ಆ್ಯಪ್ನಗರ

ಬಿಜೆಪಿ ವಿರುದ್ಧ ಟೀಕೆ; ಸ್ಟಾರ್ ಮನೆಗೆ ಬಂದ ಪಾರ್ಸಲ್‌ನಲ್ಲಿ ಏನಿತ್ತು?

ಸಿನಿಮಾವನ್ನು ಎಂಜಿಆರ್ ಹೊರತುಪಡಿಸಿ ಯಾರೂ ರಕ್ಷಿಸಲಿಲ್ಲ. ಪೈರಸಿ ಮಾಡುವವರಿಗೆ ರಾಜಕೀಯ ಮುಖಂಡರೇ ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಈ ವಿಚಾರವಾಗಿ ತಪ್ಪು ಮಾಡುವ ಸರಕಾರವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಬೇಕು ಎಂದಿದ್ದರು. ಅದೇ ರೀತಿ ಚುನಾವಣೆ ಫಲಿತಾಂಶದ ಬಳಿಕ ನಾವೆಲ್ಲರೂ ಕಾವಿ ವಸ್ತ್ರಗಳನ್ನು ಸುತ್ತಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Samayam Tamil 28 May 2019, 2:50 pm
ತಮಿಳು ಸ್ಟಾರ್ ಹೀರೋ 'ದಳಪತಿ' ವಿಜಯ್ ಮನೆಗೆ ತಿರುಪೂರ್ ಬಿಜೆಪಿ ಕಾರ್ಯಕರ್ತರು ಕಾವಿ ವಸ್ತ್ರಗಳನ್ನು ಹೊಂದಿರುವ ಪಾರ್ಸಲ್ ಒಂದನ್ನು ಸೋಮವಾರ ಕಳುಹಿಸಿದ್ದಾರೆ. ವಿಜಯ್ ತಂದೆ, ನಿರ್ದೇಶಕ ಎಸ್ ಎ ಚಂದ್ರಶೇಖರ್ ಇತ್ತೀಚೆಗೆ ಸಿನಿಮಾ ಒಂದರ ಕಾರ್ಯಕ್ರಮದಲ್ಲಿ ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ್ದರು.
Vijaya Karnataka Web vijay


ಸಿನಿಮಾವನ್ನು ಎಂಜಿಆರ್ ಹೊರತುಪಡಿಸಿ ಯಾರೂ ರಕ್ಷಿಸಲಿಲ್ಲ. ಪೈರಸಿ ಮಾಡುವವರಿಗೆ ರಾಜಕೀಯ ಮುಖಂಡರೇ ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಈ ವಿಚಾರವಾಗಿ ತಪ್ಪು ಮಾಡುವ ಸರಕಾರವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಬೇಕು ಎಂದಿದ್ದರು.

ಅದೇ ರೀತಿ ಚುನಾವಣೆ ಫಲಿತಾಂಶದ ಬಳಿಕ ನಾವೆಲ್ಲರೂ ಕಾವಿ ವಸ್ತ್ರಗಳನ್ನು ಸುತ್ತಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಿರುವೂರು ಮೂಲದ ಬಿಜೆಪಿ ಯುವ ಘಟಕದ ಹೆಸರಲ್ಲಿ ಅವರ ಮನೆಗೆ ಒಂದು ಪಾರ್ಸಲ್ ಬಂದಿದೆ. ಅದರಲ್ಲಿ ಕಾವಿ ಪಂಚೆ, ಒಂದು ಪತ್ರವನ್ನು ಕಳುಹಿಸಲಾಗಿದೆ. ಮೊದಲ ಸಲ ಕಾವಿ ಬಟ್ಟೆಯನ್ನು ಕಳುಹಿಸುತ್ತಿದ್ದೇವೆ. ಇನ್ನು ಮುಂದೆ ಇಂತಹ ಬಟ್ಟೆಗಳನ್ನು ಕಳುಹಿಸುತ್ತಲೇ ಇರುತ್ತೇವೆ. ಯಾಕೆಂದರೆ ಇನ್ನು ಮುಂದೆ ನೀವು ಕಾವಿ ಬಟ್ಟೆಗಳನ್ನೇ ಧರಿಸಿ ಓಡಾಡುವ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌