ಆ್ಯಪ್ನಗರ

ವೈರಲ್ ಆಯ್ತು ಸಿದ್ದಗಂಗಾ ಮಠದ ದಾಸೋಹಕ್ಕೆ 'ದಾಸ' ದರ್ಶನ್ ದಾನ

ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗ ಬಾರದು ಅಂತಾರೆ. ಆದರೆ ಕೆಲವೊಮ್ಮೆ ಯಾರೋ ಮಾಡಿದ ದಾನ ಇಡೀ ಜಗತ್ತಿಗೆ ಗೊತ್ತಾಗಿ ಬಿಡುತ್ತದೆ. ಇದೀಗ ದರ್ಶನ್ ಅವರು ಸಿದ್ದಗಂಗಾ ಮಠಕ್ಕೆ ಪ್ರತಿ ತಿಂಗಳು 2 ಕ್ವಿಂಟಾಲ್ ಅಕ್ಕಿ, ತೊಗರಿ ಬೇಳೆ, ಸಕ್ಕರೆ ಕೊಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Vijaya Karnataka Web 25 Jan 2019, 4:13 pm
ಸಾಮಾನ್ಯವಾಗಿ ಸಿನಿಮಾ ತಾರೆಗಳು ತಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಠಕ್ಕೆ ಅಕ್ಕಿ, ಸಕ್ಕರೆ, ಬೇಳೆಯನ್ನು ದಾನ ಮಾಡಿ ಬರುತ್ತಿದ್ದರು. ಆದರೆ ಇದನ್ನು ಅವರು ಪ್ರಚಾರಕ್ಕಾಗಿ ಎಂದೂ ಬಳಸಿಕೊಂಡಿಲ್ಲ. ಸಾಕಷ್ಟು ಮಂದಿ ತಾರೆಗಳ ಈ ಅಳಿಲು ಸೇವೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತಿರುತ್ತದೆ.
Vijaya Karnataka Web darshan1


ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಠಕ್ಕೆ ಪ್ರತಿ ತಿಂಗಳು 2 ಕ್ವಿಂಟಾಲ್ ಅಕ್ಕಿ, ತೊಗರಿ ಬೇಳೆ, ಸಕ್ಕರೆ ಕೊಟ್ಟಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಆದರೆ ದರ್ಶನ್ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.

ಈ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಹರಿದುಬರುತ್ತಿವೆ. "ಹನಿ ಹನಿ ಸೇರಿದರೆ ಹಳ್ಳ ಕಾಳು ಕಾಳು ಸೇರಿದರೆ ರಾಶಿ. ಸೂಪರ್, ದೇವರು ಒಳ್ಳೇದು ಮಾಡಲಿ" ಎಂಬ ಹಾರೈಕೆ, ಮೆಚ್ಚುಗೆ ಅಭಿಮಾನಿಗಳಿಂದ ಹರಿದುಬರುತ್ತಿದೆ. ಫೇಸ್‌ಬುಕ್‌ನಲ್ಲಿ ಹಾಕಿರುವ ಈ ಪೋಸ್ಟ್‌ ಇದುವರೆಗೆ 2 ಸಾವಿರಕ್ಕೂ ಹೆಚ್ಚು ಷೇರ್ ಆಗಿದೆ.

ಸದ್ಯಕ್ಕೆ ದರ್ಶನ್ ಅವರು ಯಜಮಾನ, ಕುರುಕ್ಷೇತ್ರ, ಒಡೆಯ, ರಾಬರ್ಟ್ಸ್ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌