ಆ್ಯಪ್ನಗರ

ಗಿರೀಶ್ ಕಾರ್ನಾಡ್ ನಿಧನಕ್ಕೆ ಟ್ವಿಟರ್‌ನಲ್ಲಿ ಕಂಬನಿ ಮಿಡಿದ ತಾರೆಗಳು

ದಿವ್ಯಾ ದತ್ತ, ಫರಾನ್ ಅಖ್ತರ್, ಪ್ರಣೀತಾ ಸುಭಾಷ್, ಸಿದ್ಧಾರ್ಥ್, ಶಬಾನಾ ಅಜ್ಮಿ, ಕಮಲ್ ಹಾಸನ್ ಸೇರಿದಂತೆ ಹಲವಾರು ಗಣ್ಯರು, ರಾಜಕೀಯ ಮುಖಂಡರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಇಲ್ಲಿವೆ ನೋಡಿ ಗಣ್ಯರ ಟ್ವೀಟ್ ನಮನ.

Vijaya Karnataka Web 10 Jun 2019, 12:48 pm
ನಟ, ನಿರ್ದೇಶಕ, ನಾಟಕರಾರ ಗಿರೀಶ್ ಕಾರ್ನಾಡ್ ನಿಧನಕ್ಕೆ ಹಲವಾರು ತಾರೆಗಳು ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದು, "ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದಿದ್ದಾರೆ.
Vijaya Karnataka Web girish3


ದಿವ್ಯಾ ದತ್ತ, ಫರಾನ್ ಅಖ್ತರ್, ಪ್ರಣೀತಾ ಸುಭಾಷ್, ಸಿದ್ಧಾರ್ಥ್, ಶಬಾನಾ ಅಜ್ಮಿ, ಕಮಲ್ ಹಾಸನ್ ಸೇರಿದಂತೆ ಹಲವಾರು ಗಣ್ಯರು, ರಾಜಕೀಯ ಮುಖಂಡರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಇಲ್ಲಿವೆ ನೋಡಿ ಗಣ್ಯರ ಟ್ವೀಟ್ ನಮನ.


ಕರ್ನಾಟಕದ ಹೆಮ್ಮೆ ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡ್ ಸರ್ ನಿಧನದಿಂದ ದುಃಖಿತಳಾಗಿದ್ದೇನೆ. ಸಿನಿಮಾ, ಸಾಂಸ್ಕೃತಿಕ ಜಗತ್ತು ಹಾಗೂ ರಂಗಭೂಮಿಗೆ ಅವರ ಕೊಡುಗೆ ಅಜರಾಮರ. ಅವರ ಕುಟುಂಬ ಮತ್ತು ಗೆಳೆಯರಿಗೆ ಸಂತಾಪ ಸೂಚಿಸುತ್ತಿದ್ದೇನೆ - ನಟಿ ಪ್ರಣೀತಾ ಸುಭಾಷ್.

ಸುದ್ದಿ ಕೇಳಿ ತುಂಬಾ ದುಃಖಿತಳಾಗಿದ್ದೇನೆ. ಅವರ ಕುಟುಂಬದ ಜತೆಗೆ ಮಾತನಾಡಲು ಸಾಧ್ಯವಾಗಿಲ್ಲ. ನಮ್ಮದ್ದು 43 ವರ್ಷಗಳ ಗೆಳೆತನ, ದುಃಖಿಸಲು ನನಗೆ ಸ್ವಲ್ಪ ಏಕಾಂತ ಬೇಕು. ನನ್ನ ಹೇಳಿಕೆ ಪಡೆಯಲು ದಯವಿಟ್ಟು ಕರೆ ಮಾಡಬೇಡಿ ಎಂದು ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳುತ್ತೇನೆ-ಶಬಾನಾ ಅಜ್ಮಿ.

ಗಿರೀಶ್ ಕಾರ್ನಾಡ್ ಅವರ ಸಾಹಿತ್ಯ ಹಾಗೂ ಅವರು ನನಗೆ ಸ್ಫೂರ್ತಿ. ಬರಹಗಾರರೂ ಆಗಿರುವ ಎಷ್ಟೋ ಮಂದಿ ಅಭಿಮಾನಿಗಳನ್ನು ಅವರು ಬಿಟ್ಟು ಹೋಗಿದ್ದಾರೆ. ಅವರ ಕೆಲಸಗಳು ಪ್ರಾಯಶಃ ಈ ನಷ್ಟವನ್ನು ಸ್ವಲ್ಪವಾದರೂ ತಡೆಯುವಂತಾಗಲಿ- ನಟ ಕಮಲ್ ಹಾಸನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌