ಆ್ಯಪ್ನಗರ

ಕನ್ನಡಕ್ಕೆ ಬರಲಿದ್ದಾರಾ ಅಮಿತಾಬ್‌ ಬಚ್ಚನ್‌?

ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಕನ್ನಡ ಸಿನಿಮಾದಲ್ಲಿ ಮತ್ತೆ ನಟಿಸಲಿದ್ದಾರಾ? ಹೀಗೊಂದು ಪ್ರಶ್ನೆ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

Vijaya Karnataka 6 Aug 2018, 5:00 am
ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಕನ್ನಡ ಸಿನಿಮಾದಲ್ಲಿ ಮತ್ತೆ ನಟಿಸಲಿದ್ದಾರಾ? ಹೀಗೊಂದು ಪ್ರಶ್ನೆ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಕಾರಣ ನಿರ್ದೇಶಕ ರಿಷಬ್‌ ಶೆಟ್ಟಿ ಅಮಿತಾಬ್‌ರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ. ಅಮಿತಾಬ್‌ ಬಚ್ಚನ್‌ ಈ ಮೊದಲು ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಗೆಸ್ಟ್‌ರೋಲ್‌ನಲ್ಲಿ ನಟಿಸಿದ್ದರು.
Vijaya Karnataka Web amitab


ಅಮಿತಾಬ್‌ಗೆಂದೇ ಹೊಸ ಕತೆಯೊಂದನ್ನು ಬರೆದಿರುವ ರಿಷಬ್‌ ಸ್ಕ್ರಿಪ್ಟ್‌ ಹಿಡಿದು ಮುಂಬೈಗೆ ಹೋಗಿದ್ದಾರೆ. ಈಗಾಗಲೆ ಅಮಿತಾಬ್‌ರನ್ನು ಭೇಟಿ ಮಾಡಿ ಕತೆಯನ್ನೂ ಹೇಳಿದ್ದಾರಂತೆ. 'ಸ್ಕ್ರಿಪ್ಟ್‌ ಮೊದಲ ಭಾಗವನ್ನು ಅಮಿತಾಬ್‌ ಕೇಳಿಸಿಕೊಂಡಿದ್ದಾರೆ. ಇಷ್ಟಪಟ್ಟಿದ್ದಾರೆ. ಮಾತುಕತೆ ನಡೆದಿದೆ' ಎಂದಿದ್ದಾರೆ. ಕತೆಯನ್ನು ಇನ್ನೂ ಪೂರ್ಣವಾಗಿಲ್ಲ ಎಂದಿದ್ದಾರೆ ರಿಷಬ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌