ಆ್ಯಪ್ನಗರ

ತೆಲುಗು 'ಬಿಗ್ ಬಾಸ್‌' ಹೊಸ ಸೀಸನ್‌ನಲ್ಲಿ ಕಿಚ್ಚ ಸುದೀಪ್ ನೆರಳು

ತೆಲುಗು ಬಿಗ್ ಬಾಸ್ ಸೀಸನ್ 3 ಯಾರ ನಿರೂಪಣೆಯಲ್ಲಿ ಮೂಡಿಬರಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ಸಲದ ಶೋ ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬರಲಿದೆ. ಕನ್ನಡ ಬಿಗ್ ಬಾಸ್ ಐದನೇ ಸೀಸನ್ ಪ್ರೊಮೊದಲ್ಲಿ ಸುದೀಪ್‌ರಂತೆ ನಾಗಾರ್ಜುನ ಕಾಣಿಸಿಕೊಂಡಿದ್ದಾರೆ.

Vijaya Karnataka Web 29 Jun 2019, 11:47 am
'ಬಿಗ್ ಬಾಸ್' ರಿಯಾಲಿಟಿ ಶೋ ಎಂದರೆ ಕನ್ನಡ ಕಿರುತೆರೆ ವೀಕ್ಷಕರಿಗೆ ಥಟ್ಟನೆ ನೆನಪಾಗುವ ಹೆಸರು ಕಿಚ್ಚ ಸುದೀಪ್. ಅವರ ನಿರೂಪಣೆ, ಹಾವಭಾವ, ಸ್ಪರ್ಧಿಗಳಲ್ಲಿ ತುಂಬುವ ಸ್ಫೂರ್ತಿ, ಕಾಲೆಳೆಯುವ ರೀತಿ ಎಲ್ಲವೂ ಕಿರುತೆರೆ ವೀಕ್ಷಕರಿಗೆ ಅಚ್ಚುಮೆಚ್ಚು. ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಶೋ ಈಗಾಗಲೆ ಆರು ಸೀಸನ್‌ಗಳನ್ನು ಪೂರೈಸಿದೆ. ಎಲ್ಲಾ ಶೋಗಳನ್ನು ಮುನ್ನಡೆಸಿದ ಕೀರ್ತಿ ಸುದೀಪ್‌ಗೆ ಸಲ್ಲುತ್ತದೆ.
Vijaya Karnataka Web nagarjuna (1)


ಆದರೆ ತೆಲುಗಿನಲ್ಲಿ ಒಂದೊಂದು ಸೀಸನ್ ಒಬ್ಬೊಬ್ಬರ ನಿರೂಪಣೆಯಲ್ಲಿ ಮೂಡಿಬಂದಿದೆ. ಮೊದಲ ಸೀಸನ್ ಜೂನಿಯರ್ ಎನ್‌ಟಿಆರ್ ನಿರೂಪಿಸಿದರೆ, ಎರಡನೇ ಸೀಸನ್ ನಾನಿ ಸಾರಥ್ಯ ವಹಿಸಿದ್ದರು. ಇದೀಗ ಮೂರನೇ ಸೀಸನ್ ಆರಂಭವಾಗುತ್ತಿದ್ದು ಕಿಂಗ್ ನಾಗಾರ್ಜುನ ಆಗಮನವಾಗಿದೆ. [ಬಿಗ್ ಬಾಸ್ 6 'ವಿನ್ನರ್' ಶಶಿಕುಮಾರ್]

ತೆಲುಗು ಬಿಗ್ ಬಾಸ್‌ನ ಮೂರನೇ ಸೀಸನ್‌ಗೆ ಸಂಬಂಧಿಸಿದ ಪ್ರೊಮೊ ರಿಲೀಸ್ ಆಗಿದ್ದು ಇದರಲ್ಲಿ ಕಿಚ್ಚ ಸುದೀಪ್ ಅನುಕರಣೆ ಕಾಣಬಹುದು. ಬಿಗ್ ಬಾಸ್ ಕನ್ನಡ 5ನೇ ಸೀಸನ್‌ನಲ್ಲಿ ಸುದೀಪ್ ಮಾರುಕಟ್ಟೆಗೆ ಬಂದು ತರಕಾರಿ, ಅಡುಗೆ ಸಾಮಗ್ರಿ ಆರ್ಡರ್ ಮಾಡುತ್ತಾ ಕಾಣಿಸಿಕೊಳ್ಳುವ ಪ್ರೊಮೊ ಮೂಡಿಬಂದಿತ್ತು.

ಇದೀಗ ಇದೇ ರೀತಿ ನಾಗಾರ್ಜುನ ಸಹ ಕಾಣಿಸಿಕೊಂಡಿದ್ದಾರೆ. "ಏನ್ ಸಾರ್ ನೀವು ಬಂದುಬಿಟ್ಟಿದ್ದೀರಾ?" ಎಂದು ತರಕಾರಿ ಅಂಗಡಿಯವ ಕೇಳಿದ್ದಕ್ಕೆ, ಮನೆಗೆ 15 ಜನ ಹೊಸಬರು ಬರ್ತಿದ್ದಾರೆ ಅಂದ ಮೇಲೆ ಹೊಸದಾಗಿ ಏನಾದರೂ ಮಾಡ್ಲೇಬೇಕಲ್ವಾ" ಎಂದು ಸೀಸನ್ 5ರ ಪ್ರೊಮೊದಲ್ಲಿ ಸುದೀಪ್ ಹೇಳಿ ಕುತೂಹಲ ಮೂಡಿಸಿದ್ದರು.

ಇದೀಗ ತೆಲುಗಿನ ಮೂರನೇ ಸೀಸನ್‌ನಲ್ಲೂ ಇದೇ ರೀತಿ ಡೈಲಾಗ್ ಹೊಡೆದಿದ್ದಾರೆ ಕಿಂಗ್ ನಾಗಾರ್ಜುನ. ಅಲ್ಲಿಗೆ ಸುದೀಪ್ ನೆರಳು ಅಲ್ಲೂ ಇಣುಕಿದಂತಾಗಿದೆ. ಈ ಸಲ 14 ಮಂದಿ ಬಿಗ್ ಬಾಸ್ ಮನೆಗೆ ಅಡಿಯಿಡಲಿದ್ದಾರೆ. ಒಟ್ಟು 100 ದಿನಗಳ ಕಾಲ ಶೋ ನಡೆಯಲಿದೆ. ತೆಲುಗಿನಲ್ಲಿ ಮೊದಲ ಸೀಸನ್ ಎನ್‌ಟಿಆರ್, ಎರಡನೇ ಸೀಸನ್ ನಾನಿ ನಿರೂಪಿಸಿದ್ದರು. ಇದೀಗ ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌