಸೂಕ್ತವಾದ ಇನ್ನೊಂದು ಪ್ರಶ್ನೆ ಕೇಳುವ ಮೂಲಕ ಜಾಣ ನಡೆ ಅನುಸರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌