ಆ್ಯಪ್ನಗರ

ಮಹಿಳಾ ಪ್ರಧಾನ ಚಿತ್ರದಲ್ಲಿ ಅದಿತಿ

ಇತ್ತೀಚೆಗಷ್ಟೇ ನೀನಾಸಂ ಸತೀಶ್‌ ನಟನೆಯ ಚಿತ್ರದಲ್ಲಿ ಅದಿತಿ ನಟಿಸುತ್ತಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಈಗ ದಯಾಳ್‌ ಪದ್ಮನಾಭನ್‌ ನಿರ್ದೇಶನದ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅದಿತಿ ಫುಲ್‌ ಬಿಝಿಯಾಗಿದ್ದಾರೆ.

Vijaya Karnataka 26 Apr 2019, 5:00 am
ಕತೆ, ನಾಟಕಗಳನ್ನಾಧರಿಸಿ ಸಿನಿಮಾ ಮಾಡಲು ಹೆಚ್ಚು ಆಸಕ್ತಿ ತೋರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌ ವಿಭಿನ್ನ ಜಾನರ್‌ನ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ಈಗ ಮಹಿಳಾ ಪ್ರಧಾನ ಚಿತ್ರ 'ರಂಗನಾಯಕಿ' ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ವುಮೆನ್‌ ಎಂಪವರ್‌ಮೆಂಟ್‌ ಬಗ್ಗೆ ಸಿನಿಮಾ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಅದಿತಿ ಪ್ರಭುದೇವ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಹುಡುಗಿಯ ಪಾತ್ರದಲ್ಲಿ ನಟಿಸಲಿದ್ದಾರೆ.
Vijaya Karnataka Web aditi (1)


ನೈಜ ಘಟನೆಯ ಛಾಯೆಯೂ ಚಿತ್ರದಲ್ಲಿದೆ. ಅತ್ಯಾಚಾರಕ್ಕೊಳಗಾದ ಹುಡುಗಿಯ ಹೋರಾಟದ ಕತೆ ಚಿತ್ರದಲ್ಲಿದೆ. ಇದಕ್ಕೆ ಪತ್ರಕರ್ತೆಯೊಬ್ಬರು ಸ್ಫೂರ್ತಿ ಎಂದಿದ್ದಾರೆ ದಯಾಳ್‌. 'ನಿರ್ಭಯಾ ಅತ್ಯಾಚಾರ ಆದ ನಂತರ ಕೊಚ್ಚಿನ್‌ ಪತ್ರಕರ್ತೆಯೊಬ್ಬರು ಹುಡುಗಿಯರಲ್ಲಿ ಧೈರ್ಯ, ಸ್ಫೂರ್ತಿ ತುಂಬ ಕೆಲಸವನ್ನು ಬೋಲ್ಡ್‌ ಆಗಿ ಮಾಡಿದ್ದರು. ಇದು ಈ ಚಿತ್ರಕ್ಕೆ ಸ್ಫೂರ್ತಿ. ಹಾಗಂತ ಅದೇ ಸ್ಟೋರಿ ಅಲ್ಲ. ಚಿತ್ರದಲ್ಲಿ ಆ ಪತ್ರಕರ್ತೆಯ ಪಾತ್ರ ಇಲ್ಲ. ಅತ್ಯಾಚಾರಕ್ಕೊಳಗಾದ ಹುಡುಗಿ ಹೋರಾಟ ತೋರಿಸಲಿದ್ದೇವೆ' ಎಂದಿದ್ದಾರೆ. ಚಿತ್ರದ ಟೈಟಲ್‌ಗೆ "ವಾಲ್ಯೂಮ್‌ ೧-ವರ್ಜಿನಿಟಿ' ಎಂಬ ಟ್ಯಾಗ್‌ಲೈನ್ ನೀಡಿರುವುದು ಕುತೂಹಲ ಕೆರಳಿಸಿದೆ.

ದಯಾಳ್‌ ಕಲ್ಪನೆಗೆ ಕಾದಂಬರಿಯ ರೂಪ ನೀಡಿದ್ದಾರೆ ಕಿರಣ್‌. ಇಂದು ಈ ಪುಸ್ತಕವನ್ನು ರಿಲೀಸ್‌ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಶೂಟಿಂಗ್‌ ಪ್ರಾರಂಭ ಆಗಲಿದೆ. ಯಾರೇ ಆಗಲಿ ಸಾಮಾನ್ಯವಾಗಿ ಸಿನಿಮಾ ಆಗುವ ಕತೆಯನ್ನು ಬಿಟ್ಟುಕೊಡುವುದಿಲ್ಲ. ಆದರೆ, ದಯಾಳ್‌ ಪುಸ್ತಕವನ್ನು ಹೊರತರುತ್ತಿರುವುದು ವಿಶೇಷ. ಬೀರ್‌ಬಲ್‌ ಚಿತ್ರದ ಶ್ರೀನಿವಾಸ್‌, ತ್ರಿವಿಕ್ರಮ್‌ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಧೈರ್ಯಂ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ಅದಿತಿ. ನಂತರ ಸಿಂಪಲ್‌ ಸುನಿ ನಿರ್ದೇಶನದ ಬಜಾರ್‌ ಚಿತ್ರದಲ್ಲಿ ನಟಿಸಿದರು. ಈಗ ಚಿರಂಜೀವಿ ಸರ್ಜಾ ಜತೆ ಸಿಂಗ, ನೀನಾಸಂ ಸತೀಶ್‌ ಜತೆ ಬ್ರಹ್ಮಾಚಾರಿ ಮತ್ತು ಕುಸ್ತಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌