ಆ್ಯಪ್ನಗರ

ಎಂಬತ್ತು ದಿನಗಳ ಕಾಲ ಕಾಡಿನಲ್ಲೇ ಇದ್ದ ಕನ್ನಡದ ಅಶ್ವಿನಿ

ಸ್ಯಾಂಡಲ್‌ವುಡ್‌ನ ಮತ್ತೋರ್ವ ನಟಿಗೆ ತಮಿಳಿನಲ್ಲಿ ಸಖತ್‌ ಡಿಮಾಂಡ್‌ ಸೃಷ್ಟಿಯಾಗಿದೆ. ಕನ್ನಡದಲ್ಲಿ ಮಾಡೆಲ್‌ ಕಂ ನಟಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಚಂದ್ರಶೇಖರ್‌, ತಮಿಳಿನ ಮರಗಾಥ ಕಾಡು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್‌ ಅನ್ನು ಖ್ಯಾತ ನಟರು ಮೆಚ್ಚಿಕೊಂಡಿದ್ದಾರೆ.

Vijaya Karnataka 10 Sep 2018, 3:28 pm
* ಶರಣು ಹುಲ್ಲೂರು
Vijaya Karnataka Web ashwini-chandrashekar


ಏಕಕಾಲಕ್ಕೆ ತೆಲುಗು ಮತ್ತು ಮಲೆಯಾಳಂ ಸಿನಿಮಾಗಳಿಗೆ ಸಹಿ ಮಾಡಿ ಅಚ್ಚರಿ ಮೂಡಿಸಿದ್ದರು ಕನ್ನಡದ ಹುಡುಗಿ ಅಶ್ವಿನಿ ಚಂದ್ರಶೇಖರ್‌. ಈಗ ಇವರಿಗೆ ತಮಿಳಿನಲ್ಲೂ ಡಿಮಾಂಡ್‌ ಕ್ರಿಯೇಟ್‌ ಆಗಿದೆ. ಅಶ್ವಿನಿ ನಾಯಕಿಯಾಗಿ ನಟಿಸಿರುವ 'ಮರಗಾಥ ಕಾಡು' ಸಿನಿಮಾದ ಬಗ್ಗೆ ಕಾಲಿವುಡ್‌ನ ಅನೇಕ ಸ್ಟಾರ್‌ ನಟರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಿನಿಮಾದ ಅನುಭವ ಮತ್ತು ಈ ಸಿನಿಮಾದಿಂದಾಗಿ ತಮ್ಮ ಹೆಸರನ್ನು ರಾಂಚನಾ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಎಲ್ಲದರ ಕುರಿತು ಲವಲವಿಕೆ ಜತೆ ಮಾತನಾಡಿದ್ದಾರೆ.

*ಮರಗಾಥ ಕಾಡು ಸಿನಿಮಾದ ಕುರಿತಾಗಿ ಕಾಲಿವುಡ್‌ನಲ್ಲಿ ಒಳ್ಳೊಳ್ಳೆ ಮಾತು ಕೇಳಿ ಬರುತ್ತಿವೆ. ಈ ಕುರಿತು ಏನು ಹೇಳುತ್ತೀರಿ?

ಎಲ್ಲರೂ ಹೊಗಳುವಂಥ ಸಿನಿಮಾದಲ್ಲಿ ನಾನು ನಾಯಕಿಯಾಗಿ ನಟಿಸಿದ್ದೇನೆ ಎನ್ನುವುದಕ್ಕೆ ಹೆಮ್ಮೆ ಪಡುತ್ತೇನೆ. ವಿಶಾಲ್‌, ವಿವೇಕ್‌, ವಿಜಯ್‌ ಸೇತುಪತಿ ಹೀಗೆ ಅನೇಕ ಕಲಾವಿದರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಖುಷಿ ಆಗುತ್ತಿದೆ.

* ಮೊದಲ ಬಾರಿಗೆ ನೀವು ಬುಡಕಟ್ಟು ಜನಾಂಗದ ಹುಡುಗಿಯಾಗಿ ನಟಿಸಿದ್ದೀರಿ. ತಯಾರಿ ಹೇಗಿತ್ತು?

ಜೀವಮಾನದಲ್ಲಿ ಒಂದಷ್ಟು ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅಂತಹ ಪಾತ್ರ ನನಗೆ ಬೇಗ ಸಿಕ್ಕಿದೆ. ಮರಗಾಥ ಕಾಡು ಅಂದರೆ ಕನ್ನಡದಲ್ಲಿ ನರಕದ ಕಾಡು ಎಂದರ್ಥ. ಇಡೀ ಸಿನಿಮಾ ಕಾಡಿನಲ್ಲೇ ನಡೆಯುತ್ತದೆ. ಅದೂ ಬುಡಕಟ್ಟು ಜನರು ವಾಸವಿರುವ ಕಾಡಿನಲ್ಲಿ. ಅದೊಂದು ಮರೆಯಲಾಗದ ಅನುಭವ. ಈ ಪಾತ್ರಕ್ಕಾಗಿ ನಾನು ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡಿದೆ. ಆ ಹುಡುಗಿಯರ ಆಚಾರ ವಿಚಾರಗಳನ್ನು ತಿಳಿದುಕೊಂಡೆ. ಎಂಬತ್ತು ದಿನಗಳ ಕಾಲ ನಾನು ಕಾಡಿನಲ್ಲೇ ಇದ್ದು ಶೂಟಿಂಗ್‌ ಮಾಡಿದೆವು.

* ಈ ಸಿನಿಮಾದ ವಿಶೇಷತೆ ಏನು?

ಬುಡಕಟ್ಟು ಜನರ ಸ್ಥಿತಿಗತಿಯನ್ನು ಹೇಳುವ ಸಿನಿಮಾ ಇದಾಗಿದೆ. ದಟ್ಟ ಕಾಡಿನಲ್ಲಿ ಶೂಟ್‌ ಆಗಿರುವ ಅಪರೂಪದ ಚಿತ್ರವಿದು. ತಮಿಳು ನಾಡು ಮತ್ತು ಕೇರಳದ ಗಡಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕರು. ಮತ್ತೊಂದು ವಿಶೇಷವೆಂದರೆ ರಜನಿಕಾಂತ್‌, ಕಮಲ್‌ ಹಾಸನ್‌ರಂಥ ಮಹಾನ್‌ ಕಲಾವಿದರ ಸಿನಿಮಾ ಮಾಡಿರುವ ಆರ್‌.ಆರ್‌. ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಒಂದೊಳ್ಳೆಯ ಪ್ರಯತ್ನ ಎಂದು ಎಲ್ಲರೂ ಈಗ ಮಾತನಾಡಿದ್ದಾರೆ.

* ತೆಲುಗು ಮತ್ತು ಮಲೆಯಾಳಂ ಸಿನಿಮಾದಲ್ಲೂ ನೀವು ನಟಿಸುತ್ತಿದ್ದೀರಿ?

ಹೌದು, ಈ ಎರಡೂ ಚಿತ್ರಗಳಲ್ಲೂ ಹೆಸರಾಂತ ನಟರು ಮತ್ತು ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ತೆಲುಗಿನ ಸಿನಿಮಾದಲ್ಲಿ ಹಿರಿಯ ನಟ ಪ್ರಭು ಪುತ್ರ ವಿಕ್ರಮ್‌ ಪ್ರಭು ನಾಯಕನಾಗಿ ನಟಿಸುತ್ತಿದ್ದರೆ, ಮಲೆಯಾಳಂ ಚಿತ್ರದಲ್ಲಿ ಮೋಹನ್‌ ಲಾಲ್‌ ಮತ್ತು ನವೀನ್‌ ಪೌಲ್‌ರ ಕಾಂಬಿನೇಷನ್‌ ಇದೆ. ನೋಟ್‌ಬುಕ್‌ ಚಿತ್ರ ಖ್ಯಾತಿಯ ನಿರ್ದೇಶಕ ರೋಷನ್‌ ಆಂಡ್ರೋ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲೂ ನಾನು ವಿಭಿನ್ನ ಪಾತ್ರ ಮಾಡುತ್ತಿದ್ದೇನೆ.

ಪರಿಸರ ಕಾಳಜಿ ಹೊಂದಿರುವಂಥ ಸಿನಿಮಾದಲ್ಲಿ ನಾನು ಟ್ರೈಬಲ್‌ ಹುಡುಗಿಯಾಗಿ ನಟಿಸಿದ್ದೇನೆ. 80 ದಿನಗಳ ಕಾಲ ಕಾಡಿನಲ್ಲಿ ಇದ್ದೆ. ಈ ಸಿನಿಮಾದಲ್ಲಿ ನಿಜವಾದ ಟ್ರೈಬಲ್‌ ಜನರೂ ಇದ್ದಾರೆ. ಟಿಪಿಕಲ್‌ ಲೈಫ್‌ ಸ್ಟೈಲ್‌ನ ಸಿನಿಮಾ ಇದಾಗಿದೆ.
ರಾಂಚನಾ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌