ಆ್ಯಪ್ನಗರ

ಎರಡು ಧರ್ಮಗಳ ಕಥೆಯೇ ಅನಂತ್‌ ವಸರ್ಸ ನಸ್ರುತ್‌

ಮಾನವೀಯ ಸಂಬಂಧಗಳ ಜತೆಗೆ ಅಪರೂಪದ ಪ್ರೇಮಕಥೆಯನ್ನು 'ಅನಂತು ವರ್ಸಸ್‌ ನುಸ್ರತ್‌' ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕ ಸುಧೀರ್‌ ಶಾನುಭೋಗ್‌.

Vijaya Karnataka 27 Dec 2018, 11:41 am
*ಶರಣು ಹುಲ್ಲೂರು
Vijaya Karnataka Web Aana


ಎರಡು ಧರ್ಮಗಳ ನಡುವಿನ ಅಪರೂಪದ ಕಥೆ 'ಅನಂತು ವರ್ಸಸ್‌ ನುಸ್ರುತ್‌' ಸಿನಿಮಾದಲ್ಲಿದೆ. ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವಂಥ ಚಿತ್ರ ಇದಾಗಿದ್ದರಿಂದ ತಾವು ಈ ಚಿತ್ರವನ್ನು ನಿರ್ಮಾಣ ಮಾಡಬೇಕಾಯಿತು ಎಂದು ಹೇಳಿದ್ದಾರೆ ನಿರ್ಮಾಪಕ ಚೇತನ್‌.

'ಸದ್ಯದ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಇಂಥದ್ದೊಂದು ಚಿತ್ರ ಅವಶ್ಯಕತೆಯಿದೆ. ಕೌಟುಂಬಿಕ ಮೌಲ್ಯಗಳನ್ನು ಹೇಳುವ ಸಿನಿಮಾ ಇದಾಗಿದ್ದು, ಪ್ರೇಮಕಥೆ ಕೂಡ ಬೆರೆತಿದೆ. ಹೀಗಾಗಿ ಇದು ಎಲ್ಲರಿಗೂ ಇಷ್ಟವಾಗುವ ಸಿನಿಮಾ' ಎಂದರು ನಿರ್ಮಾಪಕರು.

'ಕಥಾನಾಯಕನ ಪಾತ್ರಕ್ಕೆ ಎರಡು ಶೇಡ್‌ ಇದೆ. ವಿನಯ್‌ ರಾಜ್‌ಕುಮಾರ್‌ ಅವರಿಗೆ ಈ ಪಾತ್ರ ಸರಿಯಾಗಿ ಒಪ್ಪುತ್ತಿತ್ತು. ಹಾಗಾಗಿ ಮೊದಲು ಅವರಿಗೆ ಕಥೆ ಹೇಳಿದೆವು. ಅವರು ಕೂಡ ಪಾತ್ರ ಒಪ್ಪಿಕೊಂಡರು. ಪಾತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದರು ಚೇತನ್‌.

ಇದು ಸುಧೀರ್‌ ಶಾನುಭೋಗ್‌ ನಿರ್ದೇಶನದ ಸಿನಿಮಾ. ಮಾಣಿಕ್ಯ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಚಿತ್ರ ಮೂಡಿ ಬಂದಿದ್ದು, ಈ ವಾರ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌