ಆ್ಯಪ್ನಗರ

ಗಾಂಜಾ ಕೇಸ್‌ನಿಂದ ಮುಕ್ತರಾದ ಗಾಯಕ ಚಂದನ್ ಶೆಟ್ಟಿ

ಕೊನೆಗೂ ನಿರಾಳರಾಗಿದ್ದಾರೆ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ. ಸ್ಯಾಂಡಲ್‍ವುಡ್‌ನ 'ಅಂತ್ಯ' ಸಿನಿಮಾದ ಗಾಂಜಾ ಹಾಡಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಯುವಕರು ಮಾದಕ ವಸ್ತುಗಳ ಕಡೆಗೆ ಆಕರ್ಷಿತರಾಗುವಂತೆ ಹಾಡು ಇದೆ ಎಂದು ಆರೋಪಿಸಲಾಗಿತ್ತು.

Vijaya Karnataka Web 4 Sep 2018, 4:05 pm
ಕೊನೆಗೂ ನಿರಾಳರಾಗಿದ್ದಾರೆ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ. ಸ್ಯಾಂಡಲ್‍ವುಡ್‌ನ ' ಅಂತ್ಯ' ಸಿನಿಮಾದ ಗಾಂಜಾ ಹಾಡಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಯುವಕರು ಮಾದಕ ವಸ್ತುಗಳ ಕಡೆಗೆ ಆಕರ್ಷಿತರಾಗುವಂತೆ ಹಾಡು ಇದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕೋರ್ಟ್ ಕೂಡ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿತ್ತು.
Vijaya Karnataka Web chandan-shetty


ಕಾನೂನು ಹೋರಾಟ ನಡೆಸುತ್ತಿದ್ದ ಚಂದನ್ ಶೆಟ್ಟಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು ಸಿಸಿಬಿ ಸ್ಪಷ್ಟಪಡಿಸಿದೆ. ಸಿಸಿಬಿ ಎಸಿಪಿ ಬಿ ಎಸ್ ಮೋಹನ್ ಕುಮಾರ್ ರಿಂದ ಚಂದನ್‌ಗೆ ಪತ್ರ ರವಾನಿಸಲಾಗಿದೆ.

"ನಿಮ್ಮ ಹೇಳಿಕೆಯನ್ನ ಪಡೆದು ವಿಚಾರಣೆಯನ್ನು ಮುಗಿಸಿದ್ದೇವೆ. ಇನ್ನು ಮುಂದೆ ಈ ಸಂಬಂಧ ವಿಚಾರಣೆ ಇರುವುದಿಲ್ಲವೆಂದು" ಎಂದು ಚಂದನ್ ಶೆಟ್ಟಿಗೆ ಪತ್ರದ ಮೂಲಕ ಸಿಸಿಬಿ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಈ ವಿವಾದದಿಂದ ರಿಲ್ಯಾಕ್ಸ್ ಆಗಿದ್ದಾರೆ ಚಂದನ್ ಶೆಟ್ಟಿ.

ಏನಿದು ವಿವಾದ?
'ಅಂತ್ಯ' ಚಿತ್ರಕ್ಕಾಗಿ ಚಂದನ್‌ ಹಾಡಿರುವ ಹಾಡು ವಿವಾದಕ್ಕೀಡಾಗಿತ್ತು. ಈ ಸಿನಿಮಾ ರಿಲೀಸ್‌ ಆಗಿ ಮೂರು ವರ್ಷಗಳ ನಂತರ ಸಿಸಿಬಿಯ ಮಾದಕ ದ್ರವ್ಯ ತಡೆ ವಿಭಾಗ ನೋಟಿಸ್‌ ಜಾರಿ ಮಾಡಿದ್ದು, ಈ ಮೂಲಕ ಕಲಾವಿದರ ಬದ್ಧತೆಯನ್ನೂ ಅದು ಪ್ರಶ್ನೆ ಮಾಡಿದೆ. ಚಂದನ್‌ ಅವರ ಪಾಪ್ಯುಲರ್‌ ಗೀತೆ 'ಮೂರೇ ಮೂರು ಪೆಗ್ಗಿಗೆ' ಕೂಡ ಮಾದಕ ದ್ರವ್ಯ ಹಾಗೂ ಮದ್ಯ ಸೇವನೆಯವನ್ನು ಪ್ರಚೋದಿಸುವುದೇ ಆಗಿರುವುದರಿಂದ ಪೊಲೀಸ್‌ ಇಲಾಖೆಯ ಕಣ್ಣು ಕೆಂಪಾಗಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌