ಆ್ಯಪ್ನಗರ

ನೆನೆಗುದಿಗೆ ಬಿದ್ದ ಭೂಮಿಪುತ್ರ

ಟ್ವಂಟಿ ಟ್ವಂಟಿ ಸರಕಾರ ಮಾಡಿ ಇಡೀ ದೇಶದ ಗಮನ ಸೆಳೆದಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದ ಕತೆ ಇಟ್ಟುಕೊಂಡು ಸೆಟ್ಟೇರಿದ್ದ ಭೂಮಿಪುತ್ರ ಚಿತ್ರಕ್ಕೆ ಮುಹೂರ್ತವಾಗಿದ್ದರೂ ಇನ್ನೂ ಶೂಟಿಂಗ್‌ ಆರಂಭವಾಗಿಲ್ಲ. ಇದಕ್ಕೆ ನಿರ್ದೇಶಕ ಎಸ್‌. ನಾರಾಯಣ್‌ ಅವರಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

Vijaya Karnataka Web 10 Aug 2017, 4:00 am

ಹರೀಶ್‌ ಬಸವರಾಜ್‌

ಟ್ವಂಟಿ ಟ್ವಂಟಿ ಸರಕಾರ ಮಾಡಿ ಇಡೀ ದೇಶದ ಗಮನ ಸೆಳೆದಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದ ಕತೆ ಇಟ್ಟುಕೊಂಡು ಸೆಟ್ಟೇರಿದ್ದ ಭೂಮಿಪುತ್ರ ಚಿತ್ರಕ್ಕೆ ಮುಹೂರ್ತವಾಗಿದ್ದರೂ ಇನ್ನೂ ಶೂಟಿಂಗ್‌ ಆರಂಭವಾಗಿಲ್ಲ. ಇದಕ್ಕೆ ನಿರ್ದೇಶಕ ಎಸ್‌. ನಾರಾಯಣ್‌ ಅವರಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಕೆಲ ತಿಂಗಳ ಹಿಂದೆ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡರು ಈ ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಅಲ್ಲಿಂದ ಸಿನಿಮಾ ಒಂದಿಂಚೂ ಮುಂದಕ್ಕೆ ಹೋಗಿಲ್ಲ. ಅಷ್ಟೇ ಯಾಕೆ? ಗಾಂಧಿನಗರದ ಗಲ್ಲಿಯಲ್ಲಿ ಬರುತ್ತಿರುವ ಸುದ್ದಿಗಳ ಪ್ರಕಾರ ಈ ಸಿನಿಮಾ ಶುರವಾಗೋದೇ ಅನುಮಾನ ಎನ್ನಲಾಗಿದೆ.

ನಿರ್ದೇಶಕ ಎಸ್‌. ನಾರಾಯಣ್‌, ಈ ಸಿನಿಮಾಗೆ ಸಂಪೂರ್ಣ ಸ್ಕ್ರಿಪ್ಟ್‌ ಸಿದ್ಧ ಮಾಡಿಕೊಂಡು, ಕಲಾವಿದರು ಮತ್ತು ತಂತ್ರಜ್ಞರ ಡೇಟ್ಸ್‌ನೊಂದಿಗೆ ಕಾಯುತ್ತಿದ್ದಾರಂತೆ. ' ನಿರ್ಮಾಪಕರು ಮಾತ್ರ ಇನ್ನೂ ಸಿನಿಮಾ ಆರಂಭಿಸುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿರದ ಕಾರಣ ಚಿತ್ರೀಕರಣ ಆರಂಭವಾಗಿಲ್ಲ. ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾನು ಈ ಸ್ಕ್ರಿಪ್ಟ್‌ ಮಾಡಿಕೊಂಡಿದ್ದೇನೆ, ಕುಮಾರಸ್ವಾಮಿಯವರನ್ನು ಕಷ್ಟಪಟ್ಟು ಒಪ್ಪಿಸಿದ್ದೇನೆ. ಜನರಿಗೆ ಒಂದೊಳ್ಳೆ ಮೆಸೆಜ್‌ ಕೊಡುವ ಸಿನಿಮಾ ಇದಾಗುತ್ತದೆ. ಆದರೆ ನಿರ್ಮಾಪಕರ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ ನಾರಾಯಣ್‌.

ಭರ್ಜರಿ ಮುಹೂರ್ತ ಮಾಡಿದ್ದು ನೋಡಿದರೆ ಇನ್ನೇನು ಚಿತ್ರೀಕರಣ ಆರಂಭಿಸಿ ಆದಷ್ಟು ಬೇಗ ಸಿನಿಮಾ ಮುಗಿಸೇಬಿಡುತ್ತಾರೆ ಎನ್ನಲಾಗಿದೆ. ಜತೆಗೆ ಮುಹೂರ್ತ ದಿನದ ಖರ್ಚು ವೆಚ್ಚಗಳ ಬಾಕಿ ಇನ್ನೂ ಪಾವತಿಯಾಗಿಲ್ಲವಂತೆ. ಇದು ಸಹ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಾರಾಯಣ್‌ ಮಾತ್ರ ನಿರ್ಮಾಪಕರು ಬಂದು ನಾಳೆಯಿಂದ ಶೂಟಿಂಗ್‌ ಮಾಡಿ ಎಂದರೆ ನಾವು ರೆಡಿ ಇದ್ದೇವೆ ಎಂದು ಹೇಳುತ್ತಾರೆ. ಅರ್ಜುನ್‌ ಸರ್ಜಾ ಅವರು ಕುಮಾರಸ್ವಾಮಿ ಪಾತ್ರದಲ್ಲಿ ನಟಿಸುವುದು ನಿಶ್ಚಯವಾಗಿದೆ.

---------------

ಶೂಟಿಂಗ್‌ ಆರಂಭಿಸಲು ನಿರ್ಮಾಪಕರು ಇನ್ನೂ ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ. ಅರ್ಜುನ್‌ ಸರ್ಜಾ ಕೂಡ ಚಿತ್ರೀಕರಣಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಪ್ರಾಜೆಕ್ಟ್ ತಟಸ್ಥವಾಗಿದೆ. ಅಷ್ಟೇ ನಾನು ಹೇಳಲು ಸಾಧ್ಯ.

-ಎಸ್‌ ನಾರಾಯಣ್‌, ನಿರ್ದೇಶಕ-

Vijaya Karnataka Web bhoomi puthra movie issue
ನೆನೆಗುದಿಗೆ ಬಿದ್ದ ಭೂಮಿಪುತ್ರ

-----

ಸ್ಕ್ರಿಪ್ಟ್‌ನ್ನು ರೆಡಿ ಮಾಡಿ ಕುಮಾರಸ್ವಾಮಿಯವರ ಕೈಗೆ ನೀಡಿದ್ದೇವೆ. ಅವರು ಅದನ್ನು ನೋಡಿ ಓಕೆ ಮಾಡಿದ ಮೇಲೆ ನಾನು ಮುಂದುವರಿಯತ್ತೇನೆ. ಅಲ್ಲದೆ ಮುಹೂರ್ತದ ದಿನ ನಡೆದ ಕಾರ್ಯಕ್ರಮದ ಬ್ಯಾಲೆನ್ಸ್‌ ಬರಬೇಕು ಎಂದು ನನ್ನನ್ನು ಯಾರೂ ಕೇಳಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ, ಕುಮಾರಸ್ವಾಮಿ ಓಕೆ ಮಾಡದೆ ನಾವು ಶೂಟಿಂಗ್‌ ಆರಂಭಿಸಲು ಸಾಧ್ಯವಿಲ್ಲ.

-ಪ್ರಭುಕುಮಾರ್‌, ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌