ಆ್ಯಪ್ನಗರ

ಜುಲೈನಲ್ಲಿ ಬರಲಿದ್ದಾನೆ ಭೀಮಸೇನ ನಳಮಹಾರಾಜ

ಅವನೇ ಶ್ರೀಮನ್ನಾರಾಯಣಕ್ಕೂ ಮುನ್ನ 'ಭೀಮಸೇನ ನಳಮಹಾರಾಜ' ಚಿತ್ರವನ್ನು ರಿಲೀಸ್‌ ಮಾಡುವುದಾಗಿ ಹೇಳಿದ್ದಾರೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ.

Vijaya Karnataka 21 May 2019, 5:00 am
ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣದಲ್ಲಿ ಹಲವು ಚಿತ್ರಗಳು ಶೂಟಿಂಗ್‌ ಆಗುತ್ತಿವೆ. ಅವುಗಳಲ್ಲಿ ಯಾವುದು ಮೊದಲು ರಿಲೀಸ್‌ ಆಗಲಿದೆ ಎಂಬ ಕುತೂಹಲ ಪ್ರೇಕ್ಷಕರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಅವನೇ ಶ್ರೀಮನ್ನಾರಾಯಣಕ್ಕೂ ಮುನ್ನ 'ಭೀಮಸೇನ ನಳಮಹಾರಾಜ' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪುಷ್ಕರ್‌ ತಿಳಿಸಿದ್ದಾರೆ.
Vijaya Karnataka Web bsnmr


'ಭೀಮಸೇನ ನಳಮಹಾರಾಜ ಸಿನಿಮಾ ಸಿದ್ಧವಾಗಿದೆ. ಜುಲೈ ಮೂರನೇ ವಾರದಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್‌ ಮಾಡುತ್ತಿದ್ದೇವೆ. ಅವನೇ ಶ್ರೀಮನ್ನಾರಾಯಣ ಅಗಸ್ಟ್‌ನಲ್ಲಿ ಬಿಡುಗಡೆ ಮಾಡುವ ಸಿದ್ಧತೆ ಕೂಡ ನಡೆದಿದೆ. ದೊಡ್ಡಮಟ್ಟದಲ್ಲೇ ಬಿಡುಗಡೆ ಮಾಡಲಿದ್ದೇವೆ' ಎನ್ನುತ್ತಾರೆ ನಿರ್ಮಾಪಕರು.

ಕಾರ್ತೀಕ್‌ ಸರಗೂರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ, ಅಡುಗೆಯನ್ನೇ ಪ್ರಧಾನವಾಗಿಟ್ಟುಕೊಂಡು ಕಥೆ ಬರೆಯಲಾಗಿದೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನನಗೆ ತುಂಬಾ ಕನೆಕ್ಟ್ ಆದ ಸಿನಿಮಾವಿದು. ಕ್ಲೈಮ್ಯಾಕ್ಸ್‌ನಲ್ಲಿ ಒಂದು ಸರ್‌ಪ್ರೈಸ್‌ ಇದೆ. ಕಥೆಯೊಂದನ್ನು ಅಡುಗೆಯ ಮೂಲಕ ರಿವಿಲ್‌ ಮಾಡುತ್ತಾ ಹೋಗಿದ್ದು, ನೋಡುಗರಿಗೆ ಹೊಸ ಅನುಭವವನ್ನು ನೀಡಲಿದೆ. ನನ್ನ ಪ್ರಕಾರ ಕನ್ನಡದ ಮಟ್ಟಿಗೆ ಇಂಥದ್ದೊಂದು ಚಿತ್ರ ಮೊದಲ ಬಾರಿಗೆ ನಿರ್ಮಾಣವಾಗಿದೆ.' ಎನ್ನುತ್ತಾರೆ ನಿರ್ಮಾಪಕರು.

ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದು, ಐದು ಹಾಡುಗಳಿಗೆ ಮ್ಯೂಸಿಕ್‌ ಮಾಡಿದ್ದಾರೆ. ಜುಲೈ ಮೂರನೇ ವಾರದಲ್ಲಿ ಸಾಂಗ್‌ ರಿಲೀಸ್‌ ಆಗಲಿವೆಯಂತೆ.

'ಭೀಮಸೇನ ನಳಮಹಾರಾಜ ಸಿನಿಮಾ ನಾಯಕನಿಗೆ ಅಡುಗೆ ಮಾಡುವ ಕ್ರೇಜ್‌. ಬಗೆ ಬಗೆಯ ಅಡುಗೆಯ ಮೂಲಕ ಅವನು ಬದುಕಿನ ನಾನಾ ವಿಷಯಗಳನ್ನು ಹೇಳುತ್ತಾ ಹೋಗುತ್ತಾನೆ. ಅಡುಗೆಯನ್ನು ಜೀವನಕ್ಕೆ ಕನೆಕ್ಟ್ ಮಾಡುವ ರೀತಿಯೇ ಸಿನಿಮಾದ ಪ್ಲಸ್‌ಪಾಯಿಂಟ್‌' ಎನ್ನುವುದು ನಿರ್ಮಾಪಕರ ಮಾತು.

ಉಪ್ಪು, ಹುಳಿ, ಖಾರ, ಸಿಹಿ, ಕಹಿ ಮತ್ತು ಒಗರಿನ ಸಮ್ಮಿಶ್ರಣದ ಸಿನಿಮಾ ಇದಾಗಿದ್ದು, ಅರವಿಂದ್‌ ಅಯ್ಯರ್‌ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅರೋಹಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಚ್ಯುತ್‌ ಕುಮಾರ್‌ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಚಿತ್ರದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌