ಆ್ಯಪ್ನಗರ

ಬರಹಗಾರರಿಗೆ ಭರ್ಜರಿ ಚಾನ್ಸ್ ನೀಡಿದ ರಿಷಬ್ ಶೆಟ್ಟಿ!

ನಿರ್ದೇಶಕರಾಗಿದ್ದ, ಇತ್ತೀಚೆಗೆ ನಟರಾಗಿಯೂ ಯಶಸ್ವಿಯಾಗಿರುವ, ನಟ-ನಿರ್ಮಾಪಕ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಬರಹಗಾರರಿಗೆ ಒಂದು ಒಳ್ಳೆಯ ಅವಕಾಶ ನೀಡಿದ್ದಾರೆ. ಮೂರು ಪ್ರಶ್ನೆಗಳನ್ನು ನೀಡಿದ್ದು, ಅದಕ್ಕೆ ಸರಿಯಾದ ಉತ್ತರ ಬರೆದು ಕಳುಹಿಸಿದವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡಲಿದ್ದಾರೆ.

Vijaya Karnataka Web 16 May 2019, 5:46 pm
ಯಾವುದೇ ಒಂದು ಸಿನಿಮಾದ ಆತ್ಮ ಇರುವುದು ಕಥೆಯಲ್ಲಿ. ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂದರೆ ಮೊದಲು ಒಂದು ಒಳ್ಳೆಯ ಕಥೆ ಬೇಕು. ಹೀಗಿದ್ದರೂ, ಕನ್ನಡ ಇಂಡಸ್ಟ್ರಿಯಲ್ಲಿ ಬರಹಗಾರರಿಗೆ ಬೆಲೆ ನೀಡುವುದಿಲ್ಲ ಎಂಬ ಆರೋಪ ಇದ್ದೇ ಇದೆ. ಆದರೆ, ಗಟ್ಟಿ ಕಥೆ ಇಲ್ಲದೆಯೇ ಸಾಕಷ್ಟು ಸಿನಿಮಾಗಳು ತೆರೆಗೆ ಬಂದು ಗಳಿಕೆ ಮಾಡಲಾಗದೇ ಮಕಾಡೆ ಮಲಗಿವೆ.
Vijaya Karnataka Web rishab1605


ಆದರೆ, ಅಚ್ಚರಿ ಎಂಬಂತೆ ಇತ್ತೀಚೆಗೆ ಒಳ್ಳೆಯ ಕಥೆಯ ಸಿನಿಮಾಗಳು ಗೆಲ್ಲುತ್ತಿವೆ. ಅನೇಕ ಗೆದ್ದಿರುವ ಸಿನಿಮಾಗಳಲ್ಲಿ ಕಥೆಯೇ ಹೀರೋ ಎಂಬಂತಾಗಿದೆ. ಆ ಕಾರಣಕ್ಕೆ ಆ ಸಿನಿಮಾ ರೈಟರ್‌ಗಳಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ.

ನಿರ್ದೇಶಕರಾಗಿದ್ದ, ಇತ್ತೀಚೆಗೆ ನಟರಾಗಿಯೂ ಯಶಸ್ವಿಯಾಗಿರುವ, ನಟ-ನಿರ್ಮಾಪಕ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಬರಹಗಾರರಿಗೆ ಒಂದು ಒಳ್ಳೆಯ ಅವಕಾಶ ನೀಡಿದ್ದಾರೆ. ಮೂರು ಪ್ರಶ್ನೆಗಳನ್ನು ನೀಡಿದ್ದು, ಅದಕ್ಕೆ ಸರಿಯಾದ ಉತ್ತರ ಬರೆದು ಕಳುಹಿಸಿದವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡಲಿದ್ದಾರೆ.

ಅಂತ್ಯಸಂಸ್ಕಾರದ ಸಮಯದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವೊಂದನ್ನು ಸಂಭಾಷಣೆ ಸಹಿತ ದೃಶ್ಯವಾಗಿ ಬರೆಯುವುದು, ಕ್ಯಾರೆಕ್ಟರ್ ಸ್ಕೆಚ್ ಬರೆಯುವುದು, ಹಾಗೂ ಕಿರಿಕ್ ಪಾರ್ಟಿ ಸಿನಿಮಾ ಗ್ಯಾಂಗ್ ಸ್ಟರ್ ಶೈಲಿಯ ಚಿತ್ರವಾಗಿದ್ದರೆ, ಅದರ ಕಥೆಯ ಎಳೆಯನ್ನು ಬರೆದು ಕಳುಹಿಸಿ ಎಂದಿದ್ದಾರೆ.

ಈ ಮೂರು ಪ್ರಶ್ನೆಗಳಿಗೆ ಕೆಲವು ನಿಯಮಗಳು ಇದು ಅವನ್ನು ಒಂದು ಪೋಸ್ಟರ್ ಮೂಲಕ ತಿಳಿಸಲಾಗಿದೆ. ಬರಹ ಕಳುಹಿಸಲು ಮೇ 23 ರವರೆಗೆ ಸಮಯಾವಕಾಶ ನೀಡಲಾಗಿದೆ. ನಿಮ್ಮ ಬರಹವನ್ನು writersf@gmail.com ಈಮೇಲ್ ವಿಳಾಸಕ್ಕೆ ಕಳುಹಿಸಬಹುದು ಎನ್ನಲಾಗಿದೆ. ಆಸಕ್ತಿಯುಳ್ಳವರು ಕಳುಹಿಸಲು ಈ ಮೂಲಕ ಸುವರ್ಣಾವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌