ಆ್ಯಪ್ನಗರ

ಅಲ್ಲು ಅರ್ಜುನ್ ಮೇಲೆ ಕೋಪಗೊಂಡ 'ಮೆಗಾ ಸ್ಟಾರ್' ಚಿರಂಜೀವಿ ಫ್ಯಾನ್ಸ್!

ಒಂದೆಡೆ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದ ಬಿಡುಗಡೆಯನ್ನು ಸಂಭ್ರಮದಿಂದ ಎದುರು ನೋಡುತ್ತಿರುವ ಚಿರಂಜೀವಿ ಅಭಿಮಾನಿಗಳು, ಅತ್ತ ನಟ ಅಲ್ಲು ಅರ್ಜುನ್‌ ಮೇಲೂ ಗರಂ ಆಗಿದ್ದಾರೆ! ಅದಕ್ಕೆ ಕಾರಣವೇನು ಗೊತ್ತಾ?

Vijaya Karnataka Web 29 Sep 2019, 4:25 pm
ವಿಶ್ವಾದ್ಯಂತ ಸಂಚಲನ ಸೃಷ್ಟಿಸಿರುವ 'ಸೈ ರಾ ನರಸಿಂಹ ರೆಡ್ಡಿ' ಚಿತ್ರವು ಗಾಂಧಿ ಜಯಂತಿ ಅಂಗವಾಗಿ ಅ.೨ರಂದು ತೆರೆಕಾಣಲಿದೆ. ಸುಮಾರು 250 ಕೋಟಿ ರೂ. ಬಜೆಟ್ನಲ್ಲಿ ಸಿದ್ಧಗೊಂಡಿರುವ ಈ ಚಿತ್ರದ ಬಗ್ಗೆ 'ಮೆಗಾ' ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಮೆಗಾ ಸ್ಟಾರ್' ಚಿರಂಜೀವಿ ನಟನೆಯ ೧೫೧ನೇ ಚಿತ್ರ ಇದಾಗಿದ್ದು, ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಆದರೆ, ಸಿನಿಮಾವನ್ನು ಸ್ವಾಗತಿಸುವುದಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿರುವ ಮೆಗಾ ಅಭಿಮಾನಿಗಳು, ಚಿರು ಸಂಬಂಧಿ, ನಟ ಅಲ್ಲು ಅರ್ಜುನ್ ಮೇಲೆ ಸಿಟ್ಟಾಗಿದ್ದಾರೆ.
Vijaya Karnataka Web syra narasimha reddy neww


ಅಷ್ಟಕ್ಕೂ ಈ ರೀತಿ ಅಲ್ಲು ಅರ್ಜುನ್‌ ಮೇಲೆ ಚಿರು ಅಭಿಮಾನಿಗಳು ಕೋಪಗೊಳ್ಳುವುದಕ್ಕೆ ಕಾರಣವಿದೆ. ಅದೇನೆಂದರೆ, ಇತ್ತೀಚಿಗಷ್ಟೆ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಅಲ್ಲದೆ, ಆ ಕಾರ್ಯಕ್ರಮಕ್ಕೆ 'ಪವರ್ ಸ್ಟಾರ್' ಪವನ್‌ ಕಲ್ಯಾಣ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಮೆಗಾ ಅಭಿಮಾನಿಗಳಿಗೆ ಸಂತಸ ನೀಡಿತ್ತು. ಜತೆಗೆ ಎಸ್‌.ಎಸ್‌. ರಾಜಮೌಳಿ, ವರುಣ್‌ ತೇಜ್, ಸಾಯಿ ತೇಜ್, ರಾಮ್‌ಚರಣ್ ತೇಜ, ಜಗಪತಿ ಬಾಬು ಸೇರಿದಂತೆ ಅನೇಕರು ಆಗಮಿಸಿದ್ದರು. ಮೆಗಾ ಕುಟುಂಬದ ಎಲ್ಲ ಹೀರೋಗಳು ಅಲ್ಲಿದ್ದರು. ಆದರೆ, ಅಲ್ಲು ಅರ್ಜುನ್‌ ಅನುಪಸ್ಥಿತಿ ಮಾತ್ರ ಎದ್ದು ಕಾಣುತ್ತಿತ್ತು. ಟ್ರೇಲರ್ ರಿಲೀಸ್ ಆದಾಗ ಒಂದು ಟ್ವೀಟ್ ಕೂಡ ಅಲ್ಲು ಅರ್ಜುನ್ ಮಾಡಿರಲಿಲ್ಲ. ಚಿರು ಬರ್ತ್ ಡೇಗೆ ವಿಷ್ ಮಾಡಿದ್ದ ಟ್ವೀಟ್ ಬಿಟ್ಟರೆ, ಇದುವರೆಗೂ 'ಸೈ ರಾ...' ಕುರಿತು ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ ಅಲ್ಲು ಅರ್ಜುನ್‌. ಇದು ಚಿರು ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಟಿಕೆಟ್ ರೇಟ್ ; ಹಾಗಾದ್ರೆ ಎಷ್ಟು ರೂಪಾಯಿ?

ಈ ಮಧ್ಯೆ ಸೆ.29ರಂದು ಸಂಜೆ ನಡೆಯಲಿರುವ ನಟ ಗೋಪಿಚಂದ್ ಅಭಿನಯದ 'ಚಾಣಕ್ಯ' ಚಿತ್ರದ ಬಿಡುಗಡೆಪೂರ್ವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಲ್ಲು ಆಗಮಿಸಲಿದ್ದಾರಂತೆ. ಆ ಚಿತ್ರದ ಕೂಡ ಅ.೫ರಂದು ತೆರೆಗೆ ಬರಲಿದೆ. 'ಸೈ ರಾ...' ಚಿತ್ರದ ಕಾರ್ಯಕ್ರಮಕ್ಕೆ ಆಗಮಿಸಿದ ಅಲ್ಲು ಅರ್ಜುನ್, ಬೇರೊಬ್ಬರ ಸಿನಿಮಾ ಇವೆಂಟ್‌ಗೆ ಹೋಗುತ್ತಿರುವುದು ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

ಇಂದು ಶಿವಣ್ಣ, ಚಿರಂಜೀವಿ ಮುಖಾಮುಖಿ; ಕಾರಣವೇನು?

ಕೆಲ ವರ್ಷಗಳ ಹಿಂದೆ ಪವನ್‌ ಕಲ್ಯಾಣ್‌ ಹೆಸರನ್ನು ನಾನು ಹೇಳುವುದಿಲ್ಲ ಎಂದು ಅಲ್ಲು ಅರ್ಜುನ್‌ ಹೇಳಿದ್ದರಿಂದ, 'ಪವರ್‌ ಸ್ಟಾರ್' ಫ್ಯಾನ್ಸ್ ಗರಂ ಆಗಿದ್ದರು. ಈಗಿನ ಸರದಿ ಚಿರು ಅಭಿಮಾನಿಗಳದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌