ಆ್ಯಪ್ನಗರ

ಕೇರಳ ಪ್ರವಾಹ: ಸೆಲೆಬ್ರಿಟಿಗಳ ಬಗ್ಗೆ ನೆಟ್ಟಿಗರು ಕಿಡಿ

ಪ್ರಕೃತಿ ವಿಕೋಪಕ್ಕೆ ದೇವರ ನಾಡು ಕೇರಳ ತುತ್ತಾಗಿದ್ದು ನೂರಾರು ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ ನಾನಾ ಕಡೆಯಿಂದ ಪರಿಹಾರ ಸಾಮಗ್ರಿ, ಧನ ಸಹಾಯ ಹರಿದುಬರುತ್ತಿದೆ. ಆದರೆ ಕೇವಲ ಟ್ವೀಟ್ ಮಾಡಿ ಸುಮ್ಮನಾಗುತ್ತಿರುವ ಸೆಲೆಬ್ರಿಟಿಗಳ ಬಗ್ಗೆ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ.

Vijaya Karnataka Web 18 Aug 2018, 3:05 pm
ಪ್ರಕೃತಿ ವಿಕೋಪಕ್ಕೆ ದೇವರ ನಾಡು ಕೇರಳ ತುತ್ತಾಗಿದ್ದು ನೂರಾರು ಮಂದಿ ಮೃತಪಟ್ಟಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ ನಾನಾ ಕಡೆಯಿಂದ ಪರಿಹಾರ ಸಾಮಗ್ರಿ, ಧನ ಸಹಾಯ ಹರಿದುಬರುತ್ತಿದೆ. ಆದರೆ ಕೇವಲ ಟ್ವೀಟ್ ಮಾಡಿ ಸುಮ್ಮನಾಗುತ್ತಿರುವ ಸೆಲೆಬ್ರಿಟಿಗಳ ಬಗ್ಗೆ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ.
Vijaya Karnataka Web kerala


ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ, ಆಲ್‌ ರೌಂಡರ್ ಪಾಂಡ್ಯಾ, ಫುಟ್ ಬಾಲ್ ಕ್ಯಾಪ್ಟನ್ ಸುನಿಲ್ ಚೆಟ್ರಿ, ಬಾಲಿವುಡ್ ನಟರಾದ ವಿವೇಕ್ ಒಬೆರಾಯ್, ಅನುಷ್ಕಾ ಶರ್ಮಾ, ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಆರ್ಥಿಕ ನೆರವು ನೀಡದೆ ಕೇವಲ ಟ್ವೀಟ್‌ನಲ್ಲೇ ಮುಗಿಸಿರವ ಬಗ್ಗೆ, ಕೈಲಾದ ಸಹಾಯ ಮಾಡಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿರುವ ಬಗ್ಗೆ ಅವರು ಸಿಟ್ಟಾಗಿದ್ದಾರೆ.


ಇವರಿಗಿಂತಲೂ ಅವರ ಅಭಿಮಾನಿಗಳೇ ಉತ್ತಮ, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಬಟ್ಟೆ, ಅಗತ್ಯ ವಸ್ತು, ಆಹಾರ, ಔಷಧ ಇಲ್ಲದೆ ಕಂಗಾಲಾಗಿರುವ ಕೇರಳ ಜನರಿಗೆ ಬೇಕಾಗಿರುವುದು ಟ್ವೀಟ್ಸ್ ಅಲ್ಲ, ಆರ್ಥಿಕ ಸಹಾಯ ಎಂದು ಸೆಲೆಬ್ರಿಟಿಗಳ ವಿರುದ್ಧ ಕಿಡಿಕಾರಿದ್ದಾರೆ.


ವಿರಾಟ್ ಕೋಹ್ಲಿ ಮಾಡಿದ ಟ್ವೀಟ್‌ಗೆ ಬದಲಾಗಿ ಜವಾಬ್ದಾರಿಯುತವಾಗಿ ಟ್ವೀಟ್ ಮಾಡಿ ಎಂದು ಸೂಚಿಸಿದ್ದಾರೆ. ಇನ್ನೊಬ್ಬರು, "ಪ್ರವಾಹದಿಂದ ಕೇರಳದಲ್ಲಿ ಕಮ್ಯುನಿಕೇಷನ್ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು ನಿಮ್ಮ ಟ್ವೀಟ್ಸ್ ಓದುವ ಪರಿಸ್ಥಿತಿ ಅಲ್ಲಿಲ್ಲ. ದಯವಿಟ್ಟು ಟ್ವೀಟ್ ಅಲ್ಲ ಪರಿಹಾರ ನೀಡಿ" ಎಂದಿದ್ದಾರೆ.


ಇನ್ನು ಅಮಿತಾಬ್ ಟ್ವೀಟ್‌ಗೆ ಅಪಹಾಸ್ಯ ಮಾಡುತ್ತಾ, "ನಾನು ಬಡವನಾದ ಕಾರಣ ಸಹಾಯ ಮಾಡಲು ಆಗುತ್ತಿಲ್ಲ. ಕಪ್ಪು ಹಣ ಸಂಪಾದಿಸಿದ ಹಿರಿಯರು ಸಹಾಯ ಹಸ್ತ ಚಾಚಬಹುದು" ಎಂದು ಪ್ರತಿಕ್ರಿಯಿಸಿದ್ದಾರೆ. "ನಾವು ಹಾಕಿದ್ದೇವೆ. ನೀವು ಮಾಡುವ ಸಹಾಯ ಏನು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ" ಎಂದು ಅಭಿಷೇಕ್ ಬಚ್ಚನ್‌ಗೆ ಒಬ್ಬರನ್ನು ಪ್ರಶ್ನಿಸಿದ್ದಾರೆ. ಈಗಾಗಲೆ ದಕ್ಷಿಣದ ಹಲವಾರು ತಾರೆಗಳು, ಕ್ರೀಡಾಪಟುಗಳು ಆರ್ಥಿಕ ಸಹಾಯ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌