ಆ್ಯಪ್ನಗರ

ಮೈಸೂರಿನಲ್ಲಿ 'ಗೋಪಾಲ'ಕರಿಗೆ ಆಶೀರ್ವದಿಸಿದ ನಟ ದರ್ಶನ್

ನಟ ದರ್ಶನ್ ಇತ್ತೀಚಿಗೆ ಅವರ ಅಪ್ಪ 'ತೂಗುದೀಪ ಶ್ರೀನಿವಾಸ' ಅವರನ್ನು ನೆಸಪಿಸಿಕೊಂಡ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ವಿಷಯಕ್ಕೆ ಸುದ್ಹೌದಿಯಾಗಿದ್ದುದಾರೆ. ಇತ್ತೀಚಿಗೆ ಮೈಸೂರಿನಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಚಾಲನೆ ನೀಡಿದರು.

Vijaya Karnataka Web 11 Feb 2019, 4:37 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ವಿಷಯಕ್ಕೆ ಹೊರತಾಗಿಯೂ ಆಗಾಗ ಸುದ್ದಿಯಾಗುತ್ತಾರೆ. ಇತ್ತೀಚಿಗೆ ಬರೀ ತಮ್ಮ 'ಯಜಮಾನ' ಚಿತ್ರದ ಫಸ್ಟ್ ಲುಕ್, ಟೀಸರ್, ಸಾಂಗ್ಸ್, ಹಾಗೂ ಟ್ರೇಲರ್ ಇವುಗಳಿಗೇ ಹೆಚ್ಚು ಸುದ್ದಿಯಾಗಿದ್ದ ದರ್ಶನ್ ಈಗ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಬಹುಶಃ ಇದು 'ಒಡೆಯ' ಚಿತ್ರದ ವಿಷಯ ಇದ್ದಿರಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.
Vijaya Karnataka Web darshan09


ಈಗ ದಾಸ ದರ್ಶನ್ ಸುದ್ದಿಯಾಗಿದ್ದು ಅವರ ಅಪ್ಪ 'ತೂಗುದೀಪ ಶ್ರೀನಿವಾಸ' ಅವರನ್ನು ನೆಸಪಿಸಿಕೊಂಡ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ವಿಷಯಕ್ಕೆ. ಹೌದು, ಇತ್ತೀಚಿಗೆ ಮೈಸೂರಿನಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಚಾಲನೆ ನೀಡಿದರು.

'ಗೋಪಾಲರ ಸಂಘ' ಮತ್ತು 'ಪಶುಪಾಲನಾ ಇಲಾಖೆ' ವತಿಯಿಂದ ದಿವಂಗತ ತೂಗುದೀಪ ಶ್ರೀನಿವಾಸ್ ಹಾಗೂ ದಿವಂಗತ ಅಂಬರೀಷ್ ಸ್ಮರಣಾರ್ಥ ಸ್ವಲ್ಪ ದಿನಗಳ ಹಿಂದೆ ಸ್ಪರ್ಧಾ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಮೈಸೂರಿನ ಜೆಕೆ ಮೈದಾನದಲ್ಲಿ ನಡೆದ ಈ ಸ್ಪರ್ಧೆಯನ್ನು ತೂಗುದೀಪ ಶ್ರೀನಿವಾಸ್ ಅವರ ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಈ ಸ್ಪರ್ಧೆಯ ಮೊದಲ 5 ಬಹುಮಾನವೂ ಕೂಡ ಬೆಂಗಳೂರಿನ ಪಾಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌