ಆ್ಯಪ್ನಗರ

ಡಾಲಿ ಹುಟ್ಟು ಹಬ್ಬದ ದಿನ ಬಡವ ರಾಸ್ಕಲ್‌ಗೆ ಮುಹೂರ್ತ

ಧನಂಜಯ ನಟಿಸಿ ನಿರ್ಮಾಣ ಮಾಡುತ್ತಿರುವ ಬಡವ ರಾರ‍ಯಸ್ಕಲ್‌ ಸಿನಿಮಾಗೆ ಶುಕ್ರವಾರ ಬೆಂಗಳೂರಿನಲ್ಲಿಮುಹೂರ್ತ ಮಾಡಲಾಗಿದೆ...

Vijaya Karnataka 24 Aug 2019, 5:00 am
ಧನಂಜಯ ನಟಿಸಿ ನಿರ್ಮಾಣ ಮಾಡುತ್ತಿರುವ ಬಡವ ಬಡವ ರಾಸ್ಕಲ್‌ ಸಿನಿಮಾಗೆ ಶುಕ್ರವಾರ ಬೆಂಗಳೂರಿನಲ್ಲಿಮುಹೂರ್ತ ಮಾಡಲಾಗಿದೆ.
Vijaya Karnataka Web bADAVA.jpg1

ಶಂಕರ್‌ಗುರು ಎಂಬ ಹೊಸಬರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿಧನಂಜಯ ನಾಯಕರಾದರೆ, ಅಮೃತಾ ಅಯ್ಯಾಂಗರ್‌ ನಾಯಕಿಯಾಗಿದ್ದಾರೆ. ಧನಂಜಯ ಅವರ ಗೆಳೆಯರಾದ ನಾಗಭೂಷಣ್‌, ಪೂರ್ಣ ಚಂದ್ರ, ಶಮಂತ, ಚಂದ್ರು, ನಿರಂಜನ್‌ ಸೇರಿದಂತೆ ಸಾಕಷ್ಟು ಜನ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದ ಮೂಲಕ ಧನಂಜಯ ನಿರ್ಮಾಪಕರಾಗುತ್ತಿದ್ದು, ಅವರ ಜತೆ ಗುಜ್ಜಾಲ್‌ ಪುರುಷೋತ್ತಮ್‌ ಸಹ ಕೈಜೋಡಿಸುತ್ತಿದ್ದಾರೆ. ಬೆಂಗಳೂರಿನ ಬಂಡಿ ಮಹಾಕಾಳಿ ದೇವಾಲಯದಲ್ಲಿಶುಕ್ರವಾರ ನಡೆದ ಮುಹೂರ್ತದಲ್ಲಿ, ಧನಂಜಯ ಅವರ ಪೋಷಕರು ಮತ್ತು ಅವರ ಗುರುಗಳು, ದುನಿಯಾ ವಿಜಯ್‌, ರಕ್ಷಿತ್‌, ನಿರ್ದೇಶಕರಾದ ಸತ್ಯಪ್ರಕಾಶ್‌, ರಾಮಾ ರಾಮಾ ರೇ ಖ್ಯಾತಿಯ ನಟರಾಜ್‌ , ನಿರ್ಮಾಪಕ ಶ್ರೀಕಾಂತ್‌ ಸೇರಿದಂತೆ ಸಾಕಷ್ಟು ಮಂದಿ ಧನಂಜಯಗೆ ಶುಭಾಶಯ ಕೋರಿದರು.

'ಮಧ್ಯಮ ವರ್ಗದ ಹುಡುಗನ ಕಥೆಯನ್ನು ಸಿನಿಮಾ ಮಾಡುತ್ತಿದ್ದೇವೆ. ಸಿನಿಮಾ ನೋಡಿದ ಪ್ರತಿಯೊಬ್ಬರು ತಮ್ಮ ಮನೆಯೊಲ್ಲಬ್ಬ ಇಂತಹ ಬಡವ ರಾರ‍ಯಸ್ಕಲ್‌ ಇದ್ದ ಎಂದುಕೊಳ್ಳುತ್ತಾರೆ. ಮಾಸ್‌ ಪ್ರೇಕ್ಷಕರಿಗೆ ,ಕ್ಲಾಸ ಪ್ರೇಕ್ಷಕರಿಗೆ, ಫ್ಯಾಮಿಲಿಗೆ ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಸಿನಿಮಾ ಗಿಫ್ಟ್‌ ಆಗಿರುವುದಕ್ಕೆ ನನಗೆ ಸಂತೋಷವಿದೆ'ಎಂದು ಸಂತಸ ವ್ಯಕ್ತಪಡಿಸಿದರು ಧನಂಜಯ.

ಇನ್ನು ಇದೇ ಸಂದರ್ಭದಲ್ಲಿ ಬಡವ ರಾಸ್ಕಲ್‌ ಸಿನಿಮಾದ ಫೋಟೋ ಶೂಟ್‌ ಮೇಕಿಂಗ್‌ನ್ನು ನಿರ್ಮಾಪಕ ಶ್ರೀಕಾಂತ್‌ ಬಿಡುಗಡೆ ಮಾಡಿದರು. ಪುನೀತ್‌ರಾಜ್‌ಕುಮಾರ್‌ ಮತ್ತು ಶಿವರಾಜ್‌ಕುಮಾರ್‌ ಡಾಲಿ ಧನಂಜಯಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು. ಇದಾದ ಮೇಲೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಧನಂಜಯಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌