ಆ್ಯಪ್ನಗರ

ಅಯೋಗ್ಯ ಮಹೇಶ್‌ಗೆ ಭರ್ಜರಿ ಆಫರ್‌

ಅಯೋಗ್ಯ ಸಿನಿಮಾ ಮೂಲಕ ನಿರ್ದೇಶಕರಾದ ಮಹೇಶ್‌ಕುಮಾರ್‌ ಈಗ ಮದಗಜ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದು ಆರಂಭವಾಗುವುದೊರಳಗೆ ಅವರಿಗೆ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾದ ಸೋನಿ ಪಿಕ್ಚರ್ಸ್ನಿಂದ ಆಫರ್‌ ಬಂದಿದೆ.

Vijaya Karnataka 21 Aug 2019, 10:39 am
ಅಯೋಗ್ಯ ಸಿನಿಮಾ ಮೂಲಕ ನಿರ್ದೇಶಕರಾದ ಮಹೇಶ್‌ಕುಮಾರ್‌ ಈಗ ಮದಗಜ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದು ಆರಂಭವಾಗುವುದೊರಳಗೆ ಅವರಿಗೆ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾದ ಸೋನಿ ಪಿಕ್ಚರ್ಸ್ನಿಂದ ಆಫರ್‌ ಬಂದಿದೆ.
Vijaya Karnataka Web mahesh1


ಸತೀಶ್‌ ನೀನಾಸಂ, ರಚಿತಾ ರಾಮ್‌ , ರವಿಶಂಕರ್‌ ನಟನೆಯ ಅಯೋಗ್ಯ ಸಿನಿಮಾ ಕಳೆದ ವರ್ಷದ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾ. ಈ ಸಿನಿಮಾ ಆದ ಮೇಲೆ ಮಹೇಶ್‌ಕುಮಾರ್‌ ಶ್ರೀಮುರುಳಿ ನಾಯಕತ್ವದಲ್ಲಿಮದಗಜ ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಇದೇ ಸಮಯದಲ್ಲಿಅವರಿಗೆ ಒಂದಷ್ಟು ಪ್ರಶಸ್ತಿಗಳು ಅರಸಿಕೊಂಡು ಬಂದಿದ್ದವು. ಈಗ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಸೋನಿ ಪಿಕ್ಚರ್ಸ್ ವತಿಯಿಂದ ಸಿನಿಮಾ ಮಾಡಲು ಅವರಿಗೆ ಆಫರ್‌ ಬಂದಿದೆ.

'ನನ್ನ ಮೊದಲ ಸಿನಿಮಾಗೆ ಇಷ್ಟೊಂದು ಗೌರವ ಸಿಗುತ್ತಿರುವುದು ನನಗೆ ಖುಷಿಯ ವಿಚಾರ. ಸೋನಿ ಪಿಕ್ಚರ್ಸ್ನವರು ನನ್ನ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ ಎಂದರೆ ನನಗೆ ಅದಕ್ಕಿಂತಲೂ ಅದೃಷ್ಟ ಬೇರೊಂದಿಲ್ಲ. ಮದಗಜ ಸಿನಿಮಾದ ನಂತರ ನಾನು ಅದನ್ನು ಮಾಡುತ್ತೇನೆ. ಉತ್ತಮ ಕಥೆಯ ಮೂಲಕ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕನ್ನಡಕ್ಕೆ ಕರೆತರುತ್ತೇನೆ. ಇದೆಲ್ಲವೂ ಸಾಧ್ಯವಾಗಿದ್ದು, ನನ್ನ ತಂಡದ ಒಟ್ಟು ಶ್ರಮ ಮತ್ತು ಕನ್ನಡಿಗರ ಪ್ರೀತಿಯಿಂದ'ಎನ್ನುತ್ತಾರೆ ಮಹೇಶ್‌ಕುಮಾರ್‌.

ಒಟ್ಟಿನಲ್ಲಿಮಾಡಿದ್ದು ಒಂದೇ ಸಿನಿಮಾ ಆದರೂ ಮಹೇಶ್‌ಕುಮಾರ್‌ ಅವರಿಗೆ ಅದೃಷ್ಟ ಖುಲಾಯಿಸಿದೆ. ಮಹೇಶ್‌ ಸದ್ಯದಲ್ಲೇ ಅವರ ಮದಗಜ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌