ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋ 6 ಸರಣಿಗಳನ್ನು ಯಶಸ್ವಿಯಾಗಿ ಪೂರೈಸಿದೆ. 7ನೇ ಸೀಸನ್ಗೆ ಕಲರ್ಸ್ ಕನ್ನಡ ವಾಹಿನಿ ತಯಾರಿ ಮಾಡಿಕೊಳ್ಳುತ್ತಿದ್ದು, ಅಕ್ಟೋಬರ್ 20ರಿಂದ ಬಿಗ್ಬಾಸ್ ಪ್ರಸಾರಗೊಳ್ಳಲಿದೆ.
ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಕೂಡ 'ಬಿಗ್ಬಾಸ್' ಮನೆಗಳ ಸ್ಪರ್ಧಿಗಳಾಗಿದ್ದರು. ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಎಪಿಸೋಡ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಜೊತೆಗೆ ಹಿಂದಿನ ಬಾರಿ ಕಲರ್ಸ್ ಸೂಪರ್ ಅಲ್ಲಿ ಪ್ರಸಾರವಾಗಿದ್ದ ಈ ಶೋ ಈ ಬಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈಗ ಬಿಗ್ ಮನೆಗೆ ಎಂಟ್ರಿ ಯಾರು ಯಾರು ಕೊಡುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಇರಬಹುದು. ಇದರ ಬಗ್ಗೆ ಈಗಾಗಲೇ ಗಾಸಿಪ್ ಹರಿದಾಡುತ್ತಿವೆ. ಶ್ವೇತಾ ಆರ್.ಪ್ರಸಾದ್ ಈ ಶೋದ ಸ್ಪರ್ಧಿ ಆಗುತ್ತಾರೆ ಎಂಬ ಗುಸು ಗುಸು ಹರಿದಾಡುತ್ತಿದೆ.
ಶ್ವೇತಾ ಪ್ರಸಾದ್ 'ರಾಧಾ ರಮಣ' ಧಾರಾವಾಹಿಯಿಂದ ಹೊರಬಂದಿದ್ದಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅವರು ಜಾಹ್ನವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತದನಂತರದಲ್ಲಿ ಒಂದು ಡಾನ್ಸ್ ಶೋದಲ್ಲೂ ಕೂಡ ಕಾಣಿಸಿಕೊಂಡರು. 'ರಾಧಾ ರಮಣ' ಧಾರಾವಾಹಿಯಲ್ಲಿ ಕೇವಲ ಒಂದು ವರ್ಷ ಮಾತ್ರ ನಟಿಸುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಎರಡು ವರ್ಷದವರೆಗೆ ರಾಧಾ ಮಿಸ್ ಆಗಿ ಮುಂದುವರೆದಿದ್ದರು. ತದನಂತರದಲ್ಲಿ ಮತ್ತೆ ಐದು ವರ್ಷ ಇದೇ ಪಾತ್ರದಲ್ಲಿ ನಟಿಸಬೇಕಾಗಿ ಬಂದರೆ ಸಾಧ್ಯವಾಗೋದಿಲ್ಲ ಎಂಬ ಕಾರಣಕ್ಕೆ ಧಾರಾವಾಹಿಯಿಂದ ಹೊರಬಂದಿದ್ದಾರೆ. ಇವರ ಅಭಿನಯದ 'ಕಳ್ಬೆಟ್ಟದ ದರೋಡೆಕೋರರು' ಚಿತ್ರ ಈ ವರ್ಷವೇ ತೆರೆಕಂಡಿತ್ತು.
ಪ್ರಸ್ತುತ ಅವರು ಕೆಲ ಜಾಹೀರಾತು ಆಧರಿತ ಫೋಟೋಶೂಟ್ ಮೂಲಕ ಪ್ರೇಕ್ಷಕರ ಮುಂದೆ ಆಗಾಗ ಬರುತ್ತಿರುತ್ತಾರೆ. ಜೊತೆಗೆ ಅವರ ಪತಿ ಆರ್ಜೆ ಪ್ರದೀಪ್ ಜೊತೆ ಸೇರಿ ನೆರೆ ಪ್ರವಾಹದ ಸಂತ್ರಸ್ತರಿಗೆ ಆಹಾರ ಒದಗಿಸುವಲ್ಲಿ ಸಾಕಷ್ಟು ನೆರವಾಗಿದ್ದರು. ಅಷ್ಟೇ ಅಲ್ಲದೆ ಈಗಲೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಮಾವಿನ ಹಣ್ಣು ಬೆಳೆದು ಅದರ ವ್ಯಾಪಾರದಲ್ಲೂ ಕೂಡ ಈ ದಂಪತಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಒಳ್ಳೆಯ ಕಥೆಗಳಿಗಾಗಿ ಕಾಯುತ್ತಿರುವುದಾಗಿ ಕೆಲ ದಿನಗಳ ಹಿಂದೆ ಶ್ವೇತಾ ವಿಜಯ ಕರ್ನಾಟಕ ವೆಬ್ಸೈಟ್ ಜೊತೆ ಹೇಳಿಕೊಂಡಿದ್ದರು. ರಾಧಾ ಮಿಸ್ ಅವರನ್ನು ಇಷ್ಟಪಡುವ ಕಿರುತೆರೆ ಮಂದಿಯಿದ್ದಾರೆ. 'ರಾಧಾ ರಮಣ' ಧಾರಾವಾಹಿಯಿಂದ ಶ್ವೇತಾ ಹೊರಬಿದ್ದಾಗ ಹಲವರು ಬೇಸರ ಮಾಡಿಕೊಂಡಿದ್ದರು. ರಾಧಾ ಮಿಸ್ ಮತ್ತೆ ವಾಪಾಸ್ ಬನ್ನು ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಇವರ ಫ್ಯಾನ್ಸ್ ಪೇಜ್ಗಳಲ್ಲಿ ನಿತ್ಯ ಇವರ ಬಗೆಗಿನ ಫೋಟೋ, ವಿಡಿಯೋ ತುಣುಕುಗಳು ಅಪ್ಲೋಡ್ ಆಗುತ್ತಲೇ ಇರುತ್ತವೆ. ಹೀಗಾಗಿ ಇವರ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಜನರು ಇಷ್ಟಪಡುತ್ತಾರೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾಯಿತು, ಹೀಗಾಗಿ ಸ್ವಲ್ಪ ಬದಲಾವಣೆ ಇರಲಿ ಎಂದು ರಾಧಾ ಮಿಸ್ ಬಿಗ್ಬಾಸ್ಗೆ ಬರುವ ಸಾಧ್ಯತೆಯಿದೆ. ಈಗ ಅವರು ಬಿಗ್ಬಾಸ್ಗೆ ಹೋಗುತ್ತಾರೆ ಎಂಬ ವದಂತಿಯಿದ್ದು, ಈ ಬಗ್ಗೆ ವಿಜಯಕರ್ನಾಟಕ ವೆಬ್ಸೈಟ್ ಜೊತೆಗೆ ಅವರು ಮಾತನಾಡಿದ್ದಾರೆ.
'ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ' ಎಂದು ಶ್ವೇತಾ ಸ್ಪಷ್ಟವಾಗಿ ಹೇಳಿದ್ದಾರೆ. ಶ್ವೇತಾ ಒಂದುವೇಳೆ ಬಿಗ್ಬಾಸ್ ಹೋಗೋದು ನಿಜಕ್ಕೂ ಸುಳ್ಳು ಎಂದಿದ್ದರೆ ಹೋಗುತ್ತಿಲ್ಲ ಎಂದು ಹೇಳಿರುತ್ತಿದ್ದರು. ಈಗ ಪ್ರತಿಕ್ರಿಯೆ ನೀಡೋದಿಲ್ಲ ಎಂದಿರುವುದು ಬಿಗ್ ಮನೆಗೆ ಎಂಟ್ರಿ ಕೊಡಬಹುದು ಎಂದೆನಿಸುತ್ತಿದೆ. ವಾಹಿನಿ ಮತ್ತು ಶೋ ನಿಯಮದ ಪ್ರಕಾರ ಬಿಗ್ಬಾಸ್ ಸ್ಪರ್ಧಿಗಳು ಈ ಬಗ್ಗೆ ಹೇಳುವಂತಿಲ್ಲ. ಹೀಗಾಗಿ ಶೋಗೆ ಹೋಗುತ್ತಿದ್ದೇನೆ ಎಂದು ಹೇಳಲಾಗದೆ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿರಬಹುದು. ಈ ಬಗ್ಗೆ ಅಕ್ಟೋಬರ್ 20ಕ್ಕೆ ಯಾವುದು ಸತ್ಯ? ಯಾವುದು ಸುಳ್ಳು ಎಂಬುದು ಗೊತ್ತಾಗತ್ತೆ ಬಿಡಿ, ಅಲ್ಲಿಯವರೆಗೆ ಕಾಯಬೇಕು..ಏನಂತೀರಾ?
ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಕೂಡ 'ಬಿಗ್ಬಾಸ್' ಮನೆಗಳ ಸ್ಪರ್ಧಿಗಳಾಗಿದ್ದರು. ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಎಪಿಸೋಡ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಜೊತೆಗೆ ಹಿಂದಿನ ಬಾರಿ ಕಲರ್ಸ್ ಸೂಪರ್ ಅಲ್ಲಿ ಪ್ರಸಾರವಾಗಿದ್ದ ಈ ಶೋ ಈ ಬಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈಗ ಬಿಗ್ ಮನೆಗೆ ಎಂಟ್ರಿ ಯಾರು ಯಾರು ಕೊಡುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಇರಬಹುದು. ಇದರ ಬಗ್ಗೆ ಈಗಾಗಲೇ ಗಾಸಿಪ್ ಹರಿದಾಡುತ್ತಿವೆ. ಶ್ವೇತಾ ಆರ್.ಪ್ರಸಾದ್ ಈ ಶೋದ ಸ್ಪರ್ಧಿ ಆಗುತ್ತಾರೆ ಎಂಬ ಗುಸು ಗುಸು ಹರಿದಾಡುತ್ತಿದೆ.
ಶ್ವೇತಾ ಪ್ರಸಾದ್ 'ರಾಧಾ ರಮಣ' ಧಾರಾವಾಹಿಯಿಂದ ಹೊರಬಂದಿದ್ದಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅವರು ಜಾಹ್ನವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತದನಂತರದಲ್ಲಿ ಒಂದು ಡಾನ್ಸ್ ಶೋದಲ್ಲೂ ಕೂಡ ಕಾಣಿಸಿಕೊಂಡರು. 'ರಾಧಾ ರಮಣ' ಧಾರಾವಾಹಿಯಲ್ಲಿ ಕೇವಲ ಒಂದು ವರ್ಷ ಮಾತ್ರ ನಟಿಸುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಎರಡು ವರ್ಷದವರೆಗೆ ರಾಧಾ ಮಿಸ್ ಆಗಿ ಮುಂದುವರೆದಿದ್ದರು. ತದನಂತರದಲ್ಲಿ ಮತ್ತೆ ಐದು ವರ್ಷ ಇದೇ ಪಾತ್ರದಲ್ಲಿ ನಟಿಸಬೇಕಾಗಿ ಬಂದರೆ ಸಾಧ್ಯವಾಗೋದಿಲ್ಲ ಎಂಬ ಕಾರಣಕ್ಕೆ ಧಾರಾವಾಹಿಯಿಂದ ಹೊರಬಂದಿದ್ದಾರೆ. ಇವರ ಅಭಿನಯದ 'ಕಳ್ಬೆಟ್ಟದ ದರೋಡೆಕೋರರು' ಚಿತ್ರ ಈ ವರ್ಷವೇ ತೆರೆಕಂಡಿತ್ತು.
ಪ್ರಸ್ತುತ ಅವರು ಕೆಲ ಜಾಹೀರಾತು ಆಧರಿತ ಫೋಟೋಶೂಟ್ ಮೂಲಕ ಪ್ರೇಕ್ಷಕರ ಮುಂದೆ ಆಗಾಗ ಬರುತ್ತಿರುತ್ತಾರೆ. ಜೊತೆಗೆ ಅವರ ಪತಿ ಆರ್ಜೆ ಪ್ರದೀಪ್ ಜೊತೆ ಸೇರಿ ನೆರೆ ಪ್ರವಾಹದ ಸಂತ್ರಸ್ತರಿಗೆ ಆಹಾರ ಒದಗಿಸುವಲ್ಲಿ ಸಾಕಷ್ಟು ನೆರವಾಗಿದ್ದರು. ಅಷ್ಟೇ ಅಲ್ಲದೆ ಈಗಲೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಮಾವಿನ ಹಣ್ಣು ಬೆಳೆದು ಅದರ ವ್ಯಾಪಾರದಲ್ಲೂ ಕೂಡ ಈ ದಂಪತಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಒಳ್ಳೆಯ ಕಥೆಗಳಿಗಾಗಿ ಕಾಯುತ್ತಿರುವುದಾಗಿ ಕೆಲ ದಿನಗಳ ಹಿಂದೆ ಶ್ವೇತಾ ವಿಜಯ ಕರ್ನಾಟಕ ವೆಬ್ಸೈಟ್ ಜೊತೆ ಹೇಳಿಕೊಂಡಿದ್ದರು. ರಾಧಾ ಮಿಸ್ ಅವರನ್ನು ಇಷ್ಟಪಡುವ ಕಿರುತೆರೆ ಮಂದಿಯಿದ್ದಾರೆ. 'ರಾಧಾ ರಮಣ' ಧಾರಾವಾಹಿಯಿಂದ ಶ್ವೇತಾ ಹೊರಬಿದ್ದಾಗ ಹಲವರು ಬೇಸರ ಮಾಡಿಕೊಂಡಿದ್ದರು. ರಾಧಾ ಮಿಸ್ ಮತ್ತೆ ವಾಪಾಸ್ ಬನ್ನು ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಇವರ ಫ್ಯಾನ್ಸ್ ಪೇಜ್ಗಳಲ್ಲಿ ನಿತ್ಯ ಇವರ ಬಗೆಗಿನ ಫೋಟೋ, ವಿಡಿಯೋ ತುಣುಕುಗಳು ಅಪ್ಲೋಡ್ ಆಗುತ್ತಲೇ ಇರುತ್ತವೆ. ಹೀಗಾಗಿ ಇವರ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಜನರು ಇಷ್ಟಪಡುತ್ತಾರೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾಯಿತು, ಹೀಗಾಗಿ ಸ್ವಲ್ಪ ಬದಲಾವಣೆ ಇರಲಿ ಎಂದು ರಾಧಾ ಮಿಸ್ ಬಿಗ್ಬಾಸ್ಗೆ ಬರುವ ಸಾಧ್ಯತೆಯಿದೆ. ಈಗ ಅವರು ಬಿಗ್ಬಾಸ್ಗೆ ಹೋಗುತ್ತಾರೆ ಎಂಬ ವದಂತಿಯಿದ್ದು, ಈ ಬಗ್ಗೆ ವಿಜಯಕರ್ನಾಟಕ ವೆಬ್ಸೈಟ್ ಜೊತೆಗೆ ಅವರು ಮಾತನಾಡಿದ್ದಾರೆ.
'ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ' ಎಂದು ಶ್ವೇತಾ ಸ್ಪಷ್ಟವಾಗಿ ಹೇಳಿದ್ದಾರೆ. ಶ್ವೇತಾ ಒಂದುವೇಳೆ ಬಿಗ್ಬಾಸ್ ಹೋಗೋದು ನಿಜಕ್ಕೂ ಸುಳ್ಳು ಎಂದಿದ್ದರೆ ಹೋಗುತ್ತಿಲ್ಲ ಎಂದು ಹೇಳಿರುತ್ತಿದ್ದರು. ಈಗ ಪ್ರತಿಕ್ರಿಯೆ ನೀಡೋದಿಲ್ಲ ಎಂದಿರುವುದು ಬಿಗ್ ಮನೆಗೆ ಎಂಟ್ರಿ ಕೊಡಬಹುದು ಎಂದೆನಿಸುತ್ತಿದೆ. ವಾಹಿನಿ ಮತ್ತು ಶೋ ನಿಯಮದ ಪ್ರಕಾರ ಬಿಗ್ಬಾಸ್ ಸ್ಪರ್ಧಿಗಳು ಈ ಬಗ್ಗೆ ಹೇಳುವಂತಿಲ್ಲ. ಹೀಗಾಗಿ ಶೋಗೆ ಹೋಗುತ್ತಿದ್ದೇನೆ ಎಂದು ಹೇಳಲಾಗದೆ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿರಬಹುದು. ಈ ಬಗ್ಗೆ ಅಕ್ಟೋಬರ್ 20ಕ್ಕೆ ಯಾವುದು ಸತ್ಯ? ಯಾವುದು ಸುಳ್ಳು ಎಂಬುದು ಗೊತ್ತಾಗತ್ತೆ ಬಿಡಿ, ಅಲ್ಲಿಯವರೆಗೆ ಕಾಯಬೇಕು..ಏನಂತೀರಾ?