ಆ್ಯಪ್ನಗರ

'ಯಜಮಾನ' ಥಿಯೇಟರ್‌ಗಳಲ್ಲಿ 'ಅಮರ್' ಟ್ರೇಲರ್

ಇದೇ ಮಾರ್ಚ್ 1ಕ್ಕೆ ಯಜಮಾನ ಸಿನಿಮಾ ಜಗತ್ತಿನಾದ್ಯಂತ ಬರೋಬ್ಬರಿ 800 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಅಂದೇ ಅಬ್ಬರಿಸಲಿರುವ ಯಜಮಾನ ಚಿತ್ರಕ್ಕೆ ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಆಗಿದೆ.

TIMESOFINDIA.COM 26 Feb 2019, 11:41 am
ರೆಬೆಲ್ ಸ್ಟಾರ್ ಅಂಬರೀಶ್ ಎಂದರೆ ನನ್ನ ಪಾಲಿನ ಯಜಮಾನ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿರುವುದು ಗೊತ್ತೇ ಇದೆ. ಅದೇ ರೀತಿ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎಂದರೂ ದರ್ಶನ್‌ಗೆ ಅಚ್ಚುಮೆಚ್ಚು. ಹಾಗಾಗಿ 'ಅಮರ್' ಚಿತ್ರಕ್ಕೆ ಸಾಕಷ್ಟು ಬೆಂಬಲ ನೀಡುತ್ತಾ ಬಂದಿದ್ದಾರೆ.
Vijaya Karnataka Web amar


ಇದೇ ಮಾರ್ಚ್ 1ಕ್ಕೆ ಯಜಮಾನ ಸಿನಿಮಾ ಜಗತ್ತಿನಾದ್ಯಂತ ಬರೋಬ್ಬರಿ 800 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಅಂದೇ ಅಬ್ಬರಿಸಲಿರುವ ಯಜಮಾನ ಚಿತ್ರಕ್ಕೆ ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಆಗಿದೆ. ದರ್ಶನ್ ವೃತ್ತಿ ಜೀವನದ 51ನೇ ಚಿತ್ರವಾಗಿರುವ ಯಜಮಾನ, ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿರುವ ವಿ ಹರಿಕೃಷ್ಣ ನಿರ್ದೇಶನದ ಮೊದಲ ಚಿತ್ರವೂ ಹೌದು. ಈ ಚಿತ್ರವನ್ನು ವಿ ಹರಿಕೃಷ್ಣ ಜೊತೆ ಪಿ ಕುಮಾರ್ ನಿರ್ದೇಶಿಸಿರುವುದು ವಿಶೇಷ.

ಹಾಗೆಯೇ ಮಾರ್ಚ್ 1ಕ್ಕೆ 'ಅಮರ್' ಟ್ರೇಲರ್ ಸಹ ಬಿಡುಗಡೆಯಾಗುತ್ತಿದೆ. ಈ ಟ್ರೇಲರನ್ನು 'ಯಜಮಾನ' ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಸಿನಿಮಾ ಇದಾಗಿದ್ದು ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ಈಗಾಗಲೆ ಅಮರ್ ಟೀಸರ್ ಬಿಡುಗಡೆಯಾಗಿದ್ದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದೀಗ ಮಾರ್ಚ್ 1ಕ್ಕೆ ಟ್ರೇಲರ್ ಬಿಡುಗಡೆಯಾಗುತ್ತಿದೆ. ಅಮರ್‌ ಚಿತ್ರದಲ್ಲಿ ನಾಯಕಿಯಾಗಿ ತಾನ್ಯಾ ಹೋಪ್‌ ನಟಿಸಿದ್ದಾರೆ. ಚಿತ್ರವನ್ನು ಜೈಪುರ್‌, ಊಟಿ, ಮಡಿಕೇರಿ, ಕೇರಳ ಸೇರಿದಂತೆ ವಿದೇಶಗಳಲ್ಲೂ ಶೂಟ್‌ ಮಾಡಲಾಗಿದೆ. ಸುಮಾರು 50 ದಿನಗಳ ಚಿತ್ರೀಕರಣ ಮಾಡಿದ್ದಾರೆ.

ಅಭಿಷೇಕ್‌ ನಟನೆಯ ಮೊದಲ ಚಿತ್ರ ಅರ್ಧದಷ್ಟು ರಫ್‌ ಎಡಿಟ್‌ ಆಗಿದ್ದಾಗಲೇ ಅಂಬರೀಶ್‌ ನೋಡಿ ಸಂತಸ ವ್ಯಕ್ತಪಡಿಸಿದ್ದರು. ಆದರೆ, ಚಿತ್ರ ಪೂರ್ಣಗೊಳ್ಳುವುದರೊಳಗೆ ಚಿತ್ರರಂಗ ಅವರನ್ನು ಕಳೆದುಕೊಂಡಿತ್ತು. ಈ ಚಿತ್ರಕ್ಕಾಗಿ ಅಭಿಷೇಕ್‌ ಫೋಟೋ ಶೂಟ್‌ನಲ್ಲಿ ಭಾಗಿಯಾಗಿದ್ದಾಗ, ದಿಢೀರ್‌ ಎಂದು ಸ್ಟುಡಿಯೋಗೆ ಭೇಟಿ ನೀಡಿದ್ದ ಅಂಬರೀಷ್‌ ಅವರು ಮೊದಲ ಬಾರಿಗೆ ತಾವಾಗಿಯೇ ಆಸೆಪಟ್ಟು ಮಗನ ಜತೆ ನಿಂತು ಫೋಟೋ ತೆಗೆಸಿಕೊಂಡಿದ್ದರು. ಇದನ್ನು ಅಭಿಷೇಕ್‌ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌