ಆ್ಯಪ್ನಗರ

ರಂಗ ಮಂದಿರದಲ್ಲಿ ರಗಡ್‌ ಲುಕ್‌ನಲ್ಲಿ ಆಶು ಬೆದ್ರ

ನಟ ಆಶು ಬೆದ್ರ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದವರು. ಸಿಂಪಲ್‌ ಸುನಿ ನಿರ್ದೇಶನದ ಸಿಂಪಲ್ಲಾಗಿ ಇನ್ನೊಂದು ಲವ್‌ ಸ್ಟೋರಿ ಚಿತ್ರ ನಿರ್ಮಾಣ ಮಾಡಿದ್ದ ಅವರು ಅದಾದ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅಳಿದು ಉಳಿದವರು ಚಿತ್ರದಲ್ಲಿ ಮೆಚ್ಯೂರ್ಡ್‌ ಪಾತ್ರದಲ್ಲಿ ನಟಿಸಿರುವ ಆಶು ಈಗ ರಂಗ ಮಂದಿರ ಚಿತ್ರದಲ್ಲಿ ಮಾಸ್‌ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಳಿದು ಉಳಿದವರು ಚಿತ್ರದಲ್ಲಿ ಟಿವಿ ನ್ಯೂಸ್‌ ಆ್ಯಂಕರ್‌ ಪಾತ್ರದಲ್ಲಿ ನಟಿಸಿದ್ದಾರೆ ಆಶು. 'ಇದೊಂದು ಮೆಚ್ಯೂರ್ಡ್‌ ಪಾತ್ರ. ಬಹಳ ಗಂಭೀರವಾದ, ತನ್ನದೇ ಸ್ಪಷ್ಟ ನಿಲುವು ಇರುವ ಯುವಕನ ಪಾತ್ರ.

Vijaya Karnataka 14 Dec 2018, 8:17 am
ಸಿಂಪಲ್ಲಾಗಿ ಇನ್ನೊಂದ್‌ ಲವ್‌ ಸ್ಟೋರಿ ಚಿತ್ರ ನಿರ್ಮಾಣ ಮಾಡಿದ ನಂತರ ನಟ ಆಶು ಬೆದ್ರ ಹೊಸ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಂಗ ಮಂದಿರ ಹೆಸರಿನ ವಿಭಿನ್ನ ಕಥಾವಸ್ತುವಿನ ಸಿನಿಮಾ ಇದಾಗಿದೆ.
Vijaya Karnataka Web ashu


ನಟ ಆಶು ಬೆದ್ರ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದವರು. ಸಿಂಪಲ್‌ ಸುನಿ ನಿರ್ದೇಶನದ ಸಿಂಪಲ್ಲಾಗಿ ಇನ್ನೊಂದು ಲವ್‌ ಸ್ಟೋರಿ ಚಿತ್ರ ನಿರ್ಮಾಣ ಮಾಡಿದ್ದ ಅವರು ಅದಾದ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅಳಿದು ಉಳಿದವರು ಚಿತ್ರದಲ್ಲಿ ಮೆಚ್ಯೂರ್ಡ್‌ ಪಾತ್ರದಲ್ಲಿ ನಟಿಸಿರುವ ಆಶು ಈಗ ರಂಗ ಮಂದಿರ ಚಿತ್ರದಲ್ಲಿ ಮಾಸ್‌ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅಳಿದು ಉಳಿದವರು ಚಿತ್ರದಲ್ಲಿ ಟಿವಿ ನ್ಯೂಸ್‌ ಆ್ಯಂಕರ್‌ ಪಾತ್ರದಲ್ಲಿ ನಟಿಸಿದ್ದಾರೆ ಆಶು. 'ಇದೊಂದು ಮೆಚ್ಯೂರ್ಡ್‌ ಪಾತ್ರ. ಬಹಳ ಗಂಭೀರವಾದ, ತನ್ನದೇ ಸ್ಪಷ್ಟ ನಿಲುವು ಇರುವ ಯುವಕನ ಪಾತ್ರ. ಆದರೆ, ರಂಗ ಮಂದಿರ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧ ಪಾತ್ರ. ಹುಡುಗರಿಗೆ ಇಷ್ಟವಾಗುವ ರಗಡ್‌ ಕ್ಯಾರೆಕ್ಟರ್‌' ಎಂದಿದ್ದಾರೆ ಅವರು. ಗಲ್ಲಿ ಹುಡುಗ ಮಾಡುವ ತಪ್ಪುಗಳು ಸಮಾಜಕ್ಕೆ ಹೇಗೆ ಮಾರಕವಾಗುತ್ತೆ, ಕೊನೆಗೆ ಅವನು ಹೇಗೆ ಬುದ್ಧಿ ಕಲಿಯುತ್ತಾನೆ ಎನ್ನುವುದು ಸಿನಿಮಾದ ಸಾರ.

ಶಾಹುರಾಜ್‌ ಶಿಂಧೆ ನಿರ್ದೇಶನದ ರಂಗ ಮಂದಿರ ಚಿತ್ರದಲ್ಲಿ ಆಶು ಬೆದ್ರಗೆ ಜೋಡಿಯಾಗಿ ಆಶಿಕಾ ರಂಗನಾಥ್‌ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಇನ್ನೊಂದು ಮುಖ್ಯ ಪಾತ್ರದಲ್ಲಿ ಪ್ರವೀಣ್‌ ನಟಿಸಿದ್ದಾರೆ. ಅಲ್ಲದೆ, ಬಿಗ್‌ ಬಾಸ್‌ನ ಸ್ಪರ್ಧಿಯಾಗಿದ್ದ ಶ್ರುತಿ ಪ್ರಕಾಶ್‌, ಅನುಪಮಾ ಗೌಡ ಕೂಡಾ ನಾಯಕಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 'ಜೀವನ ಎನ್ನುವುದು ಒಂದು ರಂಗ ಮಂದಿರ ಇದ್ದಂತೆ. ನಾವೆಲ್ಲಾ ಪಾತ್ರಧಾರಿಗಳು. ಬಂದು ಹೋಗುವವರು. ಈ ಸಿನಿಮಾದಲ್ಲಿ ರಂಗಮಂದಿರ ಎಂದರೆ ಪ್ರಪಂಚ' ಎನ್ನುತ್ತಾರೆ ಆಶು ಬೆದ್ರ. ಇಲ್ಲಿಯವರೆಗೆ ಕಲಿತಿದ್ದನ್ನೆಲ್ಲಾ ಮಿಥ್‌ ಆಗಿ ಒಡೆಯುತ್ತಿದ್ದೇವೆ ಎನ್ನುತ್ತಾರೆ ಅವರು. ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ತಮಿಳಿನ ಶರವಣನ್‌ ಛಾಯಾಗ್ರಹಣವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌