ಆ್ಯಪ್ನಗರ

ಸಿನಿಮಾದೊಳಗೊಂದು ಸಿನಿಮಾ ಸಾಗುವ ಕಥೆ ಚಿತ್ರಕಥಾದಲ್ಲಿ ನಟಿ ಬಿ.ಜಯಶ್ರೀ

ಸಿನಿಮಾದೊಳಗೊಂದು ಸಿನಿಮಾ ಕಥೆ ಹೇಳುವ ವಿಶೇಷ ಚಿತ್ರವೊಂದು ಸ್ಯಾಂಡಲ್‌ವುಡ್‌ನಲ್ಲಿ ರೆಡಿ ಆಗುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಬಿ.ಜಯಶ್ರೀ ವಿಶೇಷ ಪಾತ್ರ ಮಾಡಿದ್ದಾರೆ.

Vijaya Karnataka 7 Jun 2019, 9:00 am
ಬಾಲಾದಿತ್ಯ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ತಯಾರಾಗುತ್ತಿದೆ. 'ಚಿತ್ರಕಥಾ' ಹೆಸರಿನಲ್ಲಿ ರೆಡಿ ಆಗುತ್ತಿರುವ ಈ ಚಿತ್ರದಲ್ಲಿ ಹಿರಿಯ ನಟಿ ಬಿ.ಜಯಶ್ರೀ ವಿಶೇಷ ಪಾತ್ರ ಮಾಡಿದ್ದಾರೆ. ಸಿನಿಮಾದೊಳಗೊಂದು ಸಿನಿಮಾ ಸಾಗುವ ಕಥೆ ಚಿತ್ರದಲ್ಲಿದೆ.
Vijaya Karnataka Web jayashri


'ಕಲಾವಿದನೊಬ್ಬನ ಜೀವನ ಕುರಿತಾದ ಚಿತ್ರವಿದು. ಸಮಾಜದಲ್ಲಿ ಕಾಲಾವಿದನೊಬ್ಬ ಗುರುತಿಸಿಕೊಳ್ಳಲು ಏನೆಲ್ಲ ಕಷ್ಟ ಪಡುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇನೆ. ಈ ಮಧ್ಯೆ ಅವನು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾನೆ ಎಂಬ ರೋಚಕ ಕಥೆ ಕೂಡ ಇದೆ. ಇದು ನನ್ನ ಮೊದಲನೇ ಸಿನಿಮಾ' ಎನ್ನುತ್ತಾರೆ ನಿರ್ದೇಶಕರು.

ಇದೊಂದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಚಿತ್ರವಾಗಿದ್ದು, ಚಿತ್ರಕಥೆಯ ನಿರೂಪಣೆಯೇ ವಿಭಿನ್ನವಾಗಿದೆಯಂತೆ. ಬಿ.ಜಯಶ್ರೀ ಕೊರವಂಜಿಯಾಗಿ ನಟಿಸಿದ್ದು, ಆ ಪಾತ್ರದ ಮೂಲಕ ಹೊಸ ಹೊಸ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರಂತೆ.

ಸುಜಿತ್‌ ರಾಥೋಡ್‌ ನಾಯಕನಾಗಿ ನಟಿಸಿದ್ದು, ಸಿನಿಮಾದಲ್ಲಿ ಅವರು ನಿರ್ದೇಶಕನ ಪಾತ್ರ ಮಾಡಿದ್ದಾರೆ. ವೈದ್ಯಯಾಗಿ ಸುಧಾರಾಣಿ ಕಾಣಿಸಿಕೊಂಡಿದ್ದು, ತಬಲಾ ನಾಣಿ ಕೂಡ ವಿಭಿನ್ನ ಪಾತ್ರ ಮಾಡಿದ್ದಾರಂತೆ.

'ಜಯಶ್ರೀ ಅವರು ಕೇವಲ ಪಾತ್ರ ಮಾಡಿಲ್ಲ. ಒಂದು ಹಾಡು ಕೂಡ ಹಾಡಿದ್ದಾರೆ. ಹಾಗಾಗಿ ಚಿತ್ರಕ್ಕೆ ಮತ್ತಷ್ಟು ತೂಕ ಬಂದಿದೆ' ಎನ್ನುವುದು ನಿರ್ದೇಶಕರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌