ಆ್ಯಪ್ನಗರ

ತಾಳಕ್ಕೆ ತಕ್ಕ ಹೆಜ್ಜೆ ಹಾಕಿದ ಶ್ರುತಿ

ಭರತ ಬಾಹುಬಲಿಯಾಗಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ನಟಿಸುತ್ತಿರುವ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಶ್ರುತಿ ಪ್ರಕಾಶ್‌.

Vijaya Karnataka 1 Feb 2019, 8:59 am
ಮಾಸ್ಟರ್‌ ಪೀಸ್‌ ಚಿತ್ರದ ನಂತರ ಭರತ ಬಾಹುಬಲಿಯಾಗಿ ಬರುತ್ತಿದ್ದಾರೆ ನಿರ್ದೇಶಕ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ. ಹೀರೊ ಮತ್ತು ನಿರ್ದೇಶಕ ಎರಡೂ ಪಾತ್ರಗಳನ್ನು ನಿಭಾಯಿಸುತ್ತಿರುವ ಮಂಜು ಮಾಂಡವ್ಯ ಚಿತ್ರದಲ್ಲಿ ಶ್ರುತಿ ಪ್ರಕಾಶ್‌ಗಾಗಿ ಸ್ಪೆಷಲ್‌ ಸಾಂಗ್‌ ಇಟ್ಟಿದ್ದಾರೆ. ಹಾಡಿನ ಎಕ್ಸ್‌ಕ್ಲೂಸಿವ್‌ ಸ್ಟಿಲ್‌ ಇಲ್ಲಿದೆ.
Vijaya Karnataka Web Shruthi


ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಶ್ರುತಿ ಪ್ರಕಾಶ್‌ ಸಿಂಗರ್‌ ಎನ್ನುವುದು ಎಲ್ಲರಿಗೆ ಗೊತ್ತಿತ್ತು. ಈಗ ಡಾನ್ಸರ್‌ ಆಗಿಯೂ ಅವರು ತೆರೆಯ ಮೇಲೆ ಮಿಂಚಲಿದ್ದಾರೆ. ಭರತ ಬಾಹುಬಲಿ ಚಿತ್ರದಲ್ಲಿ ಸ್ಪೆಷಲ್‌ ಸಾಂಗ್‌ಗೆ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಜತೆ ಹೆಜ್ಜೆ ಹಾಕಿದ್ದಾರೆ. "ಅವರು ಒಳ್ಳೆಯ ಡಾನ್ಸರ್‌ ಅನ್ನೋದು ಕಿರುತೆರೆಯಲ್ಲಿ ಗೊತ್ತಾಯಿತು. ಹಾಗಾಗಿ ಈ ಹಾಡಿಗೆ ಅವರೇ ಇದ್ದರೆ ಚೆನ್ನಾಗಿರುತ್ತೆ ಅಂತ ಆಯ್ಕೆ ಮಾಡಿದೆವು. ಹಾಡನ್ನು ಕೇಳಿ ಖುಷಿಯಿಂದ ಒಪ್ಪಿಕೊಂಡು ಶೂಟ್‌ಗೆ ಬಂದರು. ಇದು ಕೇವಲ ಸ್ಪೆಷಲ್‌ ಸಾಂಗ್‌ ಆಗಿಲ್ಲ. ಚಿತ್ರದಲ್ಲಿ ಸ್ಪೆಷಲ್‌ ಅಪಿಯರೆನ್ಸ್‌ ಆಗಿದೆ' ಎಂದಿದ್ದಾರೆ ಮಂಜು ಮಾಂಡವ್ಯ.

ಹಾಡನ್ನು ಮಂಜು ಮಾಂಡವ್ಯ ಅವರೇ ಬರೆದಿದ್ದು ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಮಾಡೆಲ್‌ ಸಾರಾ ಹರೀಶ್‌ ನಾಯಕಿಯಾಗಿ ನಟಿಸಿದ್ದಾರೆ. ಶ್ರೇಯಾ ಇನ್ನೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಎಸೆನ್ಸ್‌ ಜತೆ ಸೆಂಟಿಮೆಂಟ್‌ ಸ್ಟೋರಿ ಹೇಳಿದ್ದಾರಂತೆ. ಯುವಜನತೆಯಲ್ಲಿ ತ್ಯಾಗಮನೋಭಾವ ಎಷ್ಟಿದೆ, ಯಾವ ರೀತಿಯ ತ್ಯಾಗ ಮಾಡುತ್ತಾರೆ ಎನ್ನುವುದು ಚಿತ್ರದಲ್ಲಿದೆ ಎಂದಿದ್ದಾರೆ ಅವರು. ಹಳ್ಳಿ ಸೊಗಡಿನ ಕತೆ ಚಿತ್ರದಲ್ಲಿದೆ. ಯುವಕರಿಗೆ ವ್ಯವಸಾಯದ ಬಗ್ಗೆ ಆಸಕ್ತಿ ಹೇಗಿದೆ ಎನ್ನುವುದೂ ಇಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌