ಆ್ಯಪ್ನಗರ

ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲಿರುವ ಆದಿ ಪಿನಿಸೆಟ್ಟಿ! ಇದ್ಯಾವ ಸಿನಿಮಾ? ಏನ್‌ ಕಥೆ?

ಕನ್ನಡಕ್ಕಿಂತಲೂ ಪರಭಾಷೆಯಲ್ಲಿಯೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹೆಚ್ಚು ಆಫರ್‌ಗಳು ಹರಿದು ಬರುತ್ತಿವೆ. ಅವರ ಸಿನಿಮಾ ಕುರಿತು ಹೊಸದೊಂದು ಮಾಹಿತಿ ಕೇಳಿಬರುತ್ತಿದ್ದು, ಸಿನಿಪ್ರಿಯರಲ್ಲಿ ಕೌತುಕ ಮೂಡಿಸಿದೆ.

Vijaya Karnataka Web 7 Jul 2020, 4:29 pm
ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. 'ಕಿರಿಕ್‌ ಪಾರ್ಟಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದ ಅವರು ಈಗ ಹೆಚ್ಚಾಗಿ ಪರಭಾಷೆಯ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಬಾಲಿವುಡ್‌ನಿಂದಲೂ ಅವರಿಗೆ ಆಫರ್‌ಗಳು ಬರುತ್ತಿವೆ. ರಶ್ಮಿಕಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡರೂ ಅದರ ಅಪ್‌ಡೇಟ್‌ಗಾಗಿ ಕಾತರರಿಂದ ಕಾದಿರುತ್ತಾರೆ ಅಭಿಮಾನಿಗಳು.
Vijaya Karnataka Web adhi pinisetty likely to play major role in rashmika mandanna allu arjun starrer pushpa movie
ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲಿರುವ ಆದಿ ಪಿನಿಸೆಟ್ಟಿ! ಇದ್ಯಾವ ಸಿನಿಮಾ? ಏನ್‌ ಕಥೆ?


2020ರ ಆರಂಭದಲ್ಲಿಯೇ ರಶ್ಮಿಕಾ ಸಿನಿಖಾತೆಗೆ ಎರಡು ಸೂಪರ್‌ ಹಿಟ್‌ಗಳು ಸೇರಿಕೊಂಡರು. ಮಹೇಶ್‌ ಬಾಬು ಜೊತೆ ನಟಿಸಿದ 'ಸರಿಲೇರು ನೀಕೆವ್ವರು' ಮತ್ತು ನಿತಿನ್‌ ಜೊತೆ ತೆರೆಹಂಚಿಕೊಂಡ 'ಭೀಷ್ಮ' ಸಿನಿಮಾಗಳಿಂದ ಅವರು ಮೈಲೇಜ್‌ ಹೆಚ್ಚಿಸಿಕೊಂಡರು. ಈಗ ಅಲ್ಲು ಅರ್ಜುನ್‌ ಜೊತೆಗಿನ 'ಪುಷ್ಪ' ಸಿನಿಮಾ ಸೆಟ್ಟೇರುವುದನ್ನು ಕಾಯುತ್ತಿದ್ದಾರೆ. ಲಾಕ್‌ಡೌನ್‌ ಇರುವುದರಿಂದ ಆ ಚಿತ್ರದ ಕೆಲಸಗಳು ವಿಳಂಬ ಆಗುತ್ತಿದೆ.

ಕೊರೊನಾ ವೈರಸ್‌ ಭೀತಿಯಿಂದಾಗಿ ಮನೆಯಲ್ಲೇ ಇರುವ ರಶ್ಮಿಕಾ ಮಂದಣ್ಣ 'ಪುಷ್ಪ' ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ 'ರಂಗಸ್ಥಲಂ' ಖ್ಯಾತಿಯ ನಿರ್ದೇಶಕ ಸುಕುಮಾರ್‌ ಆ್ಯಕ್ಷನ್‌-ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಪ್ರಕಾಶ್‌ ರೈ, ಜಗಪತಿ ಬಾಬು, ವಿಜಯ್‌ ಸೇತುಪತಿ ಮುಂತಾದವರು ಪ್ರಮುಖ ಪಾತ್ರ ಮಾಡಲಿದ್ದಾರೆ. ಇವರೆಲ್ಲರ ಜೊತೆಗೆ ನಟ ಆದಿ ಪಿನಿಸೆಟ್ಟಿ ಹೆಸರು ಸಹ ಕೇಳಿಬರುತ್ತಿದೆ.

also read: ಬಾಲ್ಯದ ಕ್ರಶ್ ಜೊತೆಗೆ ನಟಿಸಲಿದ್ದಾರಾ ನಟಿ ರಶ್ಮಿಕಾ ಮಂದಣ್ಣ?

ಹೀಗೊಂದು ಸುದ್ದಿ ಟಾಲಿವುಡ್‌ ಅಂಗಳದಿಂದ ಜೋರಾಗಿ ಕೇಳಿಬರುತ್ತಿದೆ. 'ಪುಷ್ಪ' ಚಿತ್ರತಂಡಕ್ಕೆ ಆದಿ ಪಿನಿಸೆಟ್ಟಿ ಎಂಟ್ರಿ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅಲ್ಲು ಅರ್ಜುನ್ ನಟಿಸಿದ್ದ 'ಸರೈನೋಡು' ಸಿನಿಮಾದಲ್ಲಿಯೂ ಆದಿ ಪಿನಿಸೆಟ್ಟಿ ಒಂದು ಪ್ರಮುಖ ಪಾತ್ರ ಮಾಡಿದ್ದರು. ಈಗ ಅವರಿಗೆ ಮತ್ತೊಮ್ಮೆ ಅಲ್ಲು ಅರ್ಜುನ್‌ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಚಿತ್ರತಂಡದ ಯಾರೊಬ್ಬರೂ ಇನ್ನೂ ಅಧಿಕೃವಾಗಿ ಕೇಳಿಕೆ ನೀಡಿಲ್ಲ.

also read: 'ಪುಷ್ಪ' ಚಿತ್ರಕ್ಕೆ ಮೊದಲ ಆಯ್ಕೆ ರಶ್ಮಿಕಾ ಅಲ್ಲ! ಇನ್ನೋರ್ವ ಸ್ಟಾರ್ ನಟಿ ಮೇಲೆ ಕಣ್ಣಿಟ್ಟಿತ್ತು ಚಿತ್ರತಂಡ!

ಈಗಾಗಲೇ ಬಿಡುಗಡೆ ಆಗಿರುವ ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್‌ ಸಖತ್‌ ರಗಡ್‌ ಆಗಿಯೇ ಪೋಸ್‌ ನೀಡಿದ್ದಾರೆ. ರಕ್ತಚಂದನದ ಕಳ್ಳ ಸಾಗಾಣಿಕೆ ಕುರಿತ ಸಿನಿಮಾ ಇದಾಗಿದ್ದು, ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ನಡೆಯಲಿದೆ. ಅಲ್ಲು ಅರ್ಜುನ್‌ಗೆ ಇಲ್ಲಿ ಪುಷ್ಪರಾಜ್ ಎಂಬ ಲಾರಿ ಡ್ರೈವರ್ ಪಾತ್ರ. ಅವರಿಗೆ ರಶ್ಮಿಕಾ ಮಂದಣ್ಣ ಜೋಡಿ. ಚಿತ್ತೂರು ಪ್ರಾಂತ್ಯದ ಹಳ್ಳಿ ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

also read: ನಟಿ ಕೀರ್ತಿ ಸುರೇಶ್‌ ಅವರನ್ನು ಮನಸಾರೆ ಹೊಗಳಿದ ರಶ್ಮಿಕಾ ಮಂದಣ್ಣ! ಇದಕ್ಕೆ ಕಾರಣವೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌