ಆ್ಯಪ್ನಗರ

ನಡುವೆ ಅಂತರವಿರಲಿ ಎಂದ ಐಶಾನಿ

ಕನ್ನಡದಲ್ಲಿ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಕಾಣೆಯಾಗಿದ್ದ ನಟಿ ಐಶಾನಿ ಶೆಟ್ಟಿ ಈಗ 'ನಡುವೆ ಅಂತರವಿರಲಿ' ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ.

Vijaya Karnataka 6 Jul 2018, 5:00 am
ನಡುವೆ ಅಂತರವಿರಲಿ ಎಂದ ಐಶಾನಿ
Vijaya Karnataka Web aishani


ಕನ್ನಡದಲ್ಲಿ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಕಾಣೆಯಾಗಿದ್ದ ನಟಿ ಐಶಾನಿ ಶೆಟ್ಟಿ ಈಗ 'ನಡುವೆ ಅಂತರವಿರಲಿ' ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ.


==

ನಟಿ ಐಶಾನಿ ಮಧ್ಯೆ ಒಂದೆರು ವರ್ಷ ನಾಪತ್ತೆಯಾಗಿದ್ದರು. ಈ ಅಂತರದಲ್ಲಿ ಅವರೇನು ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಈಗ ನಡುವೆ ಅಂತರವಿರಲಿ ಎನ್ನುತ್ತಿದ್ದಾರೆ. ಹಾಗಂತ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ವಾಸ್ತುಪ್ರಕಾರ ಮತ್ತು ರಾಕೆಟ್‌ ಚಿತ್ರಗಳಲ್ಲ ನಟಿಸಿದ ನಂತರ ಸ್ಟಡೀಸ್‌ ಮುಂದುವರಿಸಲು ಚಿತ್ರರಂಗದಿಂದ ದೂರ ಉಳಿದಿದ್ದ ಐಶಾನಿ ಈಗ ನಡುವೆ ಅಂತರವಿರಲಿ ಎಂಬ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ನವ ನಟ ಪ್ರಖ್ಯಾತ್‌ ಪರಮೇಶ್‌ ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಯನ್ನೇ ಸಿನಿಮಾ ಮಾಡಲಾಗಿದೆ. ರವೀನ್‌ ಚಿತ್ರ ನಿರ್ದೇಶನವಿದೆ. ಐಶಾನಿ ಈ ಚಿತ್ರದ ಜತೆ ತಾವೇ 'ಕಾಜಿ' ಕಿರುಚಿತ್ರವನ್ನು ನಿರ್ದೇಶಿಸಿದ್ದು, ದಾದಾ ಸಾಹೇಬ್‌ ಪಾಲ್ಕೆ ಚಿತ್ರೋತ್ಸವದಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಗಳಿಸಿದೆ. ಇದೀಗ ಮತ್ತೆ ನಟನೆಯತ್ತ ಮರಳಿದ್ದಾರೆ.

ನಡುವೆ ಅಂತರವಿರಲಿ ಚಿತ್ರಕ್ಕೆ ಯೋಗರಾಜ್‌ ಭಟ್‌, ವಿ. ನಾಗೇಂದ್ರ ಪ್ರಸಾದ್‌, ಗೌಸ್‌ ಪೀರ್‌ ಹಾಡುಗಳನ್ನು ಬರೆದಿದ್ದು, ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌