ಆ್ಯಪ್ನಗರ

ನಟ ವಿಶಾಲ್ ಹೆಗ್ಗಣ ಇದ್ದಂತೆ: ನಿರ್ದೇಶಕ ಭಾರತಿರಾಜ

ಸಂಘದಲ್ಲಿ ಬೆಳೆದಿರುವ ಕಳೆಯನ್ನು ಕೀಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿರ್ಮಾಪಕರ ಮಂಡಳಿಯಲ್ಲಿ ಸೇರಿಕೊಂಡಿರುವ ಕ್ರಿಮಿಗಳನ್ನು ತೊಲಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಶಾಲ್ ಮೇಲೆ ಫೈರ್ ಆಗಿದ್ದಾರೆ.

Vijaya Karnataka Web 18 Jun 2019, 10:38 am
ಕಾಲಿವುಡ್‍ನ ಹಿರಿಯ ನಿರ್ದೇಶಕ ಭಾರತಿರಾಜ ಮತ್ತು ನಟ ವಿಶಾಲ್ ನಡುವೆ ತೀವ್ರ ವಾಕ್ಸಮರ ನಡೆದಿದ್ದು ತಮಿಳು ಚಿತ್ರೋದ್ಯಮದಲ್ಲಿ ವಿವಾದಕ್ಕೆ ಕಾರಣವಾಗಿದೆ. ನಿರ್ಮಾಪಕರ ಸಂಘದಲ್ಲಿ ಅಧ್ಯಕ್ಷನಾಗಿ ವಿಶಾಲ್‌ರಂತಹ ಹೆಗ್ಗಣ ನುಗ್ಗಿದೆ, ಅದನ್ನು ಒದ್ದು ಓಡಿಸಬೇಕು ಎಂದಿದ್ದಾರೆ ಭಾರತಿರಾಜ.
Vijaya Karnataka Web bharathiraja


ಸಂಘದಲ್ಲಿ ಬೆಳೆದಿರುವ ಕಳೆಯನ್ನು ಕೀಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿರ್ಮಾಪಕರ ಮಂಡಳಿಯಲ್ಲಿ ಸೇರಿಕೊಂಡಿರುವ ಕ್ರಿಮಿಗಳನ್ನು ತೊಲಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಶಾಲ್ ಮೇಲೆ ಫೈರ್ ಆಗಿದ್ದಾರೆ.

ನಡಿಗರ್ ಸಂಘವನ್ನು ತಮಿಳೇತರು ಮುನ್ನಡೆಸುತ್ತಿರುವುದು ನೋವಿನ ಸಂಗತಿ. ನಡಿಗರ್ ಸಂಘಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಭಾಗ್ಯರಾಜಾ ತಂಡವನ್ನು ಗೆಲ್ಲಿಸುವ ಮೂಲಕ ತಮಿಳು ನಟರ ಉಪಸ್ಥಿತಿಯನ್ನು ರಕ್ಷಿಸಿಕೊಳ್ಳುವ ಅವಕಾಶ ಇದೆ. ಭಾಗ್ಯರಾಜ್ ಗೆದ್ದ ಕೂಡಲೆ ದಕ್ಷಿಣದ ನಟಿನಟರ ಸಂಘವನ್ನು ತಮಿಳು ನಟರ ಸಂಘವಾಗಿ ಬದಲಾಯಿಸಬೇಕು ಎಂದಿದ್ದಾರೆ.

ನಡಿಗರ್ ಸಂಘವನ್ನು ತಮಿಳು ನಟರ ಸಂಘವಾಗಿ ಬದಲಾಯಿಸುವುದೇ ನನ್ನ ಧ್ಯೇಯ ಎಂದು ಭಾರತೀರಾಜ ಹೇಳಿರುವುದು ತಮಿಳು ಚಿತ್ರೋದ್ಯಮದಲ್ಲಿ ಕಲ್ಲೋಲ ಸೃಷ್ಟಿಸಿದೆ. ಶೀಘ್ರದಲ್ಲೇ ನಡಿಗರ್ ಸಂಘದ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಭಾರತಿರಾಜ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌