ಆ್ಯಪ್ನಗರ

ಅಂಬಿಗಾಗಿ ಒಂದಾಗಲಿದ್ದಾರೆ ಸೌತ್‌ ಸ್ಟಾರ್ಸ್‌

'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಆಡಿಯೋ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ದಕ್ಷಿಣ ಭಾರತದ ಖ್ಯಾತ ನಟರು ಕಾರ‍್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

Vijaya Karnataka 6 Aug 2018, 11:52 am
ರೆಬಲ್‌ಸ್ಟಾರ್‌ ಅಂಬರೀಷ್‌ ಹಲವು ದಿನಗಳ ನಂತರ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ ದಿನೇ ದಿನೇ ಕುತೂಹಲ ಮೂಡಿಸುತ್ತಿದೆ. ಈಗ ಈ ಚಿತ್ರದ ಆಡಿಯೋ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ದಕ್ಷಿಣ ಭಾರತದ ಖ್ಯಾತ ನಟರು ಕಾರ‍್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
Vijaya Karnataka Web sushasini


ಹದಿನಾಲ್ಕು ವರ್ಷಗಳ ನಂತರ ಅಂಬಿ ಹೀರೋ ಆಗಿರೋ ಸಿನಿಮಾ ಇದಾಗಿದ್ದರಿಂದ ಆಡಿಯೋ ಲಾಂಚ್‌ ಅನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಹಾಗಾಗಿ ಅಂಬರೀಷ್‌ ಸ್ನೇಹಿತರು, ಬಂಧುಗಳನ್ನು ಕರೆಯಿಸಲು ಪ್ಲಾನ್‌ ಮಾಡಲಾಗಿದೆ. ರಜನೀಕಾಂತ್‌, ಚಿರಂಜೀವಿ, ಮೋಹನ್‌ ಬಾಬು, ಶತ್ರುಘ್ನ ಸಿನ್ಹಾ, ಧನುಷ್‌, ಕಿಚ್ಚ ಸುದೀಪ್‌, ದರ್ಶನ್‌, ಶಿವರಾಜ್‌ ಕುಮಾರ್‌, ರವಿಚಂದ್ರನ್‌, ಯಶ್‌ ಹೀಗೆ ದಕ್ಷಿಣ ಭಾರತದ ಬಹುತೇಕ ಕಲಾವಿದರು ಈ ಕಾರ‍್ಯಕ್ರಮಕ್ಕೆ ಸಾಕ್ಷಿ ಆಗುತ್ತಿರುವುದು ವಿಶೇಷ.

ಅಂದಹಾಗೆ ಈ ಸಿನಿಮಾ ಕೆಎಸ್‌ಕೆ ಶೋ ರೀಲ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿದ್ದು, ಜಾಕ್‌ ಮಂಜು ನಿರ್ಮಾಪಕರು. ಗುರುದತ್‌ ಗಾಣಿಕ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರದಲ್ಲಿ ಸುಹಾಸಿನಿ,ಸುದೀಪ್‌, ಶ್ರುತಿ ಹರಿಹರನ್‌ ಹೀಗೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌