ಆ್ಯಪ್ನಗರ

ಕೆಜಿಎಫ್‌ಗೆ ದೊಡ್ಡ ಮಟ್ಟದಲ್ಲಿ ಸೆಡ್ಡು ಹೊಡೆಯುತ್ತಿದೆ ಕನ್ನಡದ ಈ ಸಿನಿಮಾ!!

ಸಿನಿಮಾ ರಿಲೀಸ್‌ಗೂ ಮುಂಚೆ 300 ಕೋಟಿ ಗಳಿಸುವ ಆಶಯವನ್ನು ಸ್ಯಾಂಡಲ್‌ವುಡ್‌ ನಿರ್ಮಾಪಕರೊಬ್ಬರು ಹೊರಹಾಕಿದ್ದರು. ಈಗ ಈ ಸಿನಿಮಾದ ಬಗ್ಗೆ ಹೊರರಾಜ್ಯಗಳ ಪ್ರೇಕ್ಷಕರು ಕೂಡ ಆಸಕ್ತಿಯನ್ನು ಹೊಂದಿದ್ದಾರೆ, ಅದು ಎಷ್ಟರ ಮಟ್ಟಿಗೆ ಗೊತ್ತಾ?

Vijaya Karnataka Web 4 Oct 2019, 9:52 am
2016ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು, ನಿರೀಕ್ಷೆಗೂ ಮೀರಿದ ಸಕ್ಸಸ್ ನೀಡಿತ್ತು, ನಿರ್ಮಾಪಕರ ಜೇಬು ತುಂಬಿಸಿತ್ತು. ತದನಂತರದಲ್ಲಿ ರಕ್ಷಿತ್ ಅಭಿನಯದ ಯಾವ ಸಿನಿಮಾಗಳೂ ಬಿಡುಗಡೆಯಾಗಲಿಲ್ಲ. 'ಅವನೇ ಶ್ರೀಮನ್ನಾರಾಯಣ'ದಲ್ಲಿ ರಕ್ಷಿತ್ ಬಿಜಿಯಿದ್ದಾರೆ. ಅಷ್ಟೇ ಅಲ್ಲದೆ 'ಚಾರ್ಲಿ 777' ಸಿನಿಮಾದಲ್ಲೂ ರಕ್ಷಿತ್ ನಟಿಸುತ್ತಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.
Vijaya Karnataka Web yash kgf


ತಾರಾಗಣ ಹೇಗಿದೆ?
ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ, ನಾಯಕ ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿಯ ಪೋಷಾಕು ತೊಟ್ಟಿದ್ದಾರೆ. ನಟಿ ಶಾನ್ವಿ ಶ್ರೀವಾತ್ಸವ್ ಕೂಡ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ಮಧುಸೂದನ್ ರಾವ್ ಕೂಡ ಬಣ್ಣ ಹಚ್ಚಿದ್ದಾರೆ.

ಇಲ್ಲಿಯವರೆಗೆ ಶಾನ್ವಿ ಶ್ರೀವಾತ್ಸವ್ ಗ್ಲಾಮರಸ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈ ಚಿತ್ರದಲ್ಲಿ ಟ್ರೆಡಿಷನಲ್‌ ಡ್ರೆಸ್‌ನಲ್ಲಿಕಾಣಿಸಿಕೊಂಡಿದ್ದು ಶಾನ್ವಿಗೆ ಬಹಳ ಖುಷಿ ಕೊಡ್ತು. ಅವರಿಗೆ ಇಲ್ಲಿ ನಟನೆಗೆ ಹೆಚ್ಚು ಅವಕಾಶ ಸಿಕ್ಕಿತಂತೆ. ಗ್ಲಾಮರಸ್‌ ಎನ್ನಿಸಿಕೊಳ್ಳುವುದಕ್ಕಿಂತ ಅತ್ಯುತ್ತಮ ನಟಿ ಎನ್ನಿಸಿಕೊಳ್ಳಲು ಬಯಸುವೆ' ಎಂದಿದ್ದರು ಶಾನ್ವಿ.

70 ದಿನದೊಳಗೆ ಬರಲಿದ್ದಾನೆ ‘ಅವನೇ ಶ್ರೀಮನ್ನಾರಾಯಣ’, ಬಿಡುಗಡೆ ದಿನಾಂಕ ಅಂತಿಮಗೊಳಿಸಿದ ಚಿತ್ರತಂಡ

300 ಕೋಟಿ ರೂಪಾಯಿ ಗಳಿಸುತ್ತಾ?

ಇನ್ನು ಈ ಚಿತ್ರಕ್ಕೆ ಸಚಿನ್ ಡೈರೆಕ್ಷನ್, ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಹೀಗೆ ಸಾಕಷ್ಟು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಒಳಗೊಂಡಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ಕನ್ನಡ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆ ಕಾಣುತ್ತಿದೆ. ನಿರ್ಮಾಪಕರು 300 ಕೋಟಿ ರೂಪಾಯಿ ಗಳಿಸುವ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದರು. ಇವರ ಈ ಆಶಯಕ್ಕೆ ಹಲವರು ಶುಭ ಕೋರಿದ್ದರು.

ಅವನೇ ಶ್ರೀಮನ್ನಾರಾಯಣ ಟೀಮ್‌ ಬೆಸ್ಟ್‌: ಶಾನ್ವಿ

ಬೇರೆ ರಾಜ್ಯದಲ್ಲೂ ಹವಾ ಸೃಷ್ಟಿ ಮಾಡಿದ ನಾರಾಯಣ
ನಿರ್ಮಾಪಕ ಪುಷ್ಕರ್ ಟ್ವೀಟ್ ಮಾಡಿರುವಂತೆ ಹೊರ ರಾಜ್ಯದ ಪತ್ರಿಕೆಗಳ ಟಾಪ್ ಸುದ್ದಿಯಲ್ಲಿ 'ಅವನೇ ಶ್ರೀಮನ್ನಾರಾಯಣ' ಸ್ಥಾನ ಪಡೆದಿದ್ದಾನೆ. ಅಂದರೆ ಹೊರರಾಜ್ಯಗಳು ಕೂಡ ಈ ಸಿನಿಮಾ ನೋಡುವ ಇಂಗಿತ ಹೊಂದಿದ್ದಾರೆ ಎಂದಾಯಿತು. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಶ್ರೀಮನ್ನಾರಾಯಣದ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌