ಆ್ಯಪ್ನಗರ

ಐದನೇ ಬಾರಿ ಕೃಷ್ಣನಾದ ಅಜಯ್‌ ರಾವ್‌

ಕೃಷ್ಣನ್‌ ಲವ್‌ ಸ್ಟೋರಿ ಸೇರಿದಂತೆ ಕೃಷ್ಣನ ಹೆಸರಿನಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಅಜಯ್‌ ರಾವ್‌, ಈಗ 'ಕೃಷ್ಣ ಟಾಕೀಸ್‌' ಹೆಸರಿನಲ್ಲಿ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.

Vijaya Karnataka 9 May 2019, 5:00 am
ಈಗಾಗಲೇ ಕೃಷ್ಣನ್‌ ಲವ್‌ಸ್ಟೋರಿ, ಮ್ಯಾರೇಜ್‌ ಸ್ಟೋರಿ, ಕೃಷ್ಣಲೀಲಾ ಹೀಗೆ ಕೃಷ್ಣನ ಹೆಸರಿನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ ಅಜಯ್‌ ರಾವ್‌. ಅವೆಲ್ಲವೂ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದಿವೆ. ಹಾಗಾಗಿ ಈ ಸಲವು ಅವರು ಕೃಷ್ಣನ ಮೊರೆ ಹೋಗಿದ್ದಾರೆ. ವಿಜಯಾನಂದ ನಿರ್ದೇಶನದ 'ಕೃಷ್ಣ ಟಾಕೀಸ್‌' ಚಿತ್ರದಲ್ಲಿ ಅಜಯ್‌ ನಾಯಕರಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಜತೆ ಅಪೂರ್ವ ಚಿತ್ರದಲ್ಲಿ ನಟಿಸಿದ್ದ ಅಪೂರ್ವ ಮತ್ತು ಸಿಂಧೂ ಲೋಕನಾಥ್‌ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತ ನಡೆಯಲಿದೆ.
Vijaya Karnataka Web ajay-rao


ನಾನಾ ವಿಶೇಷವನ್ನು ಹೊತ್ತು ಈ ಸಿನಿಮಾ ಬರಲಿದೆ. ಈಗಾಗಲೇ ಆನಂದಪ್ರಿಯ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಡಾ.ನಾಗೇಂದ್ರ ಪ್ರಸಾದ್‌ ಸಹೋದರ, ಈ ಚಿತ್ರಕ್ಕಾಗಿ ತಮ್ಮ ಹೆಸರನ್ನು ವಿಜಯಾನಂದ ಎಂದು ಬದಲಾಯಿಸಿಕೊಂಡಿದ್ದಾರೆ. ಚಿಕ್ಕಣ್ಣ, ಮಂಡ್ಯ ರಮೇಶ್‌, ಪ್ರಮೋದ್‌ ಶೆಟ್ಟಿ ಸೇರಿದಂತೆ ಹೆಸರಾಂತ ಕಲಾವಿದರ ತಾರಾ ಬಳಗವೇ ಚಿತ್ರದಲ್ಲಿದೆ. ರಂಗಿತರಂಗ ಖ್ಯಾತಿಯ ಸಿನಿಮಾಟೋಗ್ರಾಫರ್‌ ವಿಲಿಯಂ ಡೇವಿಡ್‌ ಈ ಚಿತ್ರಕ್ಕೆ ಕ್ಯಾಮೆರಾಮನ್‌. ಹೆಸರಾಂತ ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

'ಇದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಸಿನಿಮಾ. ಅಜಯ್‌ ರಾವ್‌ ಈ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಕೃಷ್ಣನ ಹೆಸರಿನಲ್ಲಿ ಬರುತ್ತಿರುವ ಅವರ ಐದನೇ ಸಿನಿಮಾ ಇದಾಗಿದ್ದು, ಇಲ್ಲಿ ಕೃಷ್ಣ ವಿಭಿನ್ನವಾಗಿ ಕಾಣಿಸಲಿದ್ದಾರೆ' ಎನ್ನುತ್ತಾರೆ ನಿರ್ದೇಶಕರು.

'ಸಿನಿಮಾದ ವಿಶೇಷ ಅಂದರೆ ನುರಿತ ತಂತ್ರಜ್ಞರು, ಹೆಸರಾಂತ ಕಲಾವಿದರ ಸಂಗಮವಿದೆ. ಅಲ್ಲದೇ, ಕಥೆಯನ್ನು ಹೊಸಬಗೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಚಿತ್ರಕ್ಕೆ ನಾನು ಸಂಗೀತ ನೀಡುತ್ತಿರುವುದು ಖುಷಿಯ ವಿಚಾರ' ಎನ್ನುತ್ತಾರೆ ಶ್ರೀಧರ್‌ ಸಂಭ್ರಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌