ಆ್ಯಪ್ನಗರ

ಕನ್ನಡದಲ್ಲಿ ಜಾಹಿದ್ ಖಾನ್ ಸಿನಿಮಾ: ನಿರ್ದೇಶಕರು ಯಾರು ಗೊತ್ತೇ?

ಮುಂಬರುವ ತಮ್ಮ ಹೊಸ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಜಯತೀರ್ಥ "ಜಮೀರ್ ಅಹ್ಮದ್ ಮಗ ಜಾಹಿದ್ ಖಾನ್ ಅವರಿಗೆ ಸಿನಿಮಾ ಮಾಡುವ ಪ್ಲಾನ್ ಇದೆ. ಸದ್ಯಕ್ಕೆ ಈ ಚಿತ್ರದ ಮಾತುಕತೆ ನಡೆಯುತ್ತಿದೆ" ಎಂದಿದ್ದಾರೆ.

Vijaya Karnataka Web 22 Apr 2019, 10:06 pm
ಜೆಡಿಎಸ್ ಪಕ್ಷದ ನಾಯಕರಲ್ಲೊಬ್ಬರಾದ ಸಚಿವ ಜಮೀರ್ ಅಹಮ್ಮದ್ ಮಗ ಜಾಹಿದ್ ಖಾನ್ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಅವರ ಮೊದಲ ಸಿನಿಮಾದ ನಿರ್ದೇಶಕರು ಯಾರು ಎನ್ನುವ ವಿಷಯ ಕೂಡ ಈಗಾಗಲೇ ಬಹಿರಂಗವಾಗಿದೆ. 'ಬೆಲ್ ಬಾಟಂ' ಸಿನಿಮಾದ ಗೆಲುವಿನ ನಗೆ ಬೀರುತ್ತಿರುವ ಜಯತೀರ್ಥ ಅವರೀಗ ಜಮೀರ್ ಅಹಮ್ಮದ್ ಮಗನ ಸಿನಿಮಾವನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.
Vijaya Karnataka Web jayatheertha2204


ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸ ವಿಷಯವೇನಲ್ಲ ಬಿಡಿ. ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್, ಚೆಲುವರಾಯ ಸ್ವಾಮಿ ಪುತ್ರ ಸಚಿನ್, ಹೆಚ್ ಎಮ್ ರೇವಣ್ಣ ಪುತ್ರ ಅನೂಪ್ ಈಗಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಇದೀಗ, ಜಮೀರ್ ಅಹಮ್ಮದ್ ಪುತ್ರ ಜಾಹಿದ್ ಸರದಿ.

ಮುಂಬರುವ ತಮ್ಮ ಹೊಸ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಜಯತೀರ್ಥ "ಜಮೀರ್ ಅಹ್ಮದ್ ಮಗ ಜಾಹಿದ್ ಖಾನ್ ಅವರಿಗೆ ಸಿನಿಮಾ ಮಾಡುವ ಪ್ಲಾನ್ ಇದೆ. ಸದ್ಯಕ್ಕೆ ಈ ಚಿತ್ರದ ಮಾತುಕತೆ ನಡೆಯುತ್ತಿದೆ" ಎಂದಿದ್ದಾರೆ. ಅಲ್ಲಿಗೆ ಜಾಹಿದ್ ಖಾನ್, ಜಯತೀರ್ಥ ಸಿನಿಮಾದ ಮೂಲಕ ಚಿತ್ರ ಜೀವನ ಶುರು ಮಾಡುವ ಮಾತುಕತೆಯಮಥು ನಡೆರಯುತ್ತಿದೆ. ಕನ್ಫರ್ಮ್ ಆಗುವುದಷ್ಟೇ ಬಾಕಿ!

ಜಾಹಿದ್ ಖಾನ್ ಮುಂಬೈ ನಲ್ಲಿ ನಟನ ತರಬೇತಿ ಪಡೆದಿದ್ದಾರೆ ಎನ್ನಲಾಗಿದ್ದು,ಮ ಅವರಿಗೆ ಸೂಟ್ ಆಗುವ ಕಥೆಯನ್ನು ಜಯತೀರ್ಥ ಮಾಡಬೇಕಿದೆ. ಕಥೆ ಇಬ್ಬರಿಗೂ ಇಷ್ಟ ಆದಾಗ ಸಿನಿಮಾ ಶುರು ಆಗಲಿದೆಯಂತೆ. ಅಚ್ಚರಿ ಎಂದರೆ, ಈ ಸಿನಿಮಾಗೆ ಜಮೀರ್ ಹಣ ಹಾಕುತ್ತಿಲ್ಲ, ಬದಲಿಗೆ ಬಾಂಬೆ ನಿರ್ಮಾಣ ಸಂಸ್ಥೆಯೊಂದು ಬಂಡವಾಳ ಹೂಡುತ್ತಿದೆ.
ನಿರ್ದೇಶಕ ಜಯತೀರ್ಥ ಅವರು ತಮ್ಮ ಮೊದಲ ಸಿನಿಮಾ 'ಒಲವೇ ಮಂದಾರ' ಮೂಲಕ ಶ್ರೀಕಾಂತ್ ಅವರನ್ನು ಪರಿಚಯ ಮಾಡಿಸಿದ್ದರು.

ಆದಾದ ಬಳಿಕ ಬಂದ 'ವೆನಿಲ್ಲಾ' ಮೂಲಕ ಅವಿನಾಶ್ ಲಾಂಚ್ ಆದರು. ಇದೀಗ, 'ಬೆಲ್ ಬಾಟಂ' ಮೂಲಕ ರಿಷಬ್ ಶೆಟ್ಟಿ ಹೀರೋ ಪಟ್ಟ ಪಡೆದಿದ್ದಾರೆ. ಮುಂದೆ ಜಾಹಿದ್ ಖಾನ್ ನಾಯಕ ನಟ ಆಗುವ ಸಾಧ್ಯತೆ ದಟ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌