ಆ್ಯಪ್ನಗರ

ಲವ್ ಮ್ಯಾರೇಜ್‌ಗೆ 'ಹಿತ'ವಾಗಿ ರೆಡಿಯಾದ ಹಾಗೇ ಸುಮ್ಮನೇ ಕಿರಣ್

'ಹಾಗೇ ಸುಮ್ಮನೆ' ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ 'ಒಂಥರಾ ಬಣ್ಣಗಳು' ಖ್ಯಾತಿಯ ನಟಿ, ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಅವರನ್ನು ಸದ್ಯವೇ ವಿವಾಹವಾಗಲಿದ್ದಾರೆ. ಸುಮಾರು ವರ್ಷಗಳಿಂದ ಅವರಿಬ್ಬರೂ ಪರಸ್ಪರ ಲವ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಷಯವನ್ನು ಅವರಿಬ್ಬರ ಕ್ಲೋಸ್ ಫ್ರಂಡ್ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

TIMESOFINDIA.COM 8 Feb 2019, 5:27 pm
ಬೆಳ್ಳಿತರೆ ಹಾಗೂ ಕಿರುತೆರೆ ನಟ, 'ಹಾಗೆ ಸುಮ್ಮನೇ' ಖ್ಯಾತಿಯ ಕಿರಣ್ ಶ್ರೀನಿವಾಸ್ ಮದುವೆಗೆ ರೆಡಿಯಾಗಿದ್ದಾರೆ. ನಟಿ ಹಾಗೂ ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಅವರ ಭಾವೀ ಪತ್ನಿ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಕಿರಣ್ ಶ್ರೀನಿವಾಸ್ ಹಾಗೂ ಹಿತಾ ಚಂದ್ರಶೇಖರ್ ಮದುವೆ ಆಗುತ್ತಿದ್ದಾರೆ ಎಂಬ ವಿಷಯವನ್ನು ಅವರಿಬ್ಬರ ಕ್ಲೋಸ್ ಫ್ರಂಡ್, ನಟಿ ಸೋನು ಗೌಡ ಸಾಮಾಜಿಕ ಮಾಧ್ಯಮಗಳ ಮೂಲಕ ಜಗಜ್ಜಾಹೀರು ಮಾಡಿದ್ದಾರೆ.
Vijaya Karnataka Web kiran_hita08


ಹೌದು, ಕಿರಣ್ ಹಾಗೂ ಹಿತಾ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 'ಒಂಥರಾ ಬಣ್ಣಗಳು' ಚಿತ್ರದಲ್ಲಿ ಕಿರಣ್ ಹಾಗೂ ಹಿತಾ ಒಟ್ಟಿಗೆ ನಟಿಸಿದ್ದು ನಂತರ 'ಲವ್‌'ನಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಸೋನು ಗೌಡ "ಒಂಥರಾ ಬಣ್ಣಗಳಲ್ಲಿ ಒಂಥರಾ ಲವ್" ಎಂದು ಬಣ್ಣಿಸಿ ಚೆಂದದ ಪೋಸ್ಟ್ ಮಾಡಿದ್ದಾರೆ. ತಮ್ಮ ಫ್ರಂಡ್ಸ್ ಮದುವೆಯ ಕ್ಷಣವನ್ನು ಖುಷಿಯಿಂದ ಎಂಜಾಯ್ ಮಾಡಲು ತಾವು ಕಾತರದಿಂದ ಕಾಯುತ್ತಿರುವುದಾಗಿಯೂ ಸೋನು ಗೌಡ ಹೇಳಿದ್ದಾರೆ.

2008ರಲ್ಲಿ 'ಹಾಗೇ ಸುಮ್ಮನೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಹ್ಯಾಂಡ್ ಸಮ್ ನಟ ಕಿರಣ್ ಶ್ರೀನಿವಾಸ್ ಮುಂದೆ ಎಂದೂ 'ಹಾಗೇ ಸುಮ್ಮನೇ' ಕುಳಿತಿಲ್ಲ. ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದ ಕಿರಣ್, ಹಿಂದಿ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. ಕಲರ್ಸ್ 24 ನಲ್ಲಿ ಮೂಡಿ ಬಂದಿರುವ 'ರಾಯ್ ಡಿಸೋಜಾ' ದಲ್ಲಿನ ಅವರ 'ದೇವ್' ಪಾತ್ರವು ಭಾರತದ ತುಂಬೆಲ್ಲ ಭಾರೀ ಮೆಚ್ಚುಗೆ ಗಳಿಸಿದೆ.

ಇತ್ತೀಚಿಗೆ ಜನಪ್ರಿಯ ವೆಬ್ ಸರಣಿಗೂ ಕಾಲಿಟ್ಟಿರುವ ಕಿರಣ್ ಈಗಷ್ಟೇ ಬ್ರೇಕಿಂಗ್ ನ್ಯೂಸ್ ಅಂಡ್ ಸಾಲ್ಟ್ ಸಿಟಿ'ದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಬಾಲಿವುಡ್‌ನ 'ಚಿತ್ರಕೂಟ್' ಸಿನಿಮಾ ಶೂಟಿಂಗ್‌ಗೆ ಕಿರಣ್ ಸಜ್ಜಾಗಿದ್ದಾರೆ.

ಒಂದಾದಮೇಲೆ ಇನ್ನೊಂದರಂತೆ ಸಾಕಷ್ಟು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ ಕಿರಣ್ ಶ್ರೀನಿವಾಸ್. ಬೆಂಗಳೂರು, ಮುಂಬೈ ನಡುವೆ ತಮ್ಮ ಕೆಲಸದ ಕಾರಣಕ್ಕೆ ಓಡಾಡಿಕೊಂಡಿರುವ ಕಿರಣ್ ಸದ್ಯ 'ಮೈಸೂರ್ ಮಸಾಲಾ' ಚಿತ್ರದ ಶೂಟಿಂಗ್ ಮುಗಿಸಿ ವೆಬ್ ಸಿರೀಸ್‌ಗಳ ನಟನೆಯಲ್ಲಿ ನಿರತರಾಗಿದ್ದಾರೆ. ಅವರ ನಟನೆಯ 'ಮೈಸೂರು ಮಸಾಲಾ' ಸದ್ಯವೇ ಬಿಡುಗಡೆಯಾಗಲಿದೆ.

ಅಚ್ಚಕನ್ನಡದ ನಟ ಕಿರಣ್ 'ಪ್ರೀತಿಯಿಂದ ರಮೇಶ್', 'ನಿರುತ್ತರ', 'ರಿಧಮ್', 'ಕಾಂಚನಾ', 'ಚಿರು', 'ಮುಗಿಲ ಮಲ್ಲಿಗೆಯೋ' ಹಾಗೂ 'ಒಂಥರಾ ಬಣ್ಣಗಳು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶನದ ಕನಸನ್ನೂ ಹೊತ್ತಿರುವ ಕಿರಣ್ ಸದ್ಯವೇ ಆ ನಿಟ್ಟಿನಲ್ಲಿ ತಮ್ಮ ಪ್ರಯಾಣ ಆರಂಭಿಸಿದರೂ ಆಶ್ಚರ್ಯವಿಲ್ಲ. ಒಂಥ ಕಿರಣ್ ಶ್ರೀನಿವಾಸ್ ಈಗ ಹಿತಾ ಅವರೊಂದಿಗೆ 'ಲವ್ ಮ್ಯಾರೇಜ್' ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಸಜ್ಜಾಗಿ ನಿಂತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌