ಆ್ಯಪ್ನಗರ

ಪಶ್ಚಿಮ ವಾಹಿನಿಯಲ್ಲಿ ಅಂಬರೀಶ್ ಚಿತಾಭಸ್ಮ ವಿಸರ್ಜನೆ

ಅಂಬರೀಶ್‌ ಸ್ನೇಹಿತರು ಮತ್ತು ಸಿನಿಮಾ ರಂಗದ ಕೆಲ ಹಿತೈಸಿಗಳು ಸೇರಿಕೊಂಡು ಕಾಶಿ ಮತ್ತು ಗೋಕರ್ಣದಲ್ಲೂ ಚಿತಾಭಸ್ಮ ವಿಸರ್ಜನೆ ಮಾಡಬೇಕು ಎಂಬ ತೀರ್ಮಾನ ಕೂಡ ಮಾಡಿದ್ದಾರಂತೆ ದೊಡ್ಡಣ್ಣ.

Vijaya Karnataka Web 28 Nov 2018, 1:09 pm
ರೆಬಲ್‌ಸ್ಟಾರ್‌ ಅಂಬರೀಶ್‌ರ ಚಿತಾಭಸ್ಮವನ್ನು ಇಂದು (ನವೆಂಬರ್ 28) ಶ್ರೀರಂಗಪಟ್ಟಣದಲ್ಲಿರುವ ಪಶ್ಚಿಮ ವಾಹಿನಿಯಲ್ಲಿ ವಿಸರ್ಜನೆ ಮಾಡುವುದಾಗಿ ಅಂಬರೀಶ್‌ ಆಪ್ತ, ನಟ ದೊಡ್ಡಣ್ಣ ತಿಳಿಸಿದ್ದಾರೆ.
Vijaya Karnataka Web ambi1


ಅಂಬರೀಶ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌, ಕುಟುಂಬದ ಸದಸ್ಯರು ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಅಂಬಿ ಆಪ್ತ ಜಗನ್ನಾಥ್‌ ಸೇರಿದಂತೆ ಕೆಲ ಸಿನಿಮಾ ತಾರೆಯರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಕಾವೇರಿ ನದಿಗೂ ಮತ್ತು ಅಂಬರೀಶ್‌ಗೂ ಅವಿನಾಭಾವ ಸಂಬಂಧವಿದೆ. ಕಾವೇರಿಯು ಪಶ್ಚಿಮಾಭಿಮುಖವಾಗಿ ಹರಿದು ಪೂರ್ವಕ್ಕೆ ಸೇರುತ್ತದೆ. ಅಸ್ತಿ ಅಲ್ಲಿಯೇ ವಿಸರ್ಜನೆ ಮಾಡಿದರೆ ಅಂಬರೀಶ್‌ ಅವರಿಗೆ ಬೇಗ ಮೋಕ್ಷ ಸಿಗುತ್ತದೆ. ಹಾಗಾಗಿಯೇ ಶ್ರೀರಂಗಪಟ್ಟಣದ ಬಳಿ ಅಸ್ತಿ ವಿಸರ್ಜನೆ ಮಾಡುವುದಾಗಿ ದೊಡ್ಡಣ್ಣ ತಿಳಿಸಿದ್ದಾರೆ.


ಅಲ್ಲದೇ, ಅಂಬರೀಶ್‌ ಸ್ನೇಹಿತರು ಮತ್ತು ಸಿನಿಮಾ ರಂಗದ ಕೆಲ ಹಿತೈಸಿಗಳು ಸೇರಿಕೊಂಡು ಕಾಶಿ ಮತ್ತು ಗೋಕರ್ಣದಲ್ಲೂ ಚಿತಾಭಸ್ಮ ವಿಸರ್ಜನೆ ಮಾಡಬೇಕು ಎಂಬ ತೀರ್ಮಾನ ಕೂಡ ಮಾಡಿದ್ದಾರಂತೆ ದೊಡ್ಡಣ್ಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌