ಆ್ಯಪ್ನಗರ

ಪರಿಸರ ಸ್ನೇಹಿ ಮದುವೆಯಲ್ಲಿ ಆಪ್ತರಿಗಷ್ಟೇ ಪ್ರವೇಶ

ಬುಧವಾರ ಸಂಜೆ 5.30ರ ಸಮಯದಲ್ಲಿ ದಿಗಂತ್‌ ಅವರು ಐಂದ್ರಿತಾಗೆ ತಾಳಿ ಕಟ್ಟುವ ಮೂಲಕ ತಮ್ಮ ಪ್ರೇಮವನ್ನು ಅಧಿಕೃತ ಮಾಡಿಕೊಂಡರು. ನಂದಿಬೆಟ್ಟದ ತಪ್ಪಲಿನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಇವರಿಬ್ಬರು ಮದುವೆಯಾಗಿದ್ದು, ಕೇವಲ ಆಪ್ತ ವಲಯ ಮತ್ತು ಬಂಧುಮಿತ್ರರಿಗಷ್ಟೇ ಪ್ರವೇಶವಿತ್ತು. ಸಿನಿಮಾ ರಂಗದಿಂದಲೂ ಯಾರೊಬ್ಬರೂ ಮದುವೆಗೆ ಹೋಗಿಲ್ಲ. ಪರಿಸರ ಸ್ನೇಹಿ ಮದುವೆ ಎಂದು ಈ ಜೋಡಿ ಮೊದಲೇ ಹೇಳಿತ್ತು. ಹವ್ಯಕ ಬ್ರಾಹ್ಮಣ ಮತ್ತು ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹದ ಶಾಸ್ತ್ರಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Vijaya Karnataka 14 Dec 2018, 7:21 am
ಕಳೆದ 9 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ದೂದ್‌ಪೇಡಾ ದಿಗಂತ್‌ ಮತ್ತು ಬೆಂಗಾಲಿ ಚೆಲುವೆ ಐಂದ್ರಿತಾ ರೇ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Vijaya Karnataka Web diganth.jpg1


ನಂದಿಬೆಟ್ಟದ ತಪ್ಪಲಿನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಇವರಿಬ್ಬರು ಮದುವೆಯಾಗಿದ್ದು, ಕೇವಲ ಆಪ್ತ ವಲಯ ಮತ್ತು ಬಂಧುಮಿತ್ರರಿಗಷ್ಟೇ ಪ್ರವೇಶವಿತ್ತು. ಸಿನಿಮಾ ರಂಗದಿಂದಲೂ ಯಾರೊಬ್ಬರೂ ಮದುವೆಗೆ ಹೋಗಿಲ್ಲ. ಪರಿಸರ ಸ್ನೇಹಿ ಮದುವೆ ಎಂದು ಈ ಜೋಡಿ ಮೊದಲೇ ಹೇಳಿತ್ತು. ಹವ್ಯಕ ಬ್ರಾಹ್ಮಣ ಮತ್ತು ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹದ ಶಾಸ್ತ್ರಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಸಂಜೆ 5.30ರ ಸಮಯದಲ್ಲಿ ದಿಗಂತ್‌ ಅವರು ಐಂದ್ರಿತಾಗೆ ತಾಳಿ ಕಟ್ಟುವ ಮೂಲಕ ತಮ್ಮ ಪ್ರೇಮವನ್ನು ಅಧಿಕೃತ ಮಾಡಿಕೊಂಡರು. ಈ ಸಮಯದಲ್ಲಿ ಐಂದ್ರಿತಾ ಕೆಂಪು ಬಣ್ಣದ ಬನಾರಸಿ ಸಿಲ್ಕ… ಸೀರೆ ಉಟ್ಟರೆ, ದಿಗಂತ್‌ ಬಿಳಿ ಬಣ್ಣದ ಕುರ್ತಾ, ಕಚ್ಚೆ ಪಂಚೆ ಹಾಗೂ ಬಂಡಿ ಕೊಟ್‌ ಧರಿಸಿದ್ದರು. ಬೆಂಗಾಲಿ ಶೈಲಿಯ ಪೇಟವನ್ನು ದಿಗಂತ್‌ ಧರಿಸಿದ್ದರು. ಪರಿಸರ ಸ್ನೇಹಿ ಮದುವೆ ಎಂದು ಪ್ರಚಾರ ಪಡೆದಿದ್ದ ಇದರಲ್ಲಿ ಹೇಗೆ ಮದುವೆ ನಡೆದಿದೆ ಎಂಬುದು ಯಾರಿಗೂ ಮಾಹಿತಿಯಿಲ್ಲ.

ಮದುವೆಯ ಪ್ರಸರಣ ಹಕ್ಕನ್ನು ಖಾಸಗಿ ವಾಹಿನಿಗೆ ಮಾರಾಟ ಮಾಡಿದ್ದ ಕಾರಣ ಯಾವುದೇ ಮಾಧ್ಯಮಗಳಿಗೆ, ಛಾಯಾಗ್ರಹಕರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ರೆಸಾರ್ಟ್‌ ಬಾಗಿಲವರೆಗೂ ಹೋಗಿದ್ದ ಮಾಧ್ಯಮಗಳನ್ನು ವಾಪಸ್‌ ಕಳಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌