ಆ್ಯಪ್ನಗರ

ಕಿರಿಕ್‌ ಕೀರ್ತಿಗೆ ಕಿಡಿಗೇಡಿಗಳಿಂದ ಕಿರಿಕ್‌

ಬಿಗ್‌ಬಾಸ್ 4 ರಿಯಾಲಿಟಿ ಶೋ ರನ್ನರಪ್ ಕಿರಿಕ್ ಕೀರ್ತಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಗಲಾಟೆ ಮಾಡಿದ್ದಾರೆ.

ವಿಕ ಸುದ್ದಿಲೋಕ 18 Mar 2017, 3:31 pm
ಬೆಂಗಳೂರು: ಬಿಗ್‌ಬಾಸ್ 4 ರಿಯಾಲಿಟಿ ಶೋ ರನ್ನರಪ್ ಕಿರಿಕ್ ಕೀರ್ತಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಗಲಾಟೆ ಮಾಡಿದ್ದಾರೆ. ಶುಕ್ರವಾರ ತಡರಾತ್ರಿ ನಗರದ ವಿವಿ ಜ್ಞಾನಭಾರತಿ ಆವರಣದಲ್ಲಿ ಈ ಘಟನೆ ನಡೆದಿದೆ.
Vijaya Karnataka Web bigg boss contestant car damaged by miscreants
ಕಿರಿಕ್‌ ಕೀರ್ತಿಗೆ ಕಿಡಿಗೇಡಿಗಳಿಂದ ಕಿರಿಕ್‌


ಮೈಸೂರಿನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಕೀರ್ತಿ, ಜ್ಞಾನಭಾರತಿ ಕ್ಯಾಂಪಸ್ ರಸ್ತೆಯಲ್ಲಿಅಡ್ಡಲಾಗಿ ನಿಲ್ಲಿಸಿದ್ದ ಬೈಕ್‌ಗೆ ತಮ್ಮ ಕಾರಿನ ಹಾರ್ನ್‌ ಹೊಡೆದಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಗುಂಪು ಅಸಭ್ಯವಾಗಿ ವರ್ತಿಸಿ, ಕೀರ್ತಿ ಕಾರಿನ ಮೇಲೆ ಕಲ್ಲೆಸೆದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಕೀರ್ತಿ ಕಾರಿಗೂ ಮುನ್ನ ಅದೇ ರಸ್ತೆಯಲ್ಲಿ ಮೂರ್ನಾಲ್ಕು ಕಾರುಗಳ ಮೇಲೆ ಕಲ್ಲೆಸೆದಿದ್ದಾರೆ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌