ಆ್ಯಪ್ನಗರ

ಬುದ್ಧಿ ಜೀವಿಗಳು ನಾನ್‌ಸೆನ್ಸ್ ಮಾತನಾಡ್ತಾರೆ : ರಿಷಭ್ ಶೆಟ್ಟಿ

ರಿಷಭ್ ಶೆಟ್ಟಿಯವರ ಮಾತುಗಳು ಪರ-ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದ್ದು ಸೋಷಿಯಲ್ ಮೀಡಿಯಾಗಳು ಬಹಳಷ್ಟು ಟೀಕೆ, ಟಿಪ್ಪಣಿಗಳಿಂದ ತುಂಬಿ ಹೋಗಿವೆ ಎನ್ನಲಾಗಿದೆ. ಕೆಲವರು 'ರಿಷಭ್ ಶೆಟ್ಟಿಯವರು ಈಗ ಬಿಡುಗಡೆಯಾಗಿರುವ 'ಬೆಲ್ ಬಾಟಮ್' ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ' ಎನ್ನುತ್ತಿದ್ದಾರೆ.

Vijaya Karnataka Web 18 Feb 2019, 9:32 pm
ಬೆಲ್ ಬಾಟಮ್ ನಟ, 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ನಿರ್ದೇಶಕ 'ರಿಷಭ್ ಶೆಟ್ಟಿ ಅವರು ಸಖತ್ ವಿವಾದಕ್ಕೆ ಒಳಗಾಗಿದ್ದಾರೆ. ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ ಒಳಗಾಗಿ ಹುತಾತ್ಮರಾಗಿರುವ ಮಂಡ್ಯದ ವೀರ ಯೋಧ 'ಗುರು' ಅವರ ಮನೆಗೆ ತೆರಳಿದ್ದ ರಿ‍ಷಭ್ ಶೆಟ್ಟಿ ಅವರು ಬುದ್ಧಿ ಜೀವಿಗಳ ಬಗ್ಗೆ ಮಾತನಾಡಿದ್ದಾರಂತೆ. ಅದೀಗ ತೀವ್ರ ವಿವಾದದ ಸ್ವರೂಪ ಪಡೆದಿದೆ. ಅಂದಹಾಗೆ, ನಿನ್ನೆ 'ಬೆಲ್ ಬಾಟಮ್' ಚಿತ್ರತಂಡವು ಮಂಡ್ಯದ ಕೆಎಂ ದೊಡ್ಡಿಯ 'ಗುರು' ಅವರ ಮನೆಗೆ ಭೇಟಿ ಕೊಟ್ಟು ಗುರು ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 75 ಸಾವಿರ ರೂ. ಆರ್ಥಿಕ ಸಹಾಯ ನೀಡಿದ್ದಾರೆ.
Vijaya Karnataka Web rishabh18


"ಬುದ್ಧಿ ಜೀವಿಗಳು ನಾನ್‌ಸೆನ್ಸ್ ಮಾತನಾಡ್ತಾರೆ. ಅವರನ್ನು ದೇಶ ಬಿಡಿಸಿ ಓಡಿಸಬೇಕು. ಆಗ ದೇಶ ಚೆನ್ನಾಗಿರುತ್ತದೆ. ಕೆಲವರು ಐಡೆಂಟಿಟಿ ಕ್ರೈಸಿಸ್‌ನಿಂದ ಬಳಲುತ್ತಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಾರೆ. ಅವರಿಗೆ ಹುಚ್ಚು ಹಿಡಿದಿದೆ. ಆ ರೀತಿ ವರ್ತಿಸಿದರೆ ಗರುತಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಅವರನ್ನೆಲ್ಲ ಮಟ್ಟ ಹಾಕಬೇಕು" ಎಂದೆಲ್ಲ ರಿಷಭ್ ಶೆಟ್ಟಿ ಮಾತನಾಡಿದ್ದಾರೆ ಎಂದು ವರಿದಿಯಾಗಿದೆ. ಇಷ್ಟಾಗಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ರಿಷಭ್ ಶೆಟ್ಟಿಯವರನ್ನು ಟಾರ್ಗೆಟ್ ಮಾಡಿಕೊಂಡು ನಾನಾ ತರದ ಕಾಮೆಂಟ್ಸ್‌ಗಳು ಹರಿದಾಡತೊಡಗಿವೆ.

ಇದೀಗ ರಿಷಭ್ ಶೆಟ್ಟಿಯವರ ಮಾತುಗಳು ಪರ-ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದ್ದು ಸೋಷಿಯಲ್ ಮೀಡಿಯಾಗಳು ಬಹಳಷ್ಟು ಟೀಕೆ, ಟಿಪ್ಪಣಿಗಳಿಂದ ತುಂಬಿ ಹೋಗಿವೆ ಎನ್ನಲಾಗಿದೆ. ಕೆಲವರು 'ರಿಷಭ್ ಶೆಟ್ಟಿಯವರು ಈಗ ಬಿಡುಗಡೆಯಾಗಿರುವ 'ಬೆಲ್ ಬಾಟಮ್' ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ' ಎಂದು ಅಭಿಪ್ರಾಯ ಪಟ್ಟರೆ ಇನ್ನೂ ಕೆಲವರು ರಿಷಭ್ ಶೆಟ್ಟಿಯವರ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಒಟ್ಟಿನಲ್ಲಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಅಜರಾಮರ ಆಗಿರುವ ಮಂಡ್ಯದ ವೀರ ಯೋಧ 'ಗುರು' ಅವರ 'ಅಂತ್ಯ ಸಂಸ್ಕಾರ'ದ ನೆನಪು ಮಾಸುವ ಮುನ್ನವೇ ಹೀಗೆಲ್ಲ ರಾಜಕೀಯಗಳು ಘಟಿಸುತ್ತಿರುವುದ ದೊಡ್ಡ ದುರಂತ ಎಂಬುದು ಕೆಲವು ನಿಜವಾದ ಸಾಮಾಜಿಕ ಕಳಕಳಿಯುಳ್ಳ ಜನರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌