ಆ್ಯಪ್ನಗರ

ಪ್ರಭಾಸ್‌ಗೆ ಮಾತ್ರ ಐ ಲವ್ ಯೂ ಹೇಳುತ್ತೇನೆ ಎಂದ ನಟಿ

ಸಿಕ್ಕಂತಹ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುತ್ತಾ ಬಂದಿದ್ದಾರೆ. ನಾಯಕಿ, ಖಳನಟಿ, ಪೋಷಕ ತಾರೆ ಹೀಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಬಾಚಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದಾರೆ ವರಲಕ್ಷ್ಮಿ. ಈಗ ಕಾಲಿವುಡ್‌ನಲ್ಲಿ ಅತ್ಯಂತ ಬಿಝಿ ತಾರೆ ಎನ್ನಬಹುದು.

Vijaya Karnataka Web 20 Feb 2019, 6:51 pm
ತಾನು ಐ ಲವ್ ಯೂ ಹೇಳಬೇಕು ಎಂದುಕೊಂಡರೆ ಯಾರಿಗೆ ಹೇಳುತ್ತೇನೆ ಗೊತ್ತಾ ಎನ್ನುತ್ತಿದ್ದಾರೆ ನಟಿ ವರಲಕ್ಷ್ಮಿ ಶರತ್ ಕುಮಾರ್. ಈ ಬೆಡಗಿಯನ್ನು ಡೇರಿಂಗ್ ಅಂಡ್ ಡೈನಮಿಕ್ ನಟಿ ಎನ್ನಬಹುದು. ನಟಿಯಾಗಿಯೇ ಅಲ್ಲದೆ ನಿಜ ಜೀವನದಲ್ಲೂ ವರಲಕ್ಷ್ಮಿ ಬೋಲ್ಡ್ ವ್ಯಕ್ತಿತ್ವವುಳ್ಳವರು. ಯಾವುದೇ ಸಂಗತಿಯಾದರೂ ಕಡ್ಡಿ ಮುರಿದಂತೆ ಹೇಳುವುದು ಅವರ ಜಾಯಮಾನ. ಹೀರೋಯಿನ್ ಆಗಿ ಬೆಳ್ಳಿಪರದೆಗೆ ಪರಿಚಿತವಾದ ಇವರು, ಬಳಿಕ ಗ್ಲಾಮರ್ ಪಾತ್ರಗಳಿಗಾಗಿಯೇ ಎದುರು ನೋಡುತ್ತಾ ಕೂರಲಿಲ್ಲ.
Vijaya Karnataka Web varalakshmi


ಸಿಕ್ಕಂತಹ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುತ್ತಾ ಬಂದಿದ್ದಾರೆ. ನಾಯಕಿ, ಖಳನಟಿ, ಪೋಷಕ ತಾರೆ ಹೀಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಬಾಚಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದಾರೆ ವರಲಕ್ಷ್ಮಿ. ಈಗ ಕಾಲಿವುಡ್‌ನಲ್ಲಿ ಅತ್ಯಂತ ಬಿಝಿ ತಾರೆ ಎನ್ನಬಹುದು.

ಸಂಡೈಕೋಳಿ 2, ಸರ್ಕಾರ್ ದಂತಹ ಚಿತ್ರಗಳಲ್ಲಿ ಖಳ ಪಾತ್ರಗಳಲ್ಲಿ ಮಿಂಚಿದ ವರಲಕ್ಷ್ಮಿ ಶರತ್ ಕುಮಾರ್ ಗಾಸಿಪ್‌ಗಳಿಗೂ ಹೊರತಲ್ಲ. ಮುಖ್ಯವಾಗಿ ಇವರ ಹೆಸರು ನಟ ವಿಶಾಲ್ ಜತೆಗೆ ಇತ್ತೀಚೆಗೆ ಹೆಚ್ಚಾಗಿ ಕೇಳಿಬಂದಿತ್ತು. ಆದರೆ ವಿಶಾಲ್‌ಗೆ ಹೈದರಾಬಾದ್ ಮೂಲದ ಅನಿಷಾ ಎಂಬ ಯುವತಿ ಜತೆಗೆ ಮದುವೆ ಫಿಕ್ಸ್ ಆಗಿದ್ದು ಆ ಗಾಸಿಪ್‌ಗಳಿಗೆಲ್ಲಾ ಈಗ ಪೂರ್ಣವಿರಾಮ ಬಿದ್ದಿದೆ.

ಇದೀಗ ವರಲಕ್ಷ್ಮಿ ಬಣ್ಣದ ಲೋಕದಲ್ಲಿ ಇನ್ನೊಂದು ಸಂಚಲನೆ ಮೂಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತೆಲುಗು ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಎಂದರೆ ನನಗೆ ತುಂಬಾ ಇಷ್ಟ, ನಾನು ಯಾರಿಗಾದರೂ ಐ ಲವ್ ಯೂ ಹೇಳಬೇಕಾದರೆ ಅದು ಬಾಹುಬಲಿ ಪ್ರಭಾಸ್‌ಗೆ ಮಾತ್ರ ಎಂದು ಹೇಳುವ ಮೂಲಕ ಇನ್ನೊಂದಿಷ್ಟು ಗುಸುಗುಸು ಸುದ್ದಿಗೆ ಗ್ರಾಸವಾಗಿದ್ದಾರೆ. ಈ ರೀತಿಯ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುವುದು ವರಲಕ್ಷ್ಮಿ ಜಾಯಮಾನ ಬಿಡಿ ಎನ್ನುತ್ತಿದ್ದಾರೆ ಅವರನ್ನು ಬಲ್ಲವರು.

ಅಂದಹಾಗೆ ವರಲಕ್ಷ್ಮಿ ಶರತ್ ಕುಮಾರ್ ಕನ್ನಡದ ಮಾಣಿಕ್ಯ, ವಿಸ್ಮಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದಾದ ಬಳಿಕ ಅವರು ಮತ್ತೆ ಕನ್ನಡಕ್ಕೆ ಬರಲೇ ಇಲ್ಲ. ತಾರಾ ದಂಪತಿಗಳಾದ ರಾಧಿಕಾ ಮತ್ತು ಶರತ್ ಕುಮಾರ್ ಅವರ ಪುತ್ರಿ ವರಲಕ್ಷ್ಮಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌