ಆ್ಯಪ್ನಗರ

ಪ್ರಿನ್ಸ್ ಮಹೇಶ್ ಬಾಬು ಚಿತ್ರಕ್ಕೆ 'ನೋ' ಎಂದ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ಮಾತು ಕೇಳಿದರೆ, ತಕ್ಷಣಕ್ಕೆ ಆಕೆಗೆ ದುರಂಹಕಾರ ಎನಿಸಬಹುದು. ಆದರೆ, ಹಾಗಿಲ್ಲ ಅಂತಾರೆ ಅವರನ್ನು ಬಲ್ಲ ಅದೆಷ್ಟೋ ಮಂದಿ. ನಟಿ ಸಾಯಿ ಪಲ್ಲವಿ ತುಂಬಾ ಸೀದಾ ಸಾದಾ ನಟಿ. ಅವರಿಗೆ ಯಾವುದೇ ಹಮ್ಮು ಬಿಮ್ಮು ಇಲ್ಲ.

Vijaya Karnataka Web 10 Mar 2019, 12:59 pm
ಮಲಯಾಳಂ ಮೂಲದ, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರು ಮಹೇಶ್ ಬಾಬು ನಾಯಕತ್ವದ ಸಿನಿಮಾದಲ್ಲಿ ನಾಯಕಿಯಾಗಲು 'ನೋ' ಎಂದಿದ್ದಾರಂತೆ. ಟಾಲಿವುಡ್ ಸೂಪರ್ ಸ್ಟಾರ್ 'ಪ್ರಿನ್ಸ್' ಮಹೇಶ್ ಬಾಬು ಚಿತ್ರದಲ್ಲಿ ಹೀರೋಯಿನ್ ಪಟ್ಟ ಸಿಕ್ಕರೆ ಸಾಕು ಎಂದು ಅದೆಷ್ಟೋ ನಟಿಯರು ಕಾಯುತ್ತಾರೆ. ಅಂಥದ್ದರಲ್ಲಿ ನಟಿ ಸಾಯಿ ಪಲ್ಲವಿ ಅವರು ಆ ಛಾನ್ಸ್‌ಗೆ 'ರೆಡ್' ಸಿಗ್ನಲ್' ಕೊಟ್ಟಿದ್ದು ಯಾಕೆ ಗೊತ್ತೇ?
Vijaya Karnataka Web saipallvi10


ಹೇಳಿ ಕೇಳಿ, ನಟಿ ಸಾಯಿ ಪಲ್ಲವಿ ಪ್ರತಿಭಾವಂತೆ ಎಂದು ಖ್ಯಾತಿ ಪಡೆದವರು. ಮೇಲಾಗಿ ಒಳ್ಳೆ ಡಾನ್ಸರ್ ಕೂಡ. ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಾದರೂ, ನಟಿ ಸಾಯಿ ಪಲ್ಲವಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಎಂಬಷ್ಟು ಪ್ರತಿಭಾವಂತೆ ಅವರು. ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ನಟನೆ ವಿಷಯ ಬಿಟ್ಟರೆ, ಅವರು ಮಾತಿನಲ್ಲಿ ನೇರಾನೇರ. ನಡವಳಿಕೆಯೂ ಅಷ್ಟೇ ಅಂತಾರೆ ಉದ್ಯಮದ ಮಂದಿ. ತನಗೆ ಸರಿ ಅನ್ನಿಸಿದ್ದನ್ನು ಮಾತ್ರ ಮಾಡುವೆ ನಟಿ ಸಾಯಿ ಪಲ್ಲವಿ, ಮಹೇಶ್ ಬಾಬು ಜೋಡಿಯಾಗುವುದನ್ನು ಸ್ವತಃ ತಪ್ಪಿಸಿಕೊಂಡಿದ್ದು ತಿಳಿದು ಅನೇಕರ ಹುಬ್ಬು ಮೇಲೇರಿದ್ದು ಸುಳ್ಳಲ್ಲ.

ಆದರೆ, ಈ ಬಗ್ಗೆ ನಟಿ ಸಾಯಿಪಲ್ಲವಿ ಹೇಳಿದ್ದೇನು ಗೊತ್ತೇ? "ಸ್ಟಾರ್ ಹಿರೋಗಳ ಚಿತ್ರಗಳೆಂದರೆ ಅಲ್ಲಿ ಹಿರೋಯಿನ್‌ಗಳದ್ದು ಕೇವಲ ಗ್ಲಾಮರ್ ಗೊಂಬೆಯ ಪಾತ್ರವಷ್ಟೇ. ನಾಯಕಿಯರು ಕೆಲವೇ ಕೆಲವು ದೃಶ್ಯಗಳಲ್ಲಿ ಹಾಗೆ ಬಂದು ಹೀಗೆ ಹೋಗುತ್ತಾರೆ ಅಷ್ಟೇ. ಇನ್ನೂ ಹೆಚ್ಚೆಂದರೆ ಹೆಚ್ಚು ಡಾನ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾರಷ್ಟೇ. ಚಿತ್ರದಲ್ಲಿ ಗ್ಲಾಮರ್ ಬೇಕು ಎಂಬ ಕಾರಣಕ್ಕಾಗಿ ಮಾತ್ರ ದೊಡ್ಡ ದೊಡ್ಡ ಹೀರೋಗಳೊಂದಿಗೆ ತೆರೆಹಂಚಿಕೊಳ್ಳುವ ನಟಿಯರು ಎಷ್ಟೇ ಪ್ರತಿಭಾನ್ವಿತರಾದರೂ ಅವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ. ನನಗೆ ಅಂಥ ಅವಕಾಶ ಬೇಡ" ಎಂದಿದ್ದಾರಂತೆ ನಟಿ ಸಾಯಿ ಪಲ್ಲವಿ.

ನಟಿ ಸಾಯಿ ಪಲ್ಲವಿ ಮಾತು ಕೇಳಿದರೆ, ತಕ್ಷಣಕ್ಕೆ ಆಕೆಗೆ ದುರಂಹಕಾರ ಎನಿಸಬಹುದು. ಆದರೆ, ಹಾಗಿಲ್ಲ ಅಂತಾರೆ ಅವರನ್ನು ಬಲ್ಲ ಅದೆಷ್ಟೋ ಮಂದಿ. ನಟಿ ಸಾಯಿ ಪಲ್ಲವಿ ತುಂಬಾ ಸೀದಾ ಸಾದಾ ನಟಿ. ಅವರಿಗೆ ಯಾವುದೇ ಹಮ್ಮು ಬಿಮ್ಮು ಇಲ್ಲ. ಇತ್ತೀಚೆಗೆ ತಾವು ನಟಿಸಿದ ಚಿತ್ರ ಸೋತಾಗ, ಆಕೆ ಸಂಭಾವನೆಯನ್ನೂ ಕೂಡ ಪಡೆಯದೆ ನಿರ್ಮಾಪಕರಿಗೆ ಸಹಾಯ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಈಗ, ಮಹೇಶ್ ಬಾಬು ಅವರ 26ನೇ ಚಿತ್ರದಲ್ಲಿ ನಟಿಸುವ ಕುರಿತಂತೆ ಸಾಯಿಪಲ್ಲವಿಗೆ ನಿರ್ಮಾಪಕರು ಮನವಿ ಮಾಡಿದರೂ ಆಕೆ ಅದಕ್ಕೆ 'ನೋ' ಎಂದಿದ್ದಾರಂತೆ.

"ನನಗೆ ಆ ಚಿತ್ರದ ಕಥೆ ತುಂಬಾ ಇಷ್ಟವಾಗಿದೆ. ಆದರೆ ಅದರಲ್ಲಿ ನನ್ನ ಪಾತ್ರ ತೀರಾ ಕಡಿಮೆ. ಹೀಗಾಗಿ ನಾನು ಆ ಚಿತ್ರವನ್ನು ಒಪ್ಪಿಕೊಂಡಿಲ್ಲ ಅಷ್ಟೇ" ಎಂದಿದ್ದಾರಂತೆ ಸಾಯಿ ಪಲ್ಲವಿ. ಅವರು ಇಲ್ಲಿಯವರೆಗೂ ತಮ್ಮ ಪಾತ್ರಕ್ಕೂ ಮಹತ್ವ ಇರುವ ಪಾತ್ರಗಳನ್ನಷ್ಟೇ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಅದೆಷ್ಟೋ ಚಿತ್ರಗಳಲ್ಲಿ ಆಕೆ ಮೇಲ್ ಡಾಮಿನೆಟೆಡ್ ಆಗಿಯೇ ನಟಿಸಿದ್ದಾರೆ. ಸೋ, ಅದು ಅವರ ಇಷ್ಟ. ಅದಕ್ಕೆ ಯಾರೂ ಏನೂ ಹೇಳುವ ಹಾಗೆ ಇಲ್ಲ.ಆದರೆ, ಮಹೇಶ್ ಬಾಬು ಹೀರೋ ಎಂದಮೇಲೆ, ಸಹಜವಾಗಿಯೇ ಅದರಲ್ಲಿ ಅವರೇ ಹೈಲೈಟ್ ಆಗಲೇಬೇಕಲ್ಲವೇ? ಎನ್ನುತ್ತಿದೆ ಟಾಲಿವುಡ್.

ಸದ್ಯಕ್ಕೆ, ಮಹೇಶ್ ಬಾಬು ನಾಯಕತ್ವ, ದಿಲ್ ರಾಜು ನಿರ್ಮಾಣ ಹಾಗೂ ಅನಿಲ್ ಶಂಕರಾ ನಿರ್ದೇಶನದಲ್ಲಿ ಮೂಡಿ ಬರಲಿರುವ ಆ ಚಿತ್ರಕ್ಕೆ ಸೌತ್ ಇಂಡಿಯಾ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಪ್ರೋಚ್ ಮಾಡಲಾಗಿದೆಯಂತೆ. ರಶ್ಮಿಕಾ ಕಾಲ್‌ ಶೀಟ್‌ ಏನಾದರೂ ಮಿಸ್ ಆದರೆ, ಆ ಅವಕಾಶವನ್ನು ನಟಿ ಮಹ್ರಿನ್ ಕೌರ್ ಅವರು ಪಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌