ಆ್ಯಪ್ನಗರ

ನಾನು ಗೆಲ್ಲುತ್ತೇನೆ ಎಂದ ಶ್ರುತಿ

ಮೀಟೂ ಆರೋಪದ ಬಳಿಕ ನಟಿ ಶ್ರುತಿ ಹರಿಹರನ್‌ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡು, ಮತ್ತೆ ಮೀಟೂ ಬಗ್ಗೆ ಮಾತನಾಡಿದ್ದಾರೆ.

Vijaya Karnataka 12 Nov 2018, 5:00 am
ಮೀಟೂ ಆರೋಪದ ಬಳಿಕ ನಟಿ ಶ್ರುತಿ ಹರಿಹರನ್‌ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡು, ಮತ್ತೆ ಮೀಟೂ ಬಗ್ಗೆ ಮಾತನಾಡಿದ್ದಾರೆ. ಟೈಮ್ಸ್‌ ಗ್ರೂಪ್‌ನ ಪತ್ರಿಕೆ ಬೆಂಗಳೂರು ಟೈಮ್ಸ್‌ ಏರ್ಪಡಿಸಿದ್ದ ಫ್ರೆಶ್‌ ಫೇಸ್‌ ಸೀಸನ್‌ 11ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಜೀವನದಲ್ಲಿ ಸೋಲು ಗೆಲುವು ಇದ್ದದ್ದೆ. ನಾನೂ ಕೂಡ ಬದುಕಿನಲ್ಲಿ ಹಲವು ಬಾರಿ ಸೋತಿದ್ದೇನೆ. ಮೀಟೂ ಪ್ರಕರಣದ ಮಧ್ಯೆಯೂ ಸೋಲಿನ ಕಹಿ ಅನುಭವಿಸಿದ್ದೇನೆ. ಆದರೂ, ಇವತ್ತಲ್ಲ ನಾಳೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ತುಂಬಾ ಪಾಸಿಟಿವ್‌ ಆಗಿ ನಾನು ಯೋಚಿಸುತ್ತಿದ್ದೇನೆ. ಹಾಗಾಗಿಯೇ ಖುಷಿಯಿಂದ ಇರುವುದಕ್ಕೆ ಸಾಧ್ಯವಾಗುತ್ತಿದೆ' ಎಂದಿದ್ದಾರೆ ಶ್ರುತಿ.
Vijaya Karnataka Web shruthi hariharan


'ನಾನು ಪ್ರಾಮಾಣಿಕಳಾಗಿದ್ದೇನೆ. ಪ್ರತಿಶತ ನೂರಕ್ಕೆ ನೂರರಷ್ಟು ಪ್ರಾಮಾಣಿಕತೆ ನಮ್ಮಲ್ಲಿದ್ದರೆ, ಯಾವತ್ತೋ ಒಂದು ದಿನ ಗೆಲುವು ನಮ್ಮದಾಗುತ್ತದೆ. ಆ ನಂಬಿಕೆಯಲ್ಲಿಯೇ ನಾನು ಹೋರಾಟ ಮಾಡುತ್ತಿದ್ದೇನೆ. ಇವತ್ತು ನಾನು ಸೋಲುತ್ತಿದ್ದೇನೆ ಅಂತ ಅನಿಸಬಹುದು. ಆಗಂತ ಧೈರ್ಯ ಕಳೆದುಕೊಂಡಿಲ್ಲ. ಗೆಲ್ಲಲು ಮತ್ತೆ ಪ್ರಯತ್ನ ಮಾಡುತ್ತೇನೆ. ಮೀಟೂ ಪ್ರಕರಣದಲ್ಲಿ ಸಕಾರಾತ್ಮಕವಾಗಿ ಇರೋದು ನನಗೆ ತುಂಬಾ ಅಗತ್ಯವಿದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ' ಎನ್ನುವುದು ಶ್ರುತಿ ಮಾತು.

ಮೀಟೂ ಆರೋಪದ ನಂತರ ಶ್ರುತಿ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಹರಿದಾಡುತ್ತಿತ್ತು. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದೂ ಸುದ್ದಿ ಆಗಿತ್ತು. ಆದರೆ, ಅವೆಲ್ಲವನ್ನೂ ಸುಳ್ಳಾಗಿಸಿದ್ದಾರೆ ಶ್ರುತಿ ಹರಿಹರನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌