ಆ್ಯಪ್ನಗರ

ಪತ್ರಿಕಾ ಮಿತ್ರರಿಗೆ ಮನವಿ ಮಾಡಿಕೊಂಡ ಸುಮಲತಾ ಅಂಬರೀಷ್

ನಟಿ ಸುಮಲತಾ ಅವರು, ಏಪ್ರಿಲ್‌ನಲ್ಲಿಈಗಾಗಲೇ ಘೋಷಣೆಯಾಗಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಈಗಾಗಲೇ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿಯವರು ಸ್ಪರ್ಧಿಸಲಿದ್ದು, ಸುಮಲತಾ ಅವರಿಗೆ ಸಾಕಷ್ಟು ಪೈಪೋಟಿ ಎದುರಾಗಿದೆ.

Vijaya Karnataka Web 17 Mar 2019, 2:08 pm
ನಟಿ, ರೆಬಲ್ ಸ್ಟಾರ್ ಅಂಬರೀಷ್ ಪತ್ನಿ ಹಾಗೂ ಲೋಕಸಭಾ ಚುನಾವಣಾ ಸ್ಪರ್ಧಿ ಸುಮಲತಾ ಅಂಬರೀಷ್ ಅವರು ಮಾಧ್ಯಮಗಳಿಗೆ ಪತ್ರ ಬರೆದು ತಮ್ಮ ರಾಜಕೀಯ ಪದಾರ್ಪಣೆಗೆ 'ಪತ್ರಿಕಾ ಮಿತ್ರರ' ಸಹಕಾರವನ್ನು ಕೋರಿದ್ದಾರೆ.
Vijaya Karnataka Web sumalatha1703


"ದಿನಾಂಕ 18-03-2019ರಂದು ಹೊಟೆಲ್ ರಡಿಸನ್ ಬ್ಲೂ ಏಟ್ರಿಯಾ ಚಾನ್ಸೆರಿ ಹಾಲ್‌ನಲ್ಲಿ ಸಮಯ 11-30ಕ್ಕೆ ಪತ್ರಿಕಾ ಮಿತ್ರರಾದ ನಿಮ್ಮೊಂದಿಗೆ ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಮಾತನಾಡಲು ಇಚ್ಛಿಸುತ್ತೇನೆ. ಈ ಸಂದರ್ಭದಲ್ಲಿ ತಮ್ಮ ಉಪಸ್ಥಿತಿ ಅಗತ್ಯವೆಂದು ಭಾವಿಸುತ್ತೇನೆ" ಎಂದು ಬರೆದ ಪ್ರೆಸ್ ನೋಟ್ ಕಳಿಸುವ ಮೂಲಕ ನಟಿ ಹಾಗೂ ಲೋಕಸಭಾ ಚುನಾವಣಾ ಸ್ಪರ್ಧಿ ಸುಮಲತಾ ಅಂಬರೀಷ್ ಅವರು ಪತ್ರಿಕಾ ಮಿತ್ರರಿಗೆ ಮನವಿ ಮಾಡಿಕೊಂಡಿದ್ದಾರೆ.

ನಟಿ ಸುಮಲತಾ ಅವರು, ಏಪ್ರಿಲ್‌ನಲ್ಲಿಈಗಾಗಲೇ ಘೋಷಣೆಯಾಗಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಈಗಾಗಲೇ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಅವರಿಗೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಾರಣ, ಜೆಡಿಎಸ್ ಭದ್ರಕೋಟೆ ಎನಿಸಿರುವ ಮಂಡ್ಯದಲ್ಲಿ, ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿಯವರು ಸ್ಪರ್ಧಿಸಲಿದ್ದು, ಸುಮಲತಾ ಅವರಿಗೆ ಸಾಕಷ್ಟು ಪೈಪೋಟಿ ಎದುರಾಗಿದೆ. ಆದರೆ, ಸುಮಲತಾ ಅಂಬರೀಷ್ ಅವರು ಯಾವುದೇ ಪೈಪೋಟಿಯನ್ನು ಎದುರಸಿಲು ಸಜ್ಜಾಗಿ ಚುನಾವಣಾ ಕಣಕ್ಕೆ ಧುಮುಕಲು ಸಿದ್ಧರಾಗಿ ನಿಂತಿದ್ದಾರೆ.

ರೆಬಲ್ ಸ್ಟಾರ್ ಅಂಬರೀಷ್ ಅವರು ಕೂಡ ಶಾಸಕ, ಸಂಸದ ಹಾಗೂ ಮಂತ್ರಿ ಪದವಿಯನ್ನು ಅಲಂಕರಿಸಿದ್ದರು ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ, ನಟಿ, ಅಂಬರೀಷ್ ಪತ್ನಿ ಸುಮಲತಾ ಅವರಿಗೆ ರಾಜಕೀಯ ಹೊಸದೇನೂ ಅಲ್ಲ. ರಾಜಕೀಯ ಪಟ್ಟುಗಳನ್ನು ಗಂಡನಿಂದಲೇ ಅವರು ಕರತಲಾಮಲಕ ಮಾಡಿಕೊಂಡಿದ್ದಾರೆ ಎನ್ನಬಹುದು. ಸುಮಲತಾ ಅವರಿಗೆ ನಟ ದರ್ಶನ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಬ್ಬರೂ ಸಂಪೂರ್ಣ ಬೆಂಬಲ ಕೊಟ್ಟು ನಿಂತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದ ಮಂಡ್ಯದಲ್ಲಿ ಚುನಾವಣೆಯ ಕಾವು ಎಲ್ಲಕ್ಕಿಂತಲೂ ತುಸು ಹೆಚ್ಚೇ ಕಾವೇರಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌