ಆ್ಯಪ್ನಗರ

'ಮುಗುಳು ನಗೆ'ಯಿಂದ ಮಾಯವಾದ ಅಮೂಲ್ಯ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ಮೂರನೇ ಚಿತ್ರ 'ಮುಗುಳು ನಗೆ'ಯಿಂದ ನಟಿ ಅಮೂಲ್ಯ ಹೊರನಡೆದಿದ್ದಾರೆ.

ವಿಕ ಸುದ್ದಿಲೋಕ 16 Mar 2017, 1:19 pm
ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ಮೂರನೇ ಚಿತ್ರ 'ಮುಗುಳು ನಗೆ'ಯಿಂದ ನಟಿ ಅಮೂಲ್ಯ ಹೊರನಡೆದಿದ್ದಾರೆ.
Vijaya Karnataka Web amulya out from mugulunage movie
'ಮುಗುಳು ನಗೆ'ಯಿಂದ ಮಾಯವಾದ ಅಮೂಲ್ಯ


ಇತ್ತೀಚೆಗಷ್ಟೇ ಜಗದೀಶ್‌ ಆರ್‌. ಚಂದ್ರ ಜತೆ ಅಮೂಲ್ಯ ನಿಶ್ಚಿತಾರ್ಥ ನಡೆಯಿತು. ಮೇ ತಿಂಗಳಲ್ಲಿ ನಡೆಯುವ ಮದುವೆಗೆ ತಯಾರಿಯೂ ಜೋರಾಗಿದೆ. ಈ ನಡುವೆ ಅಮೂಲ್ಯ ಡೇಟ್‌ ಹೊಂದಾಣಿಕೆ ಆಗದ ಕಾರಣ ನಿರ್ದೇಶಕ ಯೋಗರಾಜ್‌ ಭಟ್‌, ಅಮೂಲ್ಯ ಅವರನ್ನು 'ಮುಗುಳು ನಗೆ' ಚಿತ್ರದಿಂದ ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪರಸ್ಪರ ಯಾವುದೇ ಮುನಿಸುಗಳಿಲ್ಲದೆ ನಟಿಯ ಬದಲಾವಣೆಗೆ ಮುಂದಾಗಿದ್ದಾರೆ ಯೋಗರಾಜ್‌ ಭಟ್‌.

ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ನಾಯಕಿಯಾಗಿ ಆಯ್ಕೆಗೊಂಡಿದ್ದ ಅಮೂಲ್ಯ, ಫೋಟೋಶೂಟ್‌ನಲ್ಲೂ ಪಾಲ್ಗೊಂಡಿದ್ದರು. ಸದ್ಯಕ್ಕೆ ಅಮೂಲ್ಯ ಜಾಗವನ್ನು 'ಸಿದ್ದಾರ್ಥ' ಚಿತ್ರದ ನಾಯಕಿ ಅಪೂರ್ವ ಅರೋರಾ ತುಂಬಲಿದ್ದಾರೆ. ವಿನಯ್‌ ರಾಜ್‌ಕುಮಾರ್‌ ಅಭಿನಯದ 'ಸಿದ್ದಾರ್ಥ್‌' ಚಿತ್ರದ ಮೂಲಕ ಅಪೂರ್ವ ಅರೋರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು.

'ಮುಗುಳು ನಗೆ' ಚಿತ್ರಕ್ಕೆ ಅಮೂಲ್ಯ ಜತೆ 'ಕ್ರೇಜಿ ಬಾಯ್‌' ಖ್ಯಾತಿಯ ಆಶಿಕಾ ರಂಗನಾಥ್ ಮತ್ತು 'ಮಡಮಕ್ಕಿ' ನಾಯಕಿ ನಿಖಿತಾ ನಾರಾಯಣ್ ಕೂಡ ಆಯ್ಕೆಯಾಗಿದ್ದರು. ಯೋಗರಾಜ್ ಭಟ್ ಮೂವೀಸ್, ಗೋಲ್ಡನ್ ಮೂವೀಸ್ ಹಾಗೂ ಸೈಯದ್ ಸಲಾಮ್ ಜಂಟಿ ನಿರ್ಮಾಣದಲ್ಲಿ ಸಿನಿಮಾ ಸಿದ್ಧವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌