ಆ್ಯಪ್ನಗರ

ಮದುವೆ ಬಯಕೆ ಹೊರಹಾಕಿದ ಎವರ್‌ಗ್ರೀನ್ ಚೆಲುವೆ ತ್ರಿಷಾ ಕೃಷ್ಣನ್

ಸುದೀರ್ಘ ಸಮಯದ ಬಳಿಕ ಎವರ್‌ಗ್ರೀನ್ ಚೆಲುವೆ ತ್ರಿಷಾ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಇನ್‍ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ತನ್ನ ಮನಸಿನ ಮಾತನ್ನು ಹೊರಹಾಕಿದ್ದಾರೆ.

Vijaya Karnataka Web 21 Jan 2020, 6:58 pm

ಚೆನ್ನೈ ಬ್ಯೂಟಿ ತ್ರಿಷಾ ಕೃಷ್ಣನ್ ದಕ್ಷಿಣ ಚಿತ್ರೋದ್ಯಮದಲ್ಲಿ ಈಗಲೂ ಸಖತ್ ಬಿಝಿಯಾಗಿದ್ದಾರೆ. ತಮಿಳು, ಮಲಯಾಳಂ ಭಾಷೆಗಳಲ್ಲಿ ಸಾಲುಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ವೃತ್ತಿಪರವಾಗಿ ತಾನೇನು ಎಂಬುದನ್ನು ನಿರೂಪಿಸಿಕೊಂಡಿರುವ ತ್ರಿಷಾ ವೈಯಕ್ತಿಕ ಜೀವನ ಕಥೆ ಮಾತ್ರ ಅರ್ಧಕ್ಕೆ ನಿಂತಿದೆ.
Vijaya Karnataka Web ತ್ರಿಷಾ ಕೃಷ್ಣನ್


ಒಂದು ಕಾಲದಲ್ಲಿ ವರುಣ್ ಎಂಬ ಉದ್ಯಮಿಯೊಂದಿಗೆ ತ್ರಿಷಾ ಕೆಲಕಾಲ ಡೇಟಿಂಗ್ ಮಾಡಿದ್ದರು. ಅವರನ್ನೇ ವರಿಸಬೇಕೆಂದು ನಿರ್ಧರಿಸಿದ್ದರು. ಗುರು ಹಿರಿಯರನ್ನು ಒಪ್ಪಿಸಿ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥವೂ ಮಾಡಿಕೊಂಡಿತ್ತು ಈ ಜೋಡಿ. ಆ ಬಳಿಕ ಏನಾಯಿತೋ ಗೊತ್ತಿಲ್ಲ. ವರುಣ್ ಜೊತೆಗಿನ ಮದುವೆ ಮುರಿದುಬಿತ್ತು.

ಈ ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸಂಗತಿಯನ್ನು ತ್ರಿಷಾ ಬಹಿರಂಗಪಡಿಸಲಿಲ್ಲ. ಮದುವೆ ಬಳಿಕವೂ ಸಿನಿಮಾ ರಂಗದಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದು ವರುಣ್‌ಗೆ ಇಷ್ಟವಾಗಲಿಲ್ಲ. ಅದಕ್ಕೇ ಈ ಮದುವೆ ಕ್ಯಾನ್ಸಲ್ ಆಯಿತು ಎಂಬ ಮಾತುಗಳು ಕಾಲಿವುಡ್‌ನಲ್ಲಿ ಕೇಳಿಬಂದಿದ್ದವು.
ನಟಿ ತ್ರಿಷಾ ಮತ್ತು ನಟಿ ಚಾರ್ಮಿ ಕೌರ್ ಮದುವೆಗೆ ಪರಸ್ಪರ ಒಪ್ಪಿಗೆ!

ಕೆಲ ಸಮಯದ ಬಳಿಕ ಬಾಹುಬಲಿ ನಟ ರಾಣಾ ಜೊತೆಗೆ ಕಾಣಿಸಿಕೊಂಡರು ತ್ರಿಷಾ. ಇವರಿಬ್ಬರೂ ಚುಂಬಿಸಿಕೊಳ್ಳುತ್ತಿರುವ ಫೋಟೋಗಳನ್ನು ಸುಚಿ ಲೀಕ್ಸ್‌ನಲ್ಲಿ ಬಹಿರಂಗವಾಗಿತ್ತು. ತ್ರಿಷಾ ಜೊತೆಗೆ ಡೇಟಿಂಗ್ ಮಾಡಿದ್ದು ನಿಜ. ಆದರೆ ಇಬ್ಬರ ನಡುವಿನ ಸಂಬಂಧ ಉಳಿಯಲಿಲ್ಲ ಎಂದು ರಾಣಾ ಹೇಳಿಕೊಂಡಿದ್ದರು. ಇದೀಗ ತ್ರಿಷಾ ತನ್ನ ಮದುವೆ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳ ಜೊತೆಗೆ ಸ್ವಲ್ಪ ಹೊತ್ತು ಇನ್‍ಸ್ಟಾಗ್ರಾಮ್‌ನಲ್ಲಿ ಚಾಟಿಂಗ್ ಮಾಡಿದಾಗ ಈ ಸಂಗತಿ ತಿಳಿಸಿದರು.

ನಭಾ ನಟೇಶ್ ಮೈಮೇಲೆ ಬಿಯರ್ ಚೆಲ್ಲಿದ ರಾಮ್ ಗೋಪಾಲ್

ಅಭಿಮಾನಿಯೊಬ್ಬರು ಪ್ರಶ್ನಿಸುತ್ತಾ, "ನಿಮ್ಮ ಬಕೆಟ್ ಲಿಸ್ಟ್‌ನಲ್ಲಿ ಇರುವ ಒಂದು ಆಸೆಯನ್ನು ತಿಳಿಸಿ" ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ತ್ರಿಷಾ, "ಲಾಸ್ ವೆಗಾಸ್‌ನಲ್ಲಿ ಮದುವೆಯಾಗಬೇಕು ಎಂಬ ಆಸೆ ಇದೆ" ಎಂದಿದ್ದಾರೆ. ಆದರೆ ಮುಹೂರ್ತ ಯಾವಾಗ, ಹುಡುಗ ಯಾರು ಎಂಬಿತ್ಯಾದಿ ಬಗ್ಗೆ ಮಾತನಾಡುವ ಗೋಜಿಗೆ ಹೋಗಿಲ್ಲ ತ್ರಿಷಾ.

ಪವಿತ್ರ ಸ್ಥಳದಲ್ಲಿ ಚಾರ್ಮಿ ಕೌರ್ ತುಂಡುಡುಗೆ ಅವತಾರ

ಒಟ್ಟಾರೆ ತ್ರಿಷಾರ ಈ ಮಾತಿನ ಅರ್ಥ ಅವರಲ್ಲಿ ಮದುವೆ ಬಯಕೆ ಇನ್ನೂ ಇದೆ ಎಂಬುದು. ಸದ್ಯಕ್ಕೆ ಅವರ ಕೈಯಲ್ಲಿ ಹತ್ತು ಸಿನಿಮಾಗಳು ಇವೆ. ಅವುಗಳಲ್ಲಿ ಒಂದು ಮಲಯಾಳಂ ಆದರೆ ಎಂಟು ಸಿನಿಮಾಗಳು ತಮಿಳು. ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆಗೂ ಒಂದು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌