ಆ್ಯಪ್ನಗರ

5 ವರ್ಷಗಳ ಹಿಂದೆಯೇ ಸಮಂತಾ-ನಾಗ ಚೈತನ್ಯ ವಿಚ್ಛೇದನದ ಸುಳಿವು ನೀಡಿದ್ದ ಜ್ಯೋತಿಷಿಯ ವಿಡಿಯೋ ವೈರಲ್!

ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜ್ಯೋತಿಷಿಯೊಬ್ಬರು ಐದು ವರ್ಷಗಳ ಹಿಂದೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಅದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಯದ್ವಾತದ್ವಾ ವೈರಲ್ ಆಗಿದೆ.

Vijaya Karnataka Web 25 Sep 2021, 9:54 am
ಟಾಲಿವುಡ್‌ನಲ್ಲೀಗ ನಟಿ ಸಮಂತಾ ಮತ್ತು ಪತಿ ನಾಗ ಚೈತನ್ಯ ಬಗ್ಗೆಯೇ ಗುಸುಗುಸು ಕೇಳಿಬರುತ್ತಿದೆ. ‘’ನಾಗ ಚೈತನ್ಯ ಮತ್ತು ಸಮಂತಾ ಮಧ್ಯೆ ಎಲ್ಲವೂ ಸರಿಯಿಲ್ಲ. ಇಬ್ಬರ ಮಧ್ಯೆ ಮನಸ್ತಾಪ ಮೂಡಿದೆ. ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸದ್ಯದಲ್ಲೇ ನಟ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲಿದ್ದಾರಂತೆ’’ ಎಂಬ ಅಂತೆ ಕಂತೆ ತೆಲುಗು ಸಿನಿ ಅಂಗಳದ ತುಂಬೆಲ್ಲಾ ಹಾರಾಡುತ್ತಿದೆ. ಹೀಗಿರುವಾಗಲೇ ಹಳೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Vijaya Karnataka Web astrologer venu swamy prediction video about samantha and naga chaitanya divorce becomes viral
5 ವರ್ಷಗಳ ಹಿಂದೆಯೇ ಸಮಂತಾ-ನಾಗ ಚೈತನ್ಯ ವಿಚ್ಛೇದನದ ಸುಳಿವು ನೀಡಿದ್ದ ಜ್ಯೋತಿಷಿಯ ವಿಡಿಯೋ ವೈರಲ್!


ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜ್ಯೋತಿಷಿಯೊಬ್ಬರು ಐದು ವರ್ಷಗಳ ಹಿಂದೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಅದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಯದ್ವಾತದ್ವಾ ವೈರಲ್ ಆಗಿದೆ.

2016ರಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿರುವ ವಿಡಿಯೋದಲ್ಲಿ ನಟಿ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ವೇಣು ಸ್ವಾಮಿ ಎಂಬ ಜ್ಯೋತಿಷಿ ಭವಿಷ್ಯ ನುಡಿದಿದ್ದರು. ‘’ಸಮಂತಾ ಹಾಗೂ ನಾಗ ಚೈತನ್ಯ ಜಾತಕದಲ್ಲಿ ದೋಷಗಳಿವೆ. ಇಬ್ಬರೂ ದೂರ ದೂರ ಇರಬೇಕಾಗುತ್ತದೆ’’ ಎಂದು ಜ್ಯೋತಿಷಿ ವೇಣು ಸ್ವಾಮಿ ಅಂದು ಹೇಳಿದ್ದರು.

ಅಂದು ವೇಣು ಸ್ವಾಮಿ ಹೇಳಿದ್ದೇನು?

‘’ಸಮಂತಾ ಮತ್ತು ನಾಗ ಚೈತನ್ಯ ಜಾತಕದಲ್ಲಿ ಕೆಲ ದೋಷಗಳಿವೆ. ಇಬ್ಬರು ದೂರ ದೂರ ಇರಬೇಕಾಗುತ್ತದೆ. ನಾಗ ಚೈತನ್ಯಗೆ ತಂದೆಯಾಗುವ ಯೋಗ ಕಮ್ಮಿಇದೆ’’ ಎಂದು ವರ್ಷಗಳ ಹಿಂದೆಯೇ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು.

ಇನ್ನೂ ‘’ಸಮಂತಾ ಅಮಾವಾಸ್ಯೆಯ ದಿನ ಹುಟ್ಟಿದ್ದು. ಸಮಂತಾ ಜಾತಕದಲ್ಲಿ ಶುಕ್ರ ನೀಚವಾಗಿದ್ದಾನೆ. ಸಮಂತಾ - ನಾಗ ಚೈತನ್ಯ ಮದುವೆಯಾದರೂ ಕೆಲವೇ ವರ್ಷಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಖಚಿತವಾಗಿ ಬಂದೇ ಬರುತ್ತದೆ. 100ಕ್ಕೆ 100ರಷ್ಟು ಇಬ್ಬರ ಮಧ್ಯೆ ಗ್ಯಾಪ್ ಸೃಷ್ಟಿಯಾಗುತ್ತದೆ’’ ಎಂದು ವೇಣು ಸ್ವಾಮಿ ಹೇಳಿದ್ದರು. ಸಮಂತಾ ಮತ್ತು ನಾಗ ಚೈತನ್ಯ ಮದುವೆಯಾಗುವ ಮುನ್ನವೇ ಜಾತಕ ವಿಮರ್ಶೆ ಮಾಡಿ ವೈವಾಹಿಕ ಸಮಸ್ಯೆಯ ಬಗ್ಗೆ ವೇಣು ಸ್ವಾಮಿ ಸುಳಿವು ನೀಡಿದ್ದರು.

‘ಬುದ್ದಿ ಇದ್ಯಾ?’: ಗಾಸಿಪ್ ಬಗ್ಗೆ ಪ್ರಶ್ನೆ ಕೇಳಿದ ರಿಪೋರ್ಟರ್‌ ವಿರುದ್ಧ ಸಮಂತಾ ನಿಗಿ ನಿಗಿ ಕೆಂಡ!

2017ರಲ್ಲಿ ಮದುವೆಯಾಗಿದ್ದ ಸಮಂತಾ-ನಾಗ ಚೈತನ್ಯ

ವರ್ಷಗಳ ಕಾಲ ಪ್ರೀತಿಸಿದ ಸಮಂತಾ ಮತ್ತು ನಾಗ ಚೈತನ್ಯ 2017ರ ಅಕ್ಟೋಬರ್ 7 ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾದ ಮೇಲೆ ನಾಗ ಚೈತನ್ಯ ಮತ್ತು ಸಮಂತಾ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಅಕ್ಟೋಬರ್ 7 ರಂದೇ ಕಾದಿದ್ಯಾ ಬ್ಯಾಡ್ ನ್ಯೂಸ್?

ಅಕ್ಟೋಬರ್ 7.. ಸಮಂತಾ ಮತ್ತು ನಾಗ ಚೈತನ್ಯ ಮದುವೆಯಾದ ದಿನ. ಬರುವ ಅಕ್ಟೋಬರ್ 7 ರಂದು ಸಮಂತಾ ಮತ್ತು ನಾಗ ಚೈತನ್ಯ ತಮ್ಮ 4ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕು. ಆದರೆ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಬದಲು ಅಂದೇ ತಾವು ದೂರಾಗುವ ಸಂಗತಿಯನ್ನು ಸಮಂತಾ ಮತ್ತು ನಾಗ ಚೈತನ್ಯ ಘೋಷಿಸಲಿದ್ದಾರೆ ಎಂಬ ಮಾತುಗಳು ತೆಲುಗು ಸಿನಿ ಅಂಗಳದಲ್ಲಿ ಕೇಳಿಬರುತ್ತಿದೆ.

ಸಮಂತಾ ಮತ್ತು ವಿಚ್ಛೇದನದ ಬಗ್ಗೆ ಮೀಡಿಯಾ ಪ್ರಶ್ನೆ ಕೇಳುವಂತಿಲ್ಲ! ವಾರ್ನಿಂಗ್ ಕೊಟ್ಟ ನಾಗ ಚೈತನ್ಯ!

ವಿಚ್ಛೇದನಕ್ಕೆ ಕಾರಣ ಇದೇನಾ?

ಮದುವೆಯಾದ್ಮೇಲೂ ಸಿನಿಮಾಗಳಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ. ಕೆಲ ಫೋಟೋಶೂಟ್‌ಗಳಲ್ಲಿ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರೀಸ್‌ನಲ್ಲಿ ಸಮಂತಾ ಅಕ್ಕಿನೇನಿ ಬೋಲ್ಡ್ ಆಗಿ ಮಿಂಚಿದ್ದರು. ಇದು ಅಕ್ಕಿನೇನಿ ಕುಟುಂಬಕ್ಕೆ ಮುಜುಗರ ಉಂಟು ಮಾಡಿದ್ಯಂತೆ. ಇದರಿಂದ ಸಮಂತಾ ಮತ್ತು ನಾಗ ಚೈತನ್ಯ ಮಧ್ಯೆ ಮನಸ್ತಾಪ ಮೂಡಿದೆ ಎಂದು ವರದಿಯಾಗಿದೆ.

ಇನ್ನೂ ವಿಚ್ಛೇದನ ಪಡೆಯಲು ಮುಂದಾಗಿರುವ ನಟಿ ಸಮಂತಾಗೆ ಜೀವನಾಂಶ ರೂಪದಲ್ಲಿ 50 ಕೋಟಿ ರೂಪಾಯಿ ಸಿಗಲಿದೆಯಂತೆ. ನಟಿ ಸಮಂತಾಗೆ ಪತಿ ನಾಗ ಚೈತನ್ಯ 50 ಕೋಟಿ ರೂಪಾಯಿ ಜೀವನಾಂಶ ನೀಡಲಿದ್ದಾರಂತೆ ಎಂಬ ಅಂತೆ-ಕಂತೆಯೂ ಹಬ್ಬಿದೆ.

ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ರಾ ಸಮಂತಾ-ನಾಗ ಚೈತನ್ಯ? ಆದರೂ ಹುಳುಕು ಹುಡುಕುವವರಿದ್ದಾರೆ!

ಸಂಧಾನ ಯಶಸ್ವಿಯಾಗಿಲ್ಲ?

ವರದಿಗಳ ಪ್ರಕಾರ, ಸಮಂತಾ ಮತ್ತು ನಾಗ ಚೈತನ್ಯ ನಡುವಿನ ಮುನಿಸಿಗೆ ಶಮನ ಹಾಡಲು ಇಬ್ಬರ ಕುಟುಂಬಸ್ಥರೂ ಪ್ರಯತ್ನಿಸಿದರಂತೆ. ವಿಚ್ಛೇದನದ ನಿರ್ಧಾರ ಬದಲಿಸುವಂತೆ ಇಬ್ಬರ ಕುಟುಂಬಸ್ಥರೂ ಸಲಹೆ ನೀಡಿದ್ದರಂತೆ. ಆದರೆ, ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸಮಂತಾ-ನಾಗ ಚೈತನ್ಯ ಸಂಧಾನ ಯಶಸ್ವಿ ಆಗಲಿಲ್ಲ ಎಂದು ವರದಿಯಾಗಿದೆ. ಮ್ಯಾರೇಜ್ ಕೌನ್ಸಿಲಿಂಗ್ ಸೆಷನ್‌ನಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ವಿಚ್ಛೇದನ ಪಡೆಯಲು ಇಬ್ಬರೂ ನಿರ್ಧರಿಸಿದ್ದಾರಂತೆ ಎಂಬ ವದಂತಿ ಹರಿದಾಡುತ್ತಿದೆ.

'ಅಕ್ಕಿನೇನಿ' ಸರ್‌ನೇಮ್‌ಗೆ ಸಮಂತಾ ಕತ್ತರಿ ಹಾಕಿದ್ದೇಕೆ? ಕೊನೆಗೂ ಈ ಬಗ್ಗೆ ಮಾತನಾಡಿದ ನಟಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌