ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ವಿವಾದಕ್ಕೊಳಗಾದ ವಿಜಯಶಾಂತಿ
ನಟಿ ವಿಜಯಶಾಂತಿ "ಮೋದಿ ಅವರ ಗುರಿ ನಿರಂಕುಶಮತಿ ಆಡಳಿತವಾದರೆ, ರಾಹುಲ್ ಗಾಂಧಿ ಪ್ರಜಾಜಡಳಿತದ ಪ್ರತೀಕವಾಗಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಧೋರಣೆಯ ಆಡಳಿತ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ" ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
Vijaya Karnataka Web 11 Mar 2019, 10:19 am
ಬಹುಭಾಷಾ ನಟಿ ವಿಜಯಶಾಂತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಹುದೊಡ್ಡ ಭಯೋತ್ಪಾದಕರಂತೆ ಕಾಣಿಸುತ್ತಾರೆ ಎಂದು ತೆಲಂಗಾಣ ಕಾಂಗ್ರೆಸ್ ನಾಯಕಿ ಮತ್ತು ಹಿರಿಯ ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ನಟಿ ವಿಜಯಶಾಂತಿ ಅವರು ತೆಲಂಗಾಣದ ಶಂಶಾಬಾದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ "ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಭೀತಿಯನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ನಡೆಯಿಂದ ತುಂಬಾ ಜನರು ಭಯೋತ್ಪಾದನನ್ನು ನೋಡುವ ರೀತಿಯಲ್ಲಿ ಮೋದಿ ಅವರನ್ನು ನೋಡಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣವೂ ಸೇರಿದಂತೆ, ಸಾಕಷ್ಟು ಕಡೆಗಳಿಂದ ವಿರೋಧ ವ್ಯಕ್ತವಾಗಿದೆ.
ನಟಿ ವಿಜಯಶಾಂತಿ "ಮೋದಿ ಅವರ ಗುರಿ ನಿರಂಕುಶಮತಿ ಆಡಳಿತವಾದರೆ, ರಾಹುಲ್ ಗಾಂಧಿ ಪ್ರಜಾಜಡಳಿತದ ಪ್ರತೀಕವಾಗಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಧೋರಣೆಯ ಆಡಳಿತ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ" ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ. ನಟಿ ವಿಜಯಶಾಂತಿಯವರ ಈ ಹೇಳಿಕೆಗೆ ಸುತ್ತಲೂ ಹತ್ತು ಕಡೆಗಳಿಂದ ವಿರೋಧ ವ್ಯಕ್ತವಾಗಿದ್ದು ನಟಿ ಈಗ ತಣ್ಣಗಾಗಿದ್ದಾರೆ ಎನ್ನಲಾಗಿದೆ.
"ಪ್ರಧಾನಿ ಯಾರೇ ಆಗಿರಲಿ, ಅವರನ್ನು ದೇಶದ ನಾಗರೀಕರೇ ಚುನಾವಣೆ ಮೂಲಕ ಆಯ್ಕೆ ಮಾಡಿರುತ್ತಾರೆ. ಅವರನ್ನೇನೂ ಯಾರೋ ಬೇರೆ ಗ್ರಹದಿಂದ ತಂದು ಇಲ್ಲಿ ಕೂರಿಸಿಲ್ಲ. ನಮ್ಮದೇ ಆಯ್ಕೆಯ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡಿ ನಟಿ ವಿಜಯಶಾಂತಿಯವರು ತಮ್ಮನ್ನೇ ತಾವು ಚಿಕ್ಕ ಮನಸ್ಸಿನ ವ್ಯಕ್ತಿ ಎಂದು ಸಾಬೀತು ಪಡಿಸಿಕೊಂಡಿದ್ದಾರೆ' ಎಂದು ಹಲವರು ನಟಿ ವಿಜಯಶಾಂತಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಕಾಂಗ್ರೆಸ್ಸಿಗರೂ ಕೂಡ ವಿಜಯಶಾಂತಿ ಅವರ ಹೇಳಿಕೆಯನ್ನು ಬೆಂಬಲಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ ಎಂದು ಹೇಳಲಾಗುತ್ತಿದೆ.
ನಟಿ ವಿಜಯಶಾಂತಿ ಅವರು ತೆಲಂಗಾಣದ ಶಂಶಾಬಾದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ "ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಭೀತಿಯನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ನಡೆಯಿಂದ ತುಂಬಾ ಜನರು ಭಯೋತ್ಪಾದನನ್ನು ನೋಡುವ ರೀತಿಯಲ್ಲಿ ಮೋದಿ ಅವರನ್ನು ನೋಡಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣವೂ ಸೇರಿದಂತೆ, ಸಾಕಷ್ಟು ಕಡೆಗಳಿಂದ ವಿರೋಧ ವ್ಯಕ್ತವಾಗಿದೆ.
ನಟಿ ವಿಜಯಶಾಂತಿ "ಮೋದಿ ಅವರ ಗುರಿ ನಿರಂಕುಶಮತಿ ಆಡಳಿತವಾದರೆ, ರಾಹುಲ್ ಗಾಂಧಿ ಪ್ರಜಾಜಡಳಿತದ ಪ್ರತೀಕವಾಗಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಧೋರಣೆಯ ಆಡಳಿತ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ" ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ. ನಟಿ ವಿಜಯಶಾಂತಿಯವರ ಈ ಹೇಳಿಕೆಗೆ ಸುತ್ತಲೂ ಹತ್ತು ಕಡೆಗಳಿಂದ ವಿರೋಧ ವ್ಯಕ್ತವಾಗಿದ್ದು ನಟಿ ಈಗ ತಣ್ಣಗಾಗಿದ್ದಾರೆ ಎನ್ನಲಾಗಿದೆ.
"ಪ್ರಧಾನಿ ಯಾರೇ ಆಗಿರಲಿ, ಅವರನ್ನು ದೇಶದ ನಾಗರೀಕರೇ ಚುನಾವಣೆ ಮೂಲಕ ಆಯ್ಕೆ ಮಾಡಿರುತ್ತಾರೆ. ಅವರನ್ನೇನೂ ಯಾರೋ ಬೇರೆ ಗ್ರಹದಿಂದ ತಂದು ಇಲ್ಲಿ ಕೂರಿಸಿಲ್ಲ. ನಮ್ಮದೇ ಆಯ್ಕೆಯ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡಿ ನಟಿ ವಿಜಯಶಾಂತಿಯವರು ತಮ್ಮನ್ನೇ ತಾವು ಚಿಕ್ಕ ಮನಸ್ಸಿನ ವ್ಯಕ್ತಿ ಎಂದು ಸಾಬೀತು ಪಡಿಸಿಕೊಂಡಿದ್ದಾರೆ' ಎಂದು ಹಲವರು ನಟಿ ವಿಜಯಶಾಂತಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಕಾಂಗ್ರೆಸ್ಸಿಗರೂ ಕೂಡ ವಿಜಯಶಾಂತಿ ಅವರ ಹೇಳಿಕೆಯನ್ನು ಬೆಂಬಲಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ ಎಂದು ಹೇಳಲಾಗುತ್ತಿದೆ.