ಆ್ಯಪ್ನಗರ

ಸುದೀರ್ಘ ಗ್ಯಾಪ್ ಬಳಿಕ ಟ್ವಿಟರ್‌‌ನಲ್ಲಿ ಶ್ರುತಿ ಹರಿಹರನ್ ದರ್ಶನ

ಇದೀಗ ಮೂರು ತಿಂಗಳ ಬಳಿಕ ಮತ್ತೆ ಟ್ವೀಟ್ ಮಾಡಿದ್ದಾರೆ. ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸಲು ತಾವು ಮತ್ತೆ ಟ್ವಿಟರ್‌ಗೆ ಮರಳಿದ್ದಾಗಿ ಹೇಳಿದ್ದಾರೆ. "ನಿಜವಾದ ಲೆಜೆಂಡ್‌ಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

Vijaya Karnataka Web 11 Jun 2019, 5:22 pm
ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದೇಳಲು #MeToo ಅಭಿಯಾನ ಆರಂಭವಾಗಿದ್ದು ಗೊತ್ತೇ ಇದೆ. ನಟಿ ಶ್ರುತಿ ಹರಿಹರನ್ ಸಹ ಮೀ ಟೂ ಆರೋಪ ಮಾಡಿದ್ದರು. ಈ ವಿವಾದ ಬಳಿಕ ಅವರು ಟ್ವಿಟರ್‌ನಲ್ಲಿ ಅಷ್ಟು ಸಕ್ರಿಯರಾಗಿ ಇರಲಿಲ್ಲ.
Vijaya Karnataka Web sruthi-hariharan


ಇದೀಗ ಮೂರು ತಿಂಗಳ ಬಳಿಕ ಮತ್ತೆ ಟ್ವೀಟ್ ಮಾಡಿದ್ದಾರೆ. ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸಲು ತಾವು ಮತ್ತೆ ಟ್ವಿಟರ್‌ಗೆ ಮರಳಿದ್ದಾಗಿ ಹೇಳಿದ್ದಾರೆ. "ನಿಜವಾದ ಲೆಜೆಂಡ್‌ಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, "ಗಿರೀಡ್ ಕಾರ್ನಾಡ್ ಜತೆಗೆ ಒಮ್ಮೆ ಅಭಿನಯಿಸುವ ಸುಯೋಗ ತನಗೆ ಸಿಕ್ಕಿತ್ತು. ಅವರ ಸರಳತೆ ಮತ್ತು ಬುದ್ಧಿವಂತಿಕೆ ನಮ್ಮಲ್ಲಿ ಅಚ್ಚರಿ ಉಂಟು ಮಾಡುತ್ತದೆ. ಅವರು ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ" ಎಂದಿದ್ದಾರೆ.

ಮೀ ಟೂ ವಿವಾದ ಬಳಿಕ ಶ್ರುತಿ ಹರಿಹರನ್ ಅಭಿನಯದ 'ನಾತಿ ಚರಾಮಿ' ಸಿನಿಮಾ ರಿಲೀಸ್ ಆಗಿತ್ತು. ಅದರ ಪ್ರಮೋಷನ್‍ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆಲ್ಲೂ ಅವರು ಅಷ್ಟಾಗಿ ಕಾಣಿಸಲಿಕೊಳ್ಳಲಿಲ್ಲ. ಇದೀಗ ಗಿರೀಶ್ ಕಾರ್ನಾಡ್ ನಿಧನದ ಸಂದರ್ಭದಲ್ಲಿ ಮತ್ತೆ ಟ್ವಿಟರ್‌‌ನಲ್ಲಿ ದರ್ಶನ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌