ಆ್ಯಪ್ನಗರ

ಹುತಾತ್ಮ ಯೋಧ ಗುರು ಕುಟುಂಬಕ್ಕೆ 'ರಾಂಧವ' ನೆರವಿನ ಹಸ್ತ

'ದೇಶಕ್ಕಾಗಿ ಮಡಿದ ಗುರು ಕುಟುಂಬಕ್ಕೆ ನಮ್ಮ ಕೈಲಾದ ಸಹಾಯ ಮಾಡೋದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ನಾನು ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಬಂದಿದ್ದೇನೆ' ಎಂದಿದ್ದಾರೆ ಭುವನ್‌. ಇದೇ ಸಂದರ್ಭದಲ್ಲಿ ಗುರು ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Vijaya Karnataka Web 18 Feb 2019, 4:47 pm
ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ, ನಟ ಭುವನ್ ಪೊನ್ನಪ್ಪ ಸದ್ಯಕ್ಕೆ ರಾಂಧವ ಎಂಬ ಭಿನ್ನ ಶೀರ್ಷಿಕೆಯ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಇದೀಗ ಭುವನ್ ಪುಲ್ವಾಮಾ ಸ್ಫೋಟದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
Vijaya Karnataka Web randhava


ಹುತಾತ್ಮ ಗುರು ಕುಟುಂಬಿಕರನ್ನು ಭೇಟಿಯಾಗಿ ವೈಯಕ್ತಿಕವಾಗಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಮದ್ದೂರಿನ ಗುರು ಅವರ ಸ್ವಗ್ರಾಮಕ್ಕೆ ತೆರಳಿದ ಭುವನ್‌, ತಮ್ಮ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

'ದೇಶಕ್ಕಾಗಿ ಮಡಿದ ಗುರು ಕುಟುಂಬಕ್ಕೆ ನಮ್ಮ ಕೈಲಾದ ಸಹಾಯ ಮಾಡೋದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ನಾನು ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಬಂದಿದ್ದೇನೆ' ಎಂದಿದ್ದಾರೆ ಭುವನ್‌. ಇದೇ ಸಂದರ್ಭದಲ್ಲಿ ಗುರು ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಲವಾರು ತಾರೆಗಳು ಹುತಾತ್ಮ ಯೋಧರ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಮುಖ್ಯವಾಗಿ ಅಮಿತಾಬ್ ಬಚ್ಚನ್, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಟೋಟಲ್ ಧಮಾಲ್ ಚಿತ್ರತಂಡ, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ ಮುಂತಾದವರು ನಾನಾ ರೀತಿಯ ನೆರವು ನೀಡಿದ್ದಾರೆ.

ಇತ್ತೀಚೆಗಷ್ಟೇ ಸುಮಲತಾ ಅಂಬರೀಶ್ ಅವರು ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡಿದ್ದನ್ನು ಸ್ಮರಿಸಬಹುದು. ಇನ್ನು ರಾಂಧವ ಸಿನಿಮಾದ ವಿಚಾರಕ್ಕೆ ಬಂದರೆ, ಸುನೀಲ್‌ ಎಸ್‌.ಆಚಾರ್ಯ ನಿರ್ದೇಶನದ ಚಿತ್ರ ಇದಾಗಿದ್ದು, ವಿಚಿತ್ರ ಟೈಟಲ್‌ ಮತ್ತು ಕಥೆಯ ಹೂರಣದಿಂದಾಗಿ ಸಿನಿಮಾ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ರಾಂಧವ ಅಂದರೇನು ಎಂಬ ಪ್ರಶ್ನೆಗೆ ಸಿನಿಮಾ ತಂಡವೇ ಉತ್ತರಿಸುವಂತೆ, ರಣರಂಗದಲ್ಲಿ ಕಾದಾಡಿ ಯುದ್ಧದಲ್ಲಿ ಗೆಲ್ಲುವವರನ್ನು ಈ ಹೆಸರಿನಿಂದ ಕರೆಯುತ್ತಾರಂತೆ.

ಸಿನಿಮಾಗೂ ಟೈಟಲ್‌ಗೂ ಸಂಬಂಧ ಇರುವ ಕಾರಣಕ್ಕಾಗಿ ಇಂಥದ್ದೊಂದು ಶೀರ್ಷಿಕೆ ಇಟ್ಟಿದೆ ಚಿತ್ರತಂಡ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆ್ಯಕ್ಷ ನ್‌, ಥ್ರಿಲ್ಲರ್‌, ಸಸ್ಪೆನ್ಸ್‌ ಇವುಗಳ ಜತೆಗೆ ಕೋಮಲ ಪ್ರೇಮಕಥೆ ಕೂಡ ಸಿನಿಮಾದಲ್ಲಿದೆ. ಮೂರು ತಲೆಮಾರುಗಳ ಕಥೆ ಈ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ. ಶೇ. 20ರಷ್ಟು ಗ್ರಾಫಿಕ್ಸ್‌ ಕೆಲಸ ಕೂಡ ಸಿನಿಮಾದಲ್ಲಿ ಅಳವಡಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌