ಆ್ಯಪ್ನಗರ

ಸ್ನೇಹದ ಮಹತ್ವವನ್ನು ಸಾರುವ ಕನ್ನಡ ಸಿನಿಮಾಗಳು

ಸ್ನೇಹ ಎನ್ನುವ ಭಾವವು ಅನುಭವಿಸಿದವರಿಗೆ ಅಪೂರ್ವವೂ ಅಮೂಲ್ಯವೂ ಆದ ಅನುಭವವನ್ನು ಕೊಡುತ್ತದೆ. ಸ್ನೇಹಕ್ಕೆ ಸಂಬಂಧಿಸಿ ಅನೇಕ ಕಥೆಗಳಿವೆ, ಕಾದಂಬರಿಗಳಿವೆ. ಅಷ್ಟೇ ಏಕೆ, 'ಸ್ನೇಹ'ಕ್ಕೆ ಸಂಬಂಧಿಸಿ ಬಹಳಷ್ಟು ಸಿನಿಮಾಗಳು ಸಹ ತೆರೆಗೆ ಬಂದಿವೆ. ಕನ್ನಡದಲ್ಲಿ ಸ್ನೇಹಕ್ಕೆ ಸಂಬಂಧಿಸಿ ಹಲವು ಸಿನಿಮಾಗಳು ತೆರೆಗೆ ಬಂದು ಸೂಪರ್ ಹಿಟ್ ಸಹ ಆಗಿವೆ.

Vijaya Karnataka Web 3 Aug 2019, 1:35 pm
ಜಗತ್ತಿನಲ್ಲಿ ಸ್ನೇಹ ಎನ್ನುವುದು ಬಹಳ ಮುಖ್ಯವಾದುದು. ಸ್ನೇಹವು ಹಲವು ವೇಳೆ ಅಗತ್ಯ ಎನ್ನಿಸಿದರೆ ಕೆಲವು ವೇಳೆ ಅನಿವಾರ್ಯವೂ ಆಗಿರುತ್ತದೆ. ಸ್ನೇಹ ಎನ್ನುವ ಭಾವವು ಅನುಭವಿಸಿದವರಿಗೆ ಅಪೂರ್ವವೂ ಅಮೂಲ್ಯವೂ ಆದ ಅನುಭವವನ್ನು ಕೊಡುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಷ್ಟರಮಟ್ಟಿಗೆ ಈ 'ಫ್ರಂಡ್‌ಶಿಪ್' ಎನ್ನುವುದು ಜಗತ್ತಿನಾದ್ಯಂತ ಪ್ರಾಮುಖ್ಯತೆ ಪಡದು ಪಸರಿಸಿದೆ.
Vijaya Karnataka Web diggajaru0208


ಸ್ನೇಹಕ್ಕೆ ಸಂಬಂಧಿಸಿ ಅನೇಕ ಕಥೆಗಳಿವೆ, ಕಾದಂಬರಿಗಳಿವೆ. ಅಷ್ಟೇ ಏಕೆ, 'ಸ್ನೇಹ'ಕ್ಕೆ ಸಂಬಂಧಿಸಿ ಬಹಳಷ್ಟು ಸಿನಿಮಾಗಳು ಸಹ ತೆರೆಗೆ ಬಂದಿವೆ. ಕನ್ನಡದಲ್ಲಿ ಸ್ನೇಹಕ್ಕೆ ಸಂಬಂಧಿಸಿ ಹಲವು ಸಿನಿಮಾಗಳು ತೆರೆಗೆ ಬಂದು ಸೂಪರ್ ಹಿಟ್ ಸಹ ಆಗಿವೆ. ಅವುಗಳಲ್ಲಿ ಮುಖ್ಯವಾಗಿ ಆಪ್ತಮಿತ್ರ, ದಿಗ್ಗಜರು, ಸ್ನೇಹಿತರು, ಕಳ್ಳ ಕುಳ್ಳ, ಸಿಪಾಯಿ, ಶ್ರಾವಣ ಬಂತು, ಸ್ನೇಹಲೋಕ, ಪುಟಾಣಿ ಏಜೆಂಟ್ 123, ಸಿಂಹದ ಮರಿ ಸೈನ್ಯ ಮುಂತಾದ ಹೆಸರುಗಳು ಥಟ್ಟನೆ ನೆನಪಿಗೆ ಬರುತ್ತವೆ.

ನಟರಾದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿನಯದ 'ದಿಗ್ಗಜರು' ಚಿತ್ರವು ಕನ್ನಡದಲ್ಲಿ ಸ್ನೇಹಕ್ಕೆ ಹೆಸರುವಾಸಿಯಾದ ಸಿನಿಮಾ. ರಿಯಲ್ ಲೈಫ್‌ನಲ್ಲೂ ಸ್ನೇಹಿತರಾಗಿದ್ದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಿಬ್ಬರು ತೆರೆಯಲ್ಲಿ ಸಹ ಈ ಚಿತ್ರದ ಮೂಲಕ ಸಖತ್ ಮಿಂಚಿದ್ದರು. ರವಿಚಂದ್ರನ್ ಮತ್ತು ತೆಲುಗು ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸಿಪಾಯಿ' ಚಿತ್ರವು ಸಹ 'ಸ್ನೇಹಿತರ ಕಮಾಲ್' ಎನ್ನಬಹುದು. ಅಷ್ಟೇ ಅಲ್ಲ, ರವಿಚಂದ್ರನ್ ಜತೆ ಇದ್ದ ಸ್ನೇಹದ ಕಾರಣಕ್ಕೇ ನಟ ಚಿರಂಜೀವಿ ಅವರು ಕನ್ನಡದ ಸಿಪಾಯಿ ಚಿತ್ರದಲ್ಲಿ 'ಗೆಸ್ಟ್‌' ರೋಲ್‌ನಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

ಇನ್ನು ಆಪ್ತಮಿತ್ರ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ರಮೇಶ್ ಅವರ ಸ್ನೇಹ ಸಹ ಸಾಕಷ್ಟು ಗಮನಸೆಳೆದಿದೆ. ಅವರಿಬ್ಬರ ಸ್ನೇಹದ ಕೆಮಿಸ್ಟ್ರಿಯ ಬಗ್ಗೆ ಬಹಳಷ್ಟು ಮಂದಿ ಸಿನಿಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳ್ಳ ಕುಳ್ಳ ಚಿತ್ರದಲ್ಲಿ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹವನ್ನು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಶ್ರಾವಣ ಬಂತು ಚಿತ್ರದಲ್ಲಿ ಡಾ ರಾಜ್‌ಕುಮಾರ್ ಮತ್ತು ಶ್ರೀನಾಥ್ ಅವರಿಬ್ಬರ ಸ್ನೇಹ ಸಹ ಇಂದಿಗೂ ಜನರು ನೆನಪಿಸಿಕೊಂಡು ಮಾತನಾಡುವಂತೆಯಿದೆ.

ಹತ್ತು ವರುಷಗಳ ಹಿಂದೆ ತೆರೆಗೆ ಬಂದಿದ್ದ ಸ್ನೇಹಿತರು ಚಿತ್ರದಲ್ಲಿ ಸಹ 'ಫ್ರಂಡ್‌ಶಿಪ್ ಗಮ್ಮತ್ತು' ಚೆನ್ನಾಗಿಯೇ ಇತ್ತು. ಸ್ನೇಹಿತರು ಚಿತ್ರದಲ್ಲಿ ಪರಸ್ಪರ ಗೆಳೆಯರಾಗಿರುವ ನಾಯಕರೆಲ್ಲರೂ ನಾಯಕಿ ಹಿಂದೆ ಬೀಳುತ್ತಾರೆ. ಒಟ್ಟಿನಲ್ಲಿ ಈ ಚಿತ್ರದ ಮೂಲಕ ಸ್ನೇಹ ಸಂದೇಶ ಚೆನ್ನಾಗಿಯೇ ಬಿಂಬತವಾಗಿದೆ. ಕನ್ನಡದಲ್ಲಿ ಸ್ನೇಹ ಸಂದೇಶ ನೀಡುವ ಸಾಕಷ್ಟು ಸಿನಿಮಾಗಳು ಬಂದು ಅವುಗಳಲ್ಲಿ ಹಲವು ಚಿತ್ರಗಳಂತೂ ಸೂಪರ್ ಹಿಟ್ ದಾಖಲಿಸಿ ಇಂದಿಗೂ ಜನರು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಿವೆ. ಇದೀಗ ಆಗಸ್ಟ್ ಮೊದಲ ವಾರದಂದು ಆಚರಿಸಲಾಗುವ (ಈ ವರ್ಷ, 2019- ಆಗಸ್ಟ್ 4, ಭಾನುವಾರ)'ಫ್ರಂಡ್‌ಶಿಪ್ ಡೇ' ಹಿನ್ನೆಲೆಯಲ್ಲಿ 'ಸ್ನೇಹ' ಪ್ರಧಾನ ಚಿತ್ರಗಳನ್ನು ನೆನಪಿಸಿಕೊಂಡು ಅಮೂಲ್ಯ ಅನುಭೂತಿ ಪಡೆಯಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌